ಮಳೆಗಾಲದ ಮೊದಲ ಧಾರೆ ಸುರಿಯಿತು ಎಂದರೆ ಸಾನಿಯಾ ಮುಲ್ಲಾನಿ ತಾನು ಹುಟ್ಟಿದ ದಿನದಂದು ನುಡಿದ ಭವಿಷ್ಯವಾಣಿಯನ್ನು ನೆನಪಿಸಿಕೊಳ್ಳುತ್ತಾರೆ.
ಆಕೆ ಹುಟ್ಟಿದ್ದು 2005ನೇ ಇಸವಿಯ ಜುಲೈ ಮಾಸದಲ್ಲಿ. ಅಂದರೆ, ಮಹಾರಾಷ್ಟçದಲ್ಲಿ 1,000ಕ್ಕಿಂತ ಹೆಚ್ಚಿನ ಜನರ ಜೀವಕ್ಕೆ ಎರವಾದ ಮತ್ತು 20 ಮಿಲಿಯನ್ ಜನರನ್ನು ಬಾಧಿಸಿದ ಭೀಕರ ಪ್ರವಾಹದ ಒಂದು ವಾರ ನಂತರ. “ಆಕೆ ಹುಟ್ಟಿದ್ದು ಪ್ರವಾಹದ ವೇಳೆ; ಆಕೆ ಹೆಚ್ಚಿನ ಸಮಯವನ್ನು ಪ್ರವಾಹದ ಜೊತೆಯಲ್ಲೇ ಕಳೆಯುತ್ತಾಳೆ,” ಎಂದು ಗ್ರಾಮಸ್ಥರು ಆಕೆಯ ಹೆತ್ತವರ ಬಳಿ ಹೇಳಿದ್ದರು.
2022ರ ಜುಲೈ ತಿಂಗಳಿನ ಮೊದಲ ವಾರದಲ್ಲಿ ಭಾರೀ ಮಳೆ ಸುರಿಯಲು ಆರಂಭಿಸಿದಾದ ಹದಿನೇಳು ವರ್ಷ ಪ್ರಾಯದ ಯುವತಿ ಸಾನಿಯಾ ಆ ಮಾತುಗಳನ್ನು ಮತ್ತೆ ನೆನಪಿಸಿಕೊಂಡರು. “ಪಾನಿ ವಾಡತ್ ಚಾಲ್ಲೆ” (ನೀರು ಏರುತ್ತಿದೆ) ಎಂಬ ಮಾತು ಕಿವಿಗೆ ಬಿದ್ದಾಗಲೆಲ್ಲ ಮತ್ತು ಪ್ರವಾಹ ಬಾಧಿಸುವ ಭಯ ಕಾಡುತ್ತದೆ,” ಎಂದು ಮಹಾರಾಷ್ಟದ ಕೊಲ್ಲಾಪುರ ಜಿಲ್ಲೆಯ ಹಾತ್ಕಣಗಲೆ ತಾಲೂಕಿನ ಭೇಂಡಾವಾಡೆ ಗ್ರಾಮದ ನಿವಾಸಿಗಳು ಹೇಳುತ್ತಾರೆ. 2019ರಿಂದ ಇಲ್ಲಿಯ ತನಕ ಈ ಗ್ರಾಮದ 4,686 ನಿವಾಸಿಗಳು ಎರಡೆರಡು ಪ್ರವಾಹಗಳಿಗೆ ಸಾಕ್ಷಿಯಾಗಿದ್ದಾರೆ.
2019ರ ಅಗಸ್ಟ್ ತಿಂಗಳ ಪ್ರವಾಹದ ಸಮಯದಲ್ಲಿ ಕೇವಲ 24 ಗಂಟೆಯೊಳಗೆ ನೀರಿನ ಮಟ್ಟ ಏಳು ಅಡಿಗಳಷ್ಟು ಏರಿ ನಮ್ಮ ಮನೆಯನ್ನು ಮುಳುಗಿಸಿತ್ತು” ಎಂದು ಸಾನಿಯಾ ನೆನಪಿಸಿಕೊಳ್ಳುತ್ತಾರೆ. ಇನ್ನೇನು ಪ್ರವಾಹದ ನೀರಿ ಮನೆಯೊಳಗೆ ನುಗ್ಗಿಯೇ ಬಿಟ್ಟಿತು ಎನ್ನುವಷ್ಟರಲ್ಲೇ ಮುಲ್ಲಾನಿ ಕುಟುಂಬ ಅಲ್ಲಿಂದ ಪಾರಾಗಿತ್ತು. ಆದರೆ, ಆ ಘಟನೆ ಸಾನಿಯಾಳಿಗೆ ತೀವ್ರ ಮಾನಸಿಕ ಆಘಾತಕ್ಕೆ ಉಂಟು ಮಾಡಿತ್ತು.
ಮುಂದೆ 2022ರಲ್ಲಿ ಮತ್ತೊಂದು ಪ್ರವಾಹ ಗ್ರಾಮಸ್ಥರನ್ನು ಕಾಡಿತ್ತು. ಈ ಬಾರಿ ಅವರ ಕುಟುಂಬವನ್ನು ಪ್ರವಾಹ ಪೀಡಿತರ ಪರಿಹಾರ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿತ್ತು. ಅವರು ಅಲ್ಲಿ ಮೂರು ಇದ್ದು, ಪರಿಸ್ಥಿತಿ ತಿಳಿಗೊಂಡಿದೆ ಎಂದು ಗ್ರಾಮದ ಅಧಿಕಾರಿಗಳು ಹೇಳಿದ ಬಳಿಕವಷ್ಟೇ ಮನೆಗೆ ಹಿಂದಿರುಗಿದ್ದರು.
ಸಾನಿಯಾ ಟೆಕ್ವಾಂಡೊ ಚ್ಯಾಂಪಿಯನ್ ಆಗಿರುವ ಬ್ಲ್ಯಾಕ್ ಬೆಲ್ಟ್ ಸಲುವಾಗಿ ಪಡೆಯುತ್ತಿದ್ದ ತರಬೇತಿ 2019ರ ಪ್ರವಾಹದ ಬಳಿಕ ಮೊಟಕುಗೊಂಡಿದೆ. ಕಳೆದ ಮೂರು ವರ್ಷಗಳಿಂದ ದಣಿವು, ಆತಂಕ, ಸಿಡುಕುತನ, ಉದ್ವೇಗ ಆಕೆಯನ್ನು ತೀವ್ರವಾಗಿ ಕಾಡುತ್ತಿದೆ. “ನನಗೆ ತರಬೇತಿ ಮೇಲೆ ಗಮನ ಕೊಡಲು ಸಾಧ್ಯವಾಗುತ್ತಿಲ್ಲ” ಎಂದು ಹೇಳುವ ಸಾನಿಯಾ, “ಈಗಂತೂ ನನ್ನ ತರಬೇತಿ ಮಳೆಯನ್ನೇ ಅವಲಂಬಿಸಿಕೊAಡಿದೆ,” ಎನ್ನುತ್ತಾರೆ.





















