ಈಗಿನೂ ಮೂವತ್ತರ ಪ್ರಾಯಕ್ಕೆ ಸನಿಹದಲ್ಲಿರುವ ಗಣೇಶ್ ಪಂಡಿತ್ ಅವರು ಹೊಸ ದೆಹಲಿಯ ಯಮುನಾ ಸೇತುವೆ ಬಳಿಯ ಲೋಹಾ ಪುಲ್ ಎನ್ನುವ ಪ್ರದೇಶದ ಅತ್ಯಂತ ಕಿರಿಯ ನಿವಾಸಿ ಎನ್ನಬಹುದು. ಅವರು ಇಂದಿನ ಯುವಕರು ಚಾಂದಿನಿ ಚೌಕ್ ಬಳಿ ಈಜು ತರಬೇತಿದಾರರಾಗಿ, ರೀಟೇಲ್ ಅಂಗಡಿಗಳಲ್ಲಿ ಸಹಾಯಕರಾಗಿ ಕೆಲಸ ಮಾಡುವುದು ಮೊದಲಾದ ʼಮುಖ್ಯವಾಹಿನಿಯʼ ಕೆಲಸಗಳಿಗೆ ಪ್ರಾಮುಖ್ಯತೆ ನೀಡುತ್ತಿದ್ದಾರೆ ಎನ್ನುತ್ತಾರೆ.
ದೆಹಲಿ ಮೂಲಕ ಹರಿಯುವ ಯಮುನಾ ನದಿ ಗಂಗಾ ನದಿಯ ಅತಿ ಉದ್ದದ ಉಪನದಿ. ಮತ್ತು ಪರಿಮಾಣದ ದೃಷ್ಟಿಯಿಂದ ಇದು ಎರಡನೆಯ ಅತಿದೊಡ್ಡ ಉಪನದಿ (ಮೊದಲನೆಯದು ಘಾಘಾರಾ).
ಪಂಡಿತ್ ಅವರು ಯಮುನಾ ತೀರದಲ್ಲಿ ಫೋಟೊ ಶೂಟ್ ಏರ್ಪಡಿಸುವುದರ ಜೊತೆಗೆ ನದಿಯ ನಡುವಿನಲ್ಲಿ ಆಚರಣೆಗಳನ್ನು ನಡೆಸಲು ಬಯಸುವ ಜನರನ್ನು ತಮ್ಮ ದೋಣಿಯಲ್ಲಿ ಕರೆದೊಯ್ಯುತ್ತಾರೆ. “ಎಲ್ಲಿ ವಿಜ್ಞಾನ ವಿಫಲವಾಗುತ್ತದೆಯೋ ಅಲ್ಲಿ ನಂಬಿಕೆ ಕೆಲಸ ಮಾಡುತ್ತದೆ” ಎಂದು ಅವರು ವಿವರಿಸುತ್ತಾರೆ. ಅವರ ತಂದೆ ಅಲ್ಲಿ ಪುರೋಹಿತರಾಗಿ ದುಡಿಯುತ್ತಾರೆ. ಅವರ ಇಬ್ಬರು ಸಹೋದರರು “ಯುವಕರಾಗಿದ್ದಾಗ ಜಮುನಾದಲ್ಲಿ [ಯಮುನಾ] ಈಜು ಕಲಿತರು.” ಪ್ರಸ್ತುತ ಅವರಿಬ್ಬರೂ ಪಂಚತಾರ ಹೋಟೆಲ್ಲುಗಳಲ್ಲಿ ಲೈಫ್ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದಾರೆ.






