ಸೋಮ ಕದಲಿಯವರ ಕುಟುಂಬವು ಮತ್ತೆ ಮತ್ತೆ ಫೋನ್ ಮಾಡಿ ಅವರ ಯೋಗಕ್ಷೇಮ ವಿಚಾರಿಸುತ್ತಲೇ ಇರತ್ತದೆ. 85 ವರ್ಷದ ಈ ಹಿರಿಯ ಕರೆ ಬಂದಾಗಲೆಲ್ಲ “ನಾನು ಸೌಖ್ಯವಾಗಿರುತ್ತೇನೆ” ಎಂದು ಭರವಸೆ ನೀಡುತ್ತಾರೆ.
ಅಕೋಲೆ (ಅಕೋಲಾ ಎಂದೂ ಕರೆಯಲಾಗುತ್ತದೆ) ತಾಲ್ಲೂಕಿನ ವಾರಂಗುಶಿ ಗ್ರಾಮದ ರೈತರಾಗಿರುವ ಅವರು ಮಹಾರಾಷ್ಟ್ರದ ಅಹ್ಮದನಗರ ಜಿಲ್ಲೆಯ ಅಕೋಲೆಯಿಂದ ಲೋನಿವರೆಗೆ ರೈತರು ಮೂರು ದಿನಗಳ ಪ್ರತಿಭಟನಾ ನಡಿಗೆಯಲ್ಲಿ (ಏಪ್ರಿಲ್ 26-28) ಅವರು ಭಾಗವಹಿಸಿದ್ದಾರೆ. “ನನ್ನ ಇಡೀ ಆಯಸ್ಸನ್ನು ಹೊಲದಲ್ಲಿ ಕಳೆದಿದ್ದೇನೆ” ಎನ್ನುವ ಅವರು ಈ ವಯಸ್ಸಿನಲ್ಲಿ ತಾನು ಇಲ್ಲಿಗೆ ಬರಬೇಕಾಗಿ ಬಂದ ಅನಿವಾರ್ಯತೆಯ ಕುರಿತು ನಮ್ಮೊಡನೆ ಮಾತನಾಡಿದರು.
2.5 ಲಕ್ಷ ರೂ.ಗಳ ಸಾಲದ ಹೊರೆಯಿಂದ ಬಳಲುತ್ತಿರುವ ಅವರು ಹೇಳುತ್ತಾರೆ, “70 ವರ್ಷಗಳ ಕಾಲ ಅದನ್ನು ಮಾಡಿಯೂ ಅದರ [ಕೃಷಿಯ] ಬಗ್ಗೆ ನನಗೆ ಏನೂ ತಿಳಿದಿಲ್ಲವೆನ್ನುವುದು ನನಗೆ ತಿಳಿದಿರಲಿಲ್ಲ”. ಕದಲಿ ಮಹಾದೇವ್ ಅವರು ಕೋಲಿ ಆದಿವಾಸಿ ಸಮುದಾಯದ ಸದಸ್ಯ. ಊರಿನಲ್ಲಿ ಅವರಿಗೆ ಐದು ಎಕರೆ ಭೂಮಿಯಿದೆ. ಹವಾಮಾನ ಇಷ್ಟು ಅನಿರೀಕ್ಷಿತವಾಗಿರುವುದನ್ನು ನಾನು ಹಿಂದೆ ನೋಡಿಲ್ಲ.
“ನನಗೆ ಕೀಲು ನೋವಿನ ಸಮಸ್ಯೆಯಿದೆ. ನಡೆಯುವಾಗ ಮೊಣಕಾಲಿನಲ್ಲಿ ನೋವು ಬರುತ್ತದೆ. ಬೆಳಗ್ಗೆ ಏಳುವುದಕ್ಕೂ ಮನಸಾಗುವುದಿಲ್ಲ. ಆದರೂ ನಾನು ನಡೆಯುತ್ತಿದ್ದೇನೆ” ಎಂದು ಅವರು ಮುಂದುವರೆದು ಹೇಳುತ್ತಾರೆ.












