ಶೈಲ ನೃತ್ಯವು ಛತ್ತೀಸಗಢದ ಸರ್ಗುಜಾ ಮತ್ತು ಜಶ್ಪುರ್ ಜಿಲ್ಲೆಗಳಲ್ಲಿ ಜನಪ್ರಿಯ ಜಾನಪದ ಕುಣಿತವಾಗಿದೆ. ರಾಜ್ವಾಡೆ, ಯಾದವ್, ನಾಯಕ್, ಮಾಣಿಕ್ಪುರಿ ಸಮುದಾಯಗಳ ಸದಸ್ಯರು ಈ ನೃತ್ಯವನ್ನು ಪ್ರದರ್ಶಿಸುತ್ತಾರೆ. “ಛತ್ತೀಸಗಢ ಮತ್ತು ಒಡಿಶಾದ ಉಳಿದ ಭಾಗಗಳಲ್ಲಿ ಛೆರ್ಛೇರಾ ಎಂದೂ ಕರೆಯಲ್ಪಡುವ ಈ ನೃತ್ಯವನ್ನು ನಾವು ಶೇಟ್ ಹಬ್ಬದ ದಿನದಿಂದ ಆರಂಭಿಸುತ್ತೇವೆ” ಎಂದು ಸುರ್ಗುಜಾ ಜಿಲ್ಲೆಯ ಲಹಪಾತ್ರ ಗ್ರಾಮದ ಕೃಷ್ಣ ಕುಮಾರ್ ರಾಜ್ವಾಡೆ ಹೇಳುತ್ತಾರೆ.

ಛತ್ತೀಸಗಢದ ರಾಜಧಾನಿ ರಾಯ್ಪುರದಲ್ಲಿ ನಡೆಯುತ್ತಿದ್ದ ಸರ್ಕಾರಿ ಪ್ರಾಯೋಜಿತ ಕರಕುಶಲ ಉತ್ಸವದಲ್ಲಿ ಪ್ರದರ್ಶನ ನೀಡಲು 15 ಜನ ಶೈಲ ನೃತ್ಯ ನೃತ್ಯಗಾರರ ಗುಂಪೊಂದು ಬಂದಿತ್ತು. ಅವರಲ್ಲಿ ಕೃಷ್ಣ ಕುಮಾರ್ ಕೂಡ ಒಬ್ಬರು.

ಈ ನೃತ್ಯವು ವರ್ಣರಂಜಿತವಾಗಿದ್ದ, ನರ್ತಕರು ಗಾಢ ಬಣ್ಣದ ಬಟ್ಟೆಗಳನ್ನು ಧರಿಸುತ್ತಾರೆ, ಅಲಂಕರಿಸಿದ ಪೇಟಗಳನ್ನು ಧರಿಸುತ್ತಾರೆ ಮತ್ತು ಕೈಯಲ್ಲಿ ಕೋಲುಗಳನ್ನು ಹಿಡಿದಿರುತ್ತಾರೆ. ಈ ನೃತ್ಯದಲ್ಲಿ ಬಳಸುವ ಸಂಗೀತ ವಾದ್ಯಗಳೆಂದರೆ ಕೊಳಲು, ಮಂದರ್, ಮಹುರಿ ಮತ್ತು ಝಾಲ್.

ಈ ಪ್ರಕಾರದಲ್ಲಿ ಕೇವಲ ಗಂಡಸರು ಮಾತ್ರವೇ ನರ್ತಿಸುತ್ತಾರೆ ಮತ್ತು ಅವರಲ್ಲಿ ಕೆಲವರು ತಮ್ಮ ಉಡುಪುಗಳಿಗೆ ನವಿಲುಗರಿಗಳನ್ನು ಸಿಕ್ಕಿಸಿಕೊಂಡಿರುತ್ತಾರೆ. ಇದು ನವಿಲು ಹಿಂಡು ಕುಣಿಯುತ್ತಿರುವ ಭಾವವನ್ನು ನೋಡುಗರಲ್ಲಿ ಹುಟ್ಟಿಸುತ್ತದೆ.

ಛತ್ತೀಸಗಢವು ಆದಿವಾಸಿಗಳೇ ಪ್ರಧಾನವಾಗಿರುವ ರಾಜ್ಯವಾಗಿದ್ದು, ಇಲ್ಲಿನ ಜನರು ಬಹುತೇಕ ಕೃಷಿಯ ಮೇಲೆ ಅವಲಂಬಿತರಾಗಿದ್ದಾರೆ. ಈ ಸಂಗತಿಗಳು ಈ ಪ್ರದೇಶದ ಸಂಗೀತ ಮತ್ತು ಕುಣಿತಗಳಲ್ಲಿ ಪ್ರತಿಫಲಿಸುತ್ತವೆ. ಕೊಯ್ಲು ಮುಗಿದ ನಂತರ ಇಲ್ಲಿನ ಜನರು ಹಳ್ಳಿಗಳಲ್ಲಿ ನೃತ್ಯವನ್ನು ಆನಂದಿಸುತ್ತಾರೆ ಮತ್ತು ಊರಿಂದೂರಿಗೆ ಹೋಗಿ ಪ್ರದರ್ಶನಗಳನ್ನು ನೀಡುತ್ತಾರೆ.

ವಿಡಿಯೋ ನೋಡಿ: ಛತ್ತೀಸಗಢದ ಶೈಲ ನೃತ್ಯ

ಅನುವಾದ: ಶಂಕರ. ಎನ್. ಕೆಂಚನೂರು

Purusottam Thakur

புருஷோத்தம் தாகூர், 2015ல் பாரியின் நல்கையைப் பெற்றவர். அவர் ஒரு ஊடகவியலாளர் மற்றும் ஆவணப்பட இயக்குநர். தற்போது அஸிஸ் பிரேம்ஜி அமைப்பில் வேலைப் பார்க்கிறார். சமூக மாற்றத்துக்கான கட்டுரைகளை எழுதுகிறார்.

Other stories by Purusottam Thakur
Editor : PARI Desk

பாரி டெஸ்க், எங்களின் ஆசிரியப் பணிக்கு மையமாக இருக்கிறது. இக்குழு, நாடு முழுவதும் இருக்கிற செய்தியாளர்கள், ஆய்வாளர்கள், புகைப்படக் கலைஞர்கள், பட இயக்குநர்கள் மற்றும் மொழிபெயர்ப்பாளர்களுடன் இணைந்து இயங்குகிறது. பாரி பதிப்பிக்கும் எழுத்துகள், காணொளி, ஒலி மற்றும் ஆய்வு அறிக்கைகள் ஆகியவற்றை அது மேற்பார்வையிட்டு கையாளுகிறது.

Other stories by PARI Desk
Video Editor : Shreya Katyayini

ஷ்ரேயா காத்யாயினி பாரியின் காணொளி ஒருங்கிணைப்பாளராகவும் ஆவணப்பட இயக்குநராகவும் இருக்கிறார். பாரியின் ஓவியராகவும் இருக்கிறார்.

Other stories by Shreya Katyayini
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru