ಮೇ ತಿಂಗಳು ಶುರುವಾಗುತ್ತಿದ್ದಂತೆ, ಅಜಯ್ ಕುಮಾರ್ ಸಾ ಜ್ವರ ಬಂದಿರುವುದನ್ನು ಗಮನಿಸಿದರು. ಜಾರ್ಖಂಡಿನ ಛತ್ರ ಜಿಲ್ಲೆಯ ಅಸರ್ಹಿಯ ಹಳ್ಳಿಯಲ್ಲಿ ವಾಸಿಸುತ್ತಿದ್ದು, ಇವರು ಎಂಟು ಕಿಲೋಮೀಟರ್ ದೂರದಲ್ಲಿರುವ ಇಟ್ಖೋರಿ ನಗರದಲ್ಲಿ ಡಾಕ್ಟರ್ ಓರ್ವರ ಖಾಸಗಿ ಕ್ಲಿನಿಕ್ ಗೆ ಭೇಟಿ ನೀಡಿದರು.
ಬಟ್ಟೆ ಮಾರಾಟಗಾರರಾದ 25-ವರ್ಷದ ಅಜಯ್ ಅವರಿಗೆ (ಮೇಲಿರುವ ಕವರ್ ಚಿತ್ರದಲ್ಲಿ, ಅವರ ಮಗನೊಡನೆ) ಕೋವಿಡ್ ಪರೀಕ್ಷೆ ಮಾಡದೆ, ಟೈಫಾಯಿಡ್ ಮತ್ತು ಮಲೇರಿಯಾ ತಗುಲಿದೆಯೆಂದು ಡಾಕ್ಟರ್ ನಿರ್ಣಯಿಸಿದರು. ಅಜಯ್ ಅವರ ಆಮ್ಲಜನಕ ಮಟ್ಟ ಪರೀಕ್ಷಿಸಿದ್ದರು – 75ರಿಂದ 80 ಶೇಕಡವಿತ್ತು. (ಸಾಧಾರಣವಾದ ಮಟ್ಟ 95ರಿಂದ 100). ನಂತರ, ಅಜಯ್ ಅವರನ್ನು ಮನೆಗೆ ಕಳುಹಿಸಲಾಯಿತು.
ಎರಡು-ಮೂರು ಘಂಟೆಗಳಾದ ಮೇಲೆ ಅಜಯ್ಗೆ ಉಸಿರಾಟ ಕಷ್ಟವಾಯಿತು. ಅಂದೇ ಮತ್ತೊಬ್ಬರು ವೈದ್ಯರನ್ನು ಕಾಣಲು ತೆರಳಿದರು, ಈ ಬಾರಿ ಹಜಾರಿಬಾಗ್ (ಅಸರ್ಹಿಯದಿಂದ ಅಂದಾಜು 45 ಕಿಲೋಮೀಟರ್ ದೂರದಲ್ಲಿ) ಅಲ್ಲಿರುವ ಇನ್ನೊಂದು ಖಾಸಗಿ ಕ್ಲಿನಿಕ್ ಗೆ ಹೋದರು. ಅಲ್ಲಿಯೂ, ಕೋವಿಡ್ ಅಲ್ಲದೆ, ಟೈಫಾಯಿಡ್ ಮತ್ತು ಮಲೇರಿಯಾ ಪರೀಕ್ಷೆಗಳನ್ನು ಮಾಡಿದರು.
“ಡಾಕ್ಟರ್ ನನ್ನನ್ನು ನೋಡಿ, ಕೊರೊನ ಕಾಯಿಲೆ ಬಂದಿದೆಯೆಂದರು. ನಾನು ಚಿಕಿತ್ಸೆ ನೀಡಿದರೆ, ಬಹಳ ಖರ್ಚಾಗುವುದೆಂದು ಹೇಳಿ, ಸಾದರ ಆಸ್ಪತ್ರೆಗೆ (ಹಜಾರಿಬಾಗ್ ನಲ್ಲಿರುವ ಸರ್ಕಾರಿ ಆಸ್ಪತ್ರೆ) ಹೋಗಲು ಹೇಳಿದರು. ಭಯ ಪಟ್ಟು, ಎಷ್ಟೇ ಖರ್ಚಾದರು ಕೊಡುತ್ತೇವೆ ಎಂದೆವು. ನಮಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ನಂಬಿಕೆಯಿಲ್ಲ. (ಕೋವಿಡ್) ಚಿಕಿತ್ಸೆಗೆ ಅಲ್ಲಿ ಹೋದವರಾರು ಬದುಕುವುದಿಲ್ಲ” ಎಂದು ಅಜಯ್, ಅದೇ ಹಳ್ಳಿಯ, ವಿಡಿಯೋ ಸಂಪಾದಕರಾದ, ಹೈಯುಲ್ ರಹ್ಮಾನ್ ಅನ್ಸಾರಿಗೆ ಹೇಳಿದರು.


