“ಒಂದು ದೇಶ ಅಥವಾ ಭಾಷೆ ಅಥವಾ ಧರ್ಮದ ಇತಿಹಾಸವು ರಾಜರು, ಮುಖ್ಯಸ್ಥರು ಮತ್ತು ನಾಯಕರ ಕ್ರಿಯೆಗಳಿಂದ ತುಂಬಿರುತ್ತದೆ. ಅಲ್ಲಿ ಜನಸಾಮಾನ್ಯರಿಗೆ ಹೆಚ್ಚು ಸ್ಥಳವಿರುವುದಿಲ್ಲ. ಆದರೂ ಅವರಿಲ್ಲದೆ ಇತಿಹಾಸಕ್ಕೆ ಅಸ್ತಿತ್ವವಿಲ್ಲ. ಜನರು ರಾಷ್ಟ್ರಗಳನ್ನು ನಿರ್ಮಿಸುತ್ತಾರೆ, ಭಾಷೆಗಳನ್ನು ಸೃಷ್ಟಿಸುತ್ತಾರೆ ಮತ್ತು ಧರ್ಮಗಳನ್ನು ಜನಪ್ರಿಯಗೊಳಿಸುತ್ತಾರೆ. ಆದರೆ ಸಮಯ ಕಳೆದಂತೆ ಪ್ರಬಲ ಗಣ್ಯರು ಅದನ್ನು ಸ್ವಾಧೀನಪಡಿಸಿಕೊಳ್ಳಲು ಬರುತ್ತಾರೆ", ಎಂದು ಈಗ ಕುನೊ ರಾಷ್ಟ್ರೀಯ ಉದ್ಯಾನವನದ ಅಂಚಿನಲ್ಲಿ ವಾಸಿಸುವ ಮೆರಾಜುದ್ದೀನ್ ಹೇಳುತ್ತಾರೆ. ಉದ್ಯಾನದ ಸುತ್ತಮುತ್ತಲಿನ ಸಮುದಾಯಗಳೊಂದಿಗೆ ನಿಕಟವಾಗಿ ಕೆಲಸ ಮಾಡಿದ ಅವರು ಕಾಡಿನ ಜನರ ಹಕ್ಕುಗಳನ್ನು ಅಧಿಕಾರವು ಕಸಿಯುವುದಕ್ಕೆ ಸಾಕ್ಷಿಯಾಗಿದ್ದಾರೆ ಮತ್ತು ಅವರ ನೋವನ್ನು ತಮ್ಮದಾಗಿಸಿಕೊಂಡು ಅವುಗಳನ್ನು ಕವಿತೆಗಳಲ್ಲಿ ವ್ಯಕ್ತಪಡಿಸಿದ್ದಾರೆ.

ಮೆರಾಜುದ್ದೀನ್ ಸೈಯದ್ ಅವರ ದನಿಯಲ್ಲಿ ಕವಿತೆಯ ಉರ್ದು ಅವತರಣಿಕೆಯನ್ನು ಆಲಿಸಿ

ಪ್ರತಿಷ್ಠಾ ಪಾಂಡ್ಯ ದನಿಯಲ್ಲಿ ಕವಿತೆಯ ಇಂಗ್ಲಿಷ್‌ ಅನುವಾದವನ್ನು ಆಲಿಸಿ

ಕೇಳಿ, ನಾನಿನ್ನೂ ಬದುಕಿದ್ದೇನೆ

ಮಸೀದಿ ಮತ್ತು ಮಂದಿರ ಕಟ್ಟಿದ ದೊರೆಗಳೇ!
ದೇಶ ಮತ್ತು ಭಾಷೆಗಳ ನಾಯಕರೇ!
ಕೇಳಿ, ನಾನಿನ್ನೂ ಬದುಕಿದ್ದೇನೆ, ನನ್ನ ದನಿ ಕೇಳಿಸಿಕೊಳ್ಳಿ.

ಓ ಕಿರೀಟ ಹೊತ್ತವರೇ, ಮಧ್ಯಪಂಥೀಯರೇ
ನಿಮಗೆ ಮರೆತು ಹೋಗಿದೆ ಈಗ
ನ್ಯಾಯವೆಂದರೇನೆಂದು, ರಕ್ಷಕರಾಗುವುದೆಂದರೇನೆಂದು
ಕಾಗದದ ನೋಟುಗಳ ಮೇಲೆ ಮುಖ ಬೆಲೆ ಬರೆಯುತ್ತೀರಿ
ಮನುಷ್ಯರ ಬೆಲೆಯನ್ನೇ ಮರೆತು ಕುಳಿತಿದ್ದೀರಿ
ನೆನಪಿರಲಿ ನಿಮಗೆ, ನಾನಿನ್ನೂ ಜೀವಂತವಿದ್ದೇನೆ.

ನನಗೆ ಗೊತ್ತು ನನಗೆ ಬಲವಿಲ್ಲ
ನಾನು ಸೋತಿದ್ದೇನೆ.
ನನ್ನ ಬತ್ತಿ ಹೋದ ನರ-ನಾಡಿಗಳಲ್ಲಿ
ಒಂದು ಹನಿಯಷ್ಟೂ ನೀರಿಲ್ಲ.
ಆದರೆ ನೆನಪಿರಲಿ ನಾನಿನ್ನೂ ಉಸಿರಾಡುತ್ತಿದ್ದೇನೆ
ಬರೆದುಕೊಳ್ಳಿ ನಾನಿನ್ನೂ ಬದುಕಿದ್ದೇನೆ.

ಸರಿ ತಪ್ಪುಗಳ ನಿರ್ಣಯಿಸುವ ದೊರೆಗಳೇ ಕೇಳಿ
ಲೇಖನಿ ಹಿಡಿದ ಬುದ್ಧಿಜೀವಿಗಳೇ
“ನನಗೆ ಗೊತ್ತು ನನಗೆ ಗೊತ್ತು”
ಎನ್ನುವ ನಿಮ್ಮ ಅರಚಾಟ ನಿಲ್ಲಿಸಿ
ನೀವು ಹಣದಾಸೆಯ ನಯವಂಚಕರೆನ್ನುವುದು ನನಗೆ ಗೊತ್ತು.
ನಿಮ್ಮ ಈ ಶೋಕಾಚರಣೆಯನ್ನು ನಿಲ್ಲಿಸಿ
ನಾನಿನ್ನೂ ಜೀವಂತವಿದ್ದೇನೆ
ಕೇಳಿ, ನಾನಿಲ್ಲಿದ್ದೇನೆ, ನಾನಿನ್ನೂ ಬದುಕಿದ್ದೇನೆ

ನಿಮ್ಮನ್ನು ರಾಜನನ್ನಾಗಿಸಿದ
ನಿಮ್ಮ ಆಟಾಟೋಪಗಳಿಗೆ ಅನುಮತಿಯಿತ್ತ
ವಿತ್ತ ನೀತಿಗಳನ್ನು ಯಾರು ಬರೆದರು?
ಯಾರು ಬರೆದರು ರಾಜನೀತಿಗಳನ್ನು?
ಈಗ ಬರೆಯಿರಿ ಅದನ್ನು, ನಾನಿನ್ನೂ ಬದುಕಿದ್ದೇನೆ.
ಕೇಳಿ, ನಾನಿಲ್ಲಿದ್ದೇನೆ, ನಾನಿನ್ನೂ ಬದುಕಿದ್ದೇನೆ.

ನೀವು ಧಾರ್ಮಿಕ ನಾಯಕರಿರಬಹುದು,
ಆದರೆ ಪ್ರವಾದಿ ನನ್ನವರು ಮತ್ತು ಕಾಬಾ ನನಗೆ ಸೇರಿದ್ದು.
ದೇವಸ್ಥಾನ ನನ್ನದು, ಮತ್ತು ದೇವರೂ ನನ್ನವ
ಗುರುದ್ವಾರಗಳು ನನ್ನದು ಮತ್ತು ಚರ್ಚುಗಳು ನನ್ನದು.
ಇಲ್ಲಿಂದ ಹೊರಡಿ ನೀವು, ನಾನಿನ್ನೂ ಬದುಕಿದ್ದೇನೆ!
ಕೇಳಿ, ನಾನಿಲ್ಲಿದ್ದೇನೆ, ನಾನಿನ್ನೂ ಬದುಕಿದ್ದೇನೆ

ಹೋಗಿ ಹೇಳಿ ನಿಮ್ಮ ರಾಜನಿಗೆ,
ಭೂ ಮಾಲಕನಿಗೆ, ಮಂತ್ರಿಗಳಿಗೆ
ಜನರ ನಡುವೆ ಸಂಘರ್ಷ ತಂದಿಕ್ಕುವವರಿಗೆ
ಹೇಳಿ ಹೋಗಿ ಆ ರಾಜಕಾರಣಿಗಳಿಗೆ
ನಾನು ಇಲ್ಲೇ ಇದ್ದೇನೆ, ಇನ್ನೂ ಬದುಕಿದ್ದೇನೆ ಎಂದು.
ಕೇಳಿ, ನಾನಿಲ್ಲಿದ್ದೇನೆ, ನಾನಿನ್ನೂ ಬದುಕಿದ್ದೇನೆ

(original)  سن لو کہ ابھی میں زندہ ہوں

اے دیر و حرم کے مختارو
اے ملک و زباں کے سردارو
سن لو کہ ابھی میں زندہ ہوں

اے تاج بسر میزان بکف
تم عدل و حمایت بھول گئے
کاغذ کی رسیدوں میں لکھ کر
انسان کی قیمت بھول گئے
لکھو کہ ابھی میں زندہ ہوں

سن لو کہ ابھی میں زندہ ہوں

مانا کہ طبیعت بھاری ہے
اور بھوک بدن پر طاری ہے
پانی بھی نہیں شریانوں میں
پر سانس ابھی تک جاری ہے
سنبھلو کہ ابھی میں زندہ ہوں

سن لو کہ ابھی میں زندہ ہوں

اے شاہ سخن فرزانہ قلم
یہ شورش دانم بند کرو
روتے بھی ہو تم پیسوں کے لیے
رہنے دو یہ ماتم بند کرو
بخشو کہ ابھی میں زندہ ہوں

سن لو کہ ابھی میں زندہ ہوں

آئین معیشت کس نے لکھے
آداب سیاست کس نے لکھے
ہے جن میں تمہاری آغائی
وہ باب شریعت کس نے لکھے
لکھو کہ ابھی میں زندہ ہوں

سن لو کہ ابھی میں زندہ ہوں

اے پند گران دین و دھرم
پیغمبر و کعبہ میرے ہیں
مندر بھی مرے بھگوان مرے
گرودوارے کلیسا میرے ہیں
نکلو کہ ابھی میں زندہ ہوں

سن لو کہ ابھی میں زندہ ہوں

کہہ دو جا کر سلطانوں سے
زرداروں سے ایوانوں سے
پیکار تمدّن کے حامی
بے ننگ سیاست دانوں سے
کہہ دو کہ ابھی میں زندہ ہوں

سن لو کہ ابھی میں زندہ ہوں

ಅನುವಾದ: ಶಂಕರ. ಎನ್. ಕೆಂಚನೂರು

Poem and Text : Syed Merajuddin

ସଇଦ ମେରାଜୁଦ୍ଦିନ ଜଣେ କବି ଓ ଶିକ୍ଷକ। ସେ ମଧ୍ୟପ୍ରଦେଶର ଅଗରାରେ ରହନ୍ତି ଓ ଆଧାରଶିଳା ଶିକ୍ଷା ସମିତି ନାମକ ଅନୁଷ୍ଠାନର ଯୁଗ୍ମ ପ୍ରତିଷ୍ଠାତା ଓ ସମ୍ପାଦକ। ଏହି ଅନୁଷ୍ଠାନ ପକ୍ଷରୁ କୁନୋ ଜାତୀୟ ଅଭୟାରଣ୍ୟର ଦଳିତ ଓ ଆଦିବାସୀ ସମ୍ପ୍ରଦାୟର ବିସ୍ଥାପିତ ଶିଶୁମାନଙ୍କ ପାଇଁ ଗୋଟିଏ ଉଚ୍ଚ ମାଧ୍ୟମିକ ବିଦ୍ୟାଳୟ ସ୍ଥାପନ ଓ ସଂଚାଳନ କରାଯାଉଛି। ସେ ସମ୍ପ୍ରତି କୁନୋ ଜାତୀୟ ଅଭୟାରଣ୍ୟର ସୀମା ନିକଟରେ ରହୁଛନ୍ତି।

ଏହାଙ୍କ ଲିଖିତ ଅନ୍ୟ ବିଷୟଗୁଡିକ Syed Merajuddin
Illustration : Labani Jangi

ଲାବଣୀ ଜାଙ୍ଗୀ ୨୦୨୦ର ଜଣେ ପରୀ ଫେଲୋ ଏବଂ ପଶ୍ଚିମବଙ୍ଗ ନଦିଆରେ ରହୁଥିବା ଜଣେ ସ୍ୱ-ପ୍ରଶିକ୍ଷିତ ଚିତ୍ରକର। ସେ କୋଲକାତାସ୍ଥିତ ସେଣ୍ଟର ଫର ଷ୍ଟଡିଜ୍‌ ଇନ୍‌ ସୋସିଆଲ ସାଇନ୍ସେସ୍‌ରେ ଶ୍ରମିକ ପ୍ରବାସ ଉପରେ ପିଏଚଡି କରୁଛନ୍ତି।

ଏହାଙ୍କ ଲିଖିତ ଅନ୍ୟ ବିଷୟଗୁଡିକ Labani Jangi
Editor : PARI Desk

ପରୀ ସମ୍ପାଦକୀୟ ବିଭାଗ ଆମ ସମ୍ପାଦନା କାର୍ଯ୍ୟର ପ୍ରମୁଖ କେନ୍ଦ୍ର। ସାରା ଦେଶରେ ଥିବା ଖବରଦାତା, ଗବେଷକ, ଫଟୋଗ୍ରାଫର, ଚଳଚ୍ଚିତ୍ର ନିର୍ମାତା ଓ ଅନୁବାଦକଙ୍କ ସହିତ ସମ୍ପାଦକୀୟ ଦଳ କାର୍ଯ୍ୟ କରିଥାଏ। ସମ୍ପାଦକୀୟ ବିଭାଗ ପରୀ ଦ୍ୱାରା ପ୍ରକାଶିତ ଲେଖା, ଭିଡିଓ, ଅଡିଓ ଏବଂ ଗବେଷଣା ରିପୋର୍ଟର ପ୍ରଯୋଜନା ଓ ପ୍ରକାଶନକୁ ପରିଚାଳନା କରିଥାଏ।

ଏହାଙ୍କ ଲିଖିତ ଅନ୍ୟ ବିଷୟଗୁଡିକ PARI Desk
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

ଏହାଙ୍କ ଲିଖିତ ଅନ୍ୟ ବିଷୟଗୁଡିକ Shankar N. Kenchanuru