ಮಧ್ಯಪ್ರದೇಶದ ಪನ್ನಾದ ಅಕ್ರಮ, ಓಪನ್ ಕಾಸ್ಟ್ ಗಣಿಗಳಲ್ಲಿ ಮತ್ತು ಅದರ ಸುತ್ತಲಿನ ಕೆಲವು ಹುಲಿ ಸಂರಕ್ಷಿತ ಪ್ರದೇಶ ಮತ್ತು ಪಕ್ಕದ ಅರಣ್ಯಗಳ ಅಡಿಯಲ್ಲಿ ಬರುತ್ತವೆ, ಇಲ್ಲಿ ಜನರು, ಯುವಕರು ಮತ್ತು ಹಿರಿಯರು ತಮ್ಮ ಅದೃಷ್ಟವನ್ನು ಬದಲಾಯಿಸುವ ಕಲ್ಲಿನ ಹುಡುಕಾಟದಲ್ಲಿ ತೊಡಗಿದ್ದಾರೆ.

ಇಲ್ಲಿನ ವಜ್ರದ ಗಣಿಗಳಲ್ಲಿ ಮರಳು ಮತ್ತು ಮಣ್ಣಿನಲ್ಲಿ ವಜ್ರದ ಹರಳುಗಳನ್ನು ಹುಡುಕುವ ಪೋಷಕರೊಂದಿಗೆ ಅವರ ಮಕ್ಕಳೂ ಇರುತ್ತಾರೆ. ಈ ಮಕ್ಕಳು ಬಹುತೇಕ ಗೊಂಡ ಸಮುದಾಯಕ್ಕೆ ಸೇರಿದವರು. (ಈ ಸಮುದಾಯವನ್ನು ರಾಜ್ಯದಲ್ಲಿ ಪರಿಶಿಷ್ಟ ಪಂಗಡ ಎಂದು ಪಟ್ಟಿ ಮಾಡಲಾಗಿದೆ)

“ಒಂದು ವೇಳೆ ನನಗೆ ವಜ್ರ ಸಿಕ್ಕರೆ ನಾನು ಅದನ್ನು ನನ್ನ ಮುಂದಿನ ಓದಿನ ಖರ್ಚಿಗೆ ಬಳಸಿಕೊಳ್ಳಬಹುದು” ಎನ್ನುತ್ತದೆ ಅವರಲ್ಲೊಬ್ಬ ಮಗು.

ಬಾಲ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ತಿದ್ದುಪಡಿ ಕಾಯ್ದೆ ( 2016 ) ಗಣಿ ಉದ್ಯಮದಲ್ಲಿ ಮಕ್ಕಳು (14 ವರ್ಷಕ್ಕಿಂತ ಕೆಳಗಿನವರು) ಮತ್ತು ಹದಿಹರೆಯದವರನ್ನು (18 ವರ್ಷಕ್ಕಿಂತ ಕೆಳಗಿನವರು) ನೇಮಿಸಿಕೊಳ್ಳುವುದಕ್ಕೆ ನಿಷೇಧವನ್ನು ಹೇರಿದೆ.

ಇಲ್ಲಂದ ಸರಿಸುಮಾರು 300 ಕಿಲೋಮೀಟರ್ ದೂರದ ಉತ್ತರ ಪ್ರದೇಶದ ಮಿರ್ಜಾಪುರದ ಮಕ್ಕಳು ಸಹ ತಮ್ಮ ಪೋಷಕರೊಂದಿಗೆ ಇಲ್ಲಿಎ ಕೆಲಸಕ್ಕೆ ಬರುತ್ತಾರೆ. ಇಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತದೆ. ಅಂಚಿನಲ್ಲಿರುವ ಸಮುದಾಯಗಳಿಗೆ ಸೇರಿದ ಈ ಹಲವು ಕುಟುಂಬಗಳು ಗಣಿಗಳ ಸಮೀಪದಲ್ಲೇ ವಾಸಿಸುತ್ತವೆ. ಇದು ಅವರ ಬದುಕಿಗೆ ಅಪಾಯಕಾರಿಯಾಗಿ ಪರಿಣಮಿಸಬಲ್ಲದು.

"ನನ್ನ ಮನೆ ಈ ಗಣಿ ಹಿಂದೆ ಇದೆ" ಹುಡುಗಿಯರಲ್ಲಿ ಒಬ್ಬಳು ಹೇಳುತ್ತಾಳೆ, "ಇಲ್ಲಿ ದಿನಕ್ಕೆ ಐದು ಸ್ಫೋಟಗಳು ನಡೆಯುತ್ತವೆ. [ಒಂದು ದಿನ] ಒಂದು ದೊಡ್ಡ ಬಂಡೆಯ ಚೂರು ಬಿದ್ದು [ಮನೆಯ] ನಾಲ್ಕೂ ಗೋಡೆಗಳು ಬಿರುಕುಬಿಟ್ಟವು”

ಈ ಕಿರುಚಿತ್ರವು ಗಣಿಗಳಲ್ಲಿ ದುಡಿಯುವ ಲೆಕ್ಕಕ್ಕೆ ಸಿಗದ ಬಾಲ ಕಾರ್ಮಿಕರ ಕುರಿತು ಮಾತನಾಡುತ್ತದೆ. ಈ ಕೆಲಸದಿಂದದಾಗಿ ಈ ಮಕ್ಕಳು ಶಾಲೆಯಿಂದ ಹೊರಗುಳಿದು ತಮ್ಮ ಶಿಕ್ಷಣದ ಹಕ್ಕಿನಿಂದ ವಂಚಿತರಾಗುತ್ತಿದ್ದಾರೆ.

ವೀಕ್ಷಿಸಿ: ಗಣಿಯ ಮಕ್ಕಳು

ಅನುವಾದ: ಶಂಕರ ಎನ್ ಕೆಂಚನೂರು

Kavita Carneiro

கவிதா கார்னெய்ரோ புனேவை சேர்ந்த ஒரு சுயாதீன ஆவணப்பட இயக்குநர். கடந்த பத்தாண்டுகளாக சமூக தாக்கம் ஏற்படுத்தும் படங்களை எடுத்து வருகிறார். ரக்பி விளையாட்டு வீரர்கள் பற்றிய ஜஃப்ஃபர் & டுடு படமும் உலகின் பெரும் நீர்ப்பாசன திட்டத்தை வைத்து எடுக்கப்பட்ட காலேஷ்வரம் என்கிற படமும் முக்கியமானவை.

Other stories by Kavita Carneiro
Text Editor : Sarbajaya Bhattacharya

சர்பாஜயா பட்டாச்சார்யா பாரியின் மூத்த உதவி ஆசிரியர் ஆவார். அனுபவம் வாய்ந்த வங்க மொழிபெயர்ப்பாளர். கொல்கத்தாவை சேர்ந்த அவர், அந்த நகரத்தின் வரலாற்றிலும் பயண இலக்கியத்திலும் ஆர்வம் கொண்டவர்.

Other stories by Sarbajaya Bhattacharya
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru