ಮಧ್ಯಪ್ರದೇಶದ ಪನ್ನಾದ ಅಕ್ರಮ, ಓಪನ್ ಕಾಸ್ಟ್ ಗಣಿಗಳಲ್ಲಿ ಮತ್ತು ಅದರ ಸುತ್ತಲಿನ ಕೆಲವು ಹುಲಿ ಸಂರಕ್ಷಿತ ಪ್ರದೇಶ ಮತ್ತು ಪಕ್ಕದ ಅರಣ್ಯಗಳ ಅಡಿಯಲ್ಲಿ ಬರುತ್ತವೆ, ಇಲ್ಲಿ ಜನರು, ಯುವಕರು ಮತ್ತು ಹಿರಿಯರು ತಮ್ಮ ಅದೃಷ್ಟವನ್ನು ಬದಲಾಯಿಸುವ ಕಲ್ಲಿನ ಹುಡುಕಾಟದಲ್ಲಿ ತೊಡಗಿದ್ದಾರೆ.

ಇಲ್ಲಿನ ವಜ್ರದ ಗಣಿಗಳಲ್ಲಿ ಮರಳು ಮತ್ತು ಮಣ್ಣಿನಲ್ಲಿ ವಜ್ರದ ಹರಳುಗಳನ್ನು ಹುಡುಕುವ ಪೋಷಕರೊಂದಿಗೆ ಅವರ ಮಕ್ಕಳೂ ಇರುತ್ತಾರೆ. ಈ ಮಕ್ಕಳು ಬಹುತೇಕ ಗೊಂಡ ಸಮುದಾಯಕ್ಕೆ ಸೇರಿದವರು. (ಈ ಸಮುದಾಯವನ್ನು ರಾಜ್ಯದಲ್ಲಿ ಪರಿಶಿಷ್ಟ ಪಂಗಡ ಎಂದು ಪಟ್ಟಿ ಮಾಡಲಾಗಿದೆ)

“ಒಂದು ವೇಳೆ ನನಗೆ ವಜ್ರ ಸಿಕ್ಕರೆ ನಾನು ಅದನ್ನು ನನ್ನ ಮುಂದಿನ ಓದಿನ ಖರ್ಚಿಗೆ ಬಳಸಿಕೊಳ್ಳಬಹುದು” ಎನ್ನುತ್ತದೆ ಅವರಲ್ಲೊಬ್ಬ ಮಗು.

ಬಾಲ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ತಿದ್ದುಪಡಿ ಕಾಯ್ದೆ ( 2016 ) ಗಣಿ ಉದ್ಯಮದಲ್ಲಿ ಮಕ್ಕಳು (14 ವರ್ಷಕ್ಕಿಂತ ಕೆಳಗಿನವರು) ಮತ್ತು ಹದಿಹರೆಯದವರನ್ನು (18 ವರ್ಷಕ್ಕಿಂತ ಕೆಳಗಿನವರು) ನೇಮಿಸಿಕೊಳ್ಳುವುದಕ್ಕೆ ನಿಷೇಧವನ್ನು ಹೇರಿದೆ.

ಇಲ್ಲಂದ ಸರಿಸುಮಾರು 300 ಕಿಲೋಮೀಟರ್ ದೂರದ ಉತ್ತರ ಪ್ರದೇಶದ ಮಿರ್ಜಾಪುರದ ಮಕ್ಕಳು ಸಹ ತಮ್ಮ ಪೋಷಕರೊಂದಿಗೆ ಇಲ್ಲಿಎ ಕೆಲಸಕ್ಕೆ ಬರುತ್ತಾರೆ. ಇಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತದೆ. ಅಂಚಿನಲ್ಲಿರುವ ಸಮುದಾಯಗಳಿಗೆ ಸೇರಿದ ಈ ಹಲವು ಕುಟುಂಬಗಳು ಗಣಿಗಳ ಸಮೀಪದಲ್ಲೇ ವಾಸಿಸುತ್ತವೆ. ಇದು ಅವರ ಬದುಕಿಗೆ ಅಪಾಯಕಾರಿಯಾಗಿ ಪರಿಣಮಿಸಬಲ್ಲದು.

"ನನ್ನ ಮನೆ ಈ ಗಣಿ ಹಿಂದೆ ಇದೆ" ಹುಡುಗಿಯರಲ್ಲಿ ಒಬ್ಬಳು ಹೇಳುತ್ತಾಳೆ, "ಇಲ್ಲಿ ದಿನಕ್ಕೆ ಐದು ಸ್ಫೋಟಗಳು ನಡೆಯುತ್ತವೆ. [ಒಂದು ದಿನ] ಒಂದು ದೊಡ್ಡ ಬಂಡೆಯ ಚೂರು ಬಿದ್ದು [ಮನೆಯ] ನಾಲ್ಕೂ ಗೋಡೆಗಳು ಬಿರುಕುಬಿಟ್ಟವು”

ಈ ಕಿರುಚಿತ್ರವು ಗಣಿಗಳಲ್ಲಿ ದುಡಿಯುವ ಲೆಕ್ಕಕ್ಕೆ ಸಿಗದ ಬಾಲ ಕಾರ್ಮಿಕರ ಕುರಿತು ಮಾತನಾಡುತ್ತದೆ. ಈ ಕೆಲಸದಿಂದದಾಗಿ ಈ ಮಕ್ಕಳು ಶಾಲೆಯಿಂದ ಹೊರಗುಳಿದು ತಮ್ಮ ಶಿಕ್ಷಣದ ಹಕ್ಕಿನಿಂದ ವಂಚಿತರಾಗುತ್ತಿದ್ದಾರೆ.

ವೀಕ್ಷಿಸಿ: ಗಣಿಯ ಮಕ್ಕಳು

ಅನುವಾದ: ಶಂಕರ ಎನ್ ಕೆಂಚನೂರು

Kavita Carneiro

Kavita Carneiro is an independent filmmaker based out of Pune who has been making social-impact films for the last decade. Her films include a feature-length documentary on rugby players called Zaffar & Tudu and her latest film, Kaleshwaram,  focuses on the world's largest lift irrigation project.

Other stories by Kavita Carneiro
Text Editor : Sarbajaya Bhattacharya

Sarbajaya Bhattacharya is a Senior Assistant Editor at PARI. She is an experienced Bangla translator. Based in Kolkata, she is interested in the history of the city and travel literature.

Other stories by Sarbajaya Bhattacharya
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru