ನೀವು ನಮ್ಮನ್ನು ಬೇರುಸಹಿತ ಕಿತ್ತು ನೀರಿನಲ್ಲಿ ಮುಳುಗಿಸಬಹುದು. ಆದರೆ ಅದಾದ ಕೆಲವು ದಿನಗಳಲ್ಲೇ ನಿಮ್ಮ ಪಾಲಿಗೆ ನೀರಿರುವುದಿಲ್ಲ – ಎಂದು ನಾನೊಂದು ಕಡೆ ಬರೆದಿದ್ದೆ. ನೀವು ನಮ್ಮ ನೆಲ, ನೀರನ್ನು ಕದಿಯಬಹುದು, ಆದರೂ ನಾವು ನಿಮ್ಮ ಮುಂದಿನ ಪೀಳಿಗೆಗಾಗಿ ಹೋರಾಡುತ್ತೇವೆ ಹಾಗೂ ಜೀವವನ್ನೂ ತೆರುತ್ತೇವೆ. ನೀರು, ಕಾಡು ಮತ್ತು ಭೂಮಿಗಾಗಿ ನಮ್ಮ ಹೋರಾಟಗಳು ಕೇವಲ ನಮ್ಮ ಸಲುವಾಗಿಯಲ್ಲ, ನಮ್ಮಲ್ಲಿ ಯಾರೂ ಪ್ರಕೃತಿಯಿಂದ ಬೇರೆಯಾಗಿಲ್ಲ. ಆದಿವಾಸಿ ಬದುಕು ಪ್ರಕೃತಿಯೊಂದಿಗೆ ಮಿಳಿತವಾಗಿರುತ್ತದೆ. ಇವುಗಳ ಹೊರತಾದ ಆದಿವಾಸಿ ಬದುಕಿಲ್ಲ. ಹೀಗಾಗಿ ನಾವು ಪ್ರಕೃತಿಯಿಂದ ನಮ್ಮನ್ನು ಬೇರೆಯಾಗಿಸಿಕೊಂಡು ನೋಡುವುದಿಲ್ಲ. ನಾನು ದೆಹ್ವಾಲಿ ಭಿಲಿಯಲ್ಲಿ ಬರೆಯುವ ಅನೇಕ ಕವಿತೆಗಳಲ್ಲಿ , ನಮ್ಮ ಜನರ ಮೌಲ್ಯಗಳನ್ನು ಸಂರಕ್ಷಿಸಲು ಪ್ರಯತ್ನಿಸಿದ್ದೇನೆ.

ನಮ್ಮ ಆದಿವಾಸಿ ಸಮುದಾಯಗಳ ಲೋಕದೃಷ್ಟಿಯು ಮುಂದಿನ ಪೀಳಿಗೆಗೆ ಅಡಿಪಾಯವಾಗಬಹುದು. ನೀವು ಸಾಮೂಹಿಕ ಆತ್ಮಹತ್ಯೆಗೆ ಸಿದ್ಧರಿಲ್ಲದಿದ್ದರೆ, ಆ ಬದುಕಿಗೆ, ಆ ಲೋಕದೃಷ್ಟಿಗೆ ಹಿಂತಿರುಗುವುದನ್ನು ಬಿಟ್ಟು ನಿಮಗೆ ಬೇರೆ ಆಯ್ಕೆಗಳಿಲ್ಲ.

ಜಿತೇಂದ್ರ ವಾಸವ ದೆ ಹ್ವಾಲಿ ಭಿಲಿಯ ಭಾಷೆಯ ಲ್ಲಿ ತಮ್ಮ ಕವಿತೆ ಓದುವುದ ನ್ನು ಆಲಿಸಿ

ಪ್ರತಿಷ್ಠಾ ಪಾಂಡ್ಯ ಅವರು ಇಂಗ್ಲಿಷ್ ಭಾಷಾಂತರದಲ್ಲಿ ಕವಿತೆ ಓದುವುದನ್ನು ಆಲಿಸಿ

ನಮ್ಮ ಪಾದಗಳ ದಣಿವಾರಿಸಲೊಂದು ತುಂಡು ಭೂಮಿ

ಗೆಳೆಯ,
ಕಲ್ಲು ಅರೆಯುವುದು
ಮಣ್ಣು ಸುಡುವುದು
ಇದೆಲ್ಲ ಏನೆಂದು ನಿನಗೆ ಅರ್ಥವಾಗಲಿಕ್ಕಿಲ್ಲ.
ನಿನ್ನ ಬೆಳಗುತಿದೆಯೆಂದು
ಈ ಜಗತ್ತು ನಿನ್ನ ಮುಷ್ಟಿಯಲ್ಲಿದೆಯೆಂದು
ನೀನು ಬಹಳ ಸಂತೋಷದಲ್ಲಿರುವೆ.
ಒಂದು ಹನಿ ಇಲ್ಲವಾಗುವುದೆಂದರೇನು ಎನ್ನುವುದು
ನಿನಗೆ ಅರ್ಥವಾಗಲಿಕ್ಕಿಲ್ಲ.
ಎಷ್ಟಾದರೂ ನೀನು ಈ ಭೂಮಿಯ ಮೇಲಿನ ಶ್ರೇಷ್ಟ ಸೃಷ್ಟಿಯಲ್ಲವೆ
ಈ ʼಪ್ರಯೋಗಾಲಯವೇʼ ಸಾಕ್ಷಿ
ನಿನ್ನ ಶ್ರೇಷ್ಟತೆಗೆ

ಈ ಕೀಟಗಳ ಜೊತೆ ನಿನಗೆಲ್ಲಿಯ ಸಂಬಂಧ?
ಈ ಮರಗಳು, ಸಸ್ಯಗಳು ನಿನಗೇನಾಗಬೇಕು?
ನೀನು ಆಕಾಶದಲ್ಲಿ ಮನೆ ಕಟ್ಟುವ ಕನಸು ಕಾಣುತ್ತಿರುವೆ
ನೀನೀಗ ಭೂಮಿ ತಾಯಿಯ ಮುದ್ದಿನ ಮಗನಲ್ಲ
ನಿನಗೆ ಬೇಸರವಿಲ್ಲವಾದರೆ ಗೆಳೆಯ
ನಾನು ನಿನ್ನನ್ನು
ʼಚಂದ್ರಲೋಕದ ಮನುಷ್ಯʼನೆಂದು ಕರೆಯವೆ.
ನೀನು ಹಕ್ಕಿಯಲ್ಲ
ಆದರೂ ಹಾರುವೆ ಆಗಸದೆತ್ತರಕ್ಕೆ ಹಾರುವ ಕನಸು ಕಾಣುವೆ
ತಪ್ಪೇನಿಲ್ಲ ಬಿಡು,
ನೀನು ಕಲಿತಿರುವ ವಿದ್ಯೆಯೇ ಹಾಗಿದೆ!

ನೀನು ಯಾರ ಮಾತನ್ನೂ ಕೇಳುವವನಲ್ಲ
ಆದರೂ, ಒಂದು ಮಾತು ಗೆಳೆಯ
ನಿಮಗೆ ಬೇಕಿರುವುದನ್ನೆಲ್ಲ ಮಾಡಿ
ಸಾಧ್ಯವಾದರೆ, ನಾವಿದ್ದೇವಲ್ಲ ಅನಕ್ಷರಸ್ಥರು
ದಯಮಾಡಿ ನಮಗಾಗಿ ಒಂದು ತುಂಡು ಭೂಮಿಯನ್ನಾದರೂ ಬಿಡಿ
ನಮ್ಮ ಪಾದಗಳು ದಣಿದಿವೆ
ನಮಗೂ ಒಂದಿಷ್ಟು ವಿಶ್ರಾಂತಿ ಬೇಕು.

ಗೆಳೆಯ,
ಕಲ್ಲು ಅರೆಯುವುದು
ಮಣ್ಣು ಸುಡುವುದು
ಇದೆಲ್ಲ ಏನೆಂದು ನಿನಗೆ ಅರ್ಥವಾಗಲಿಕ್ಕಿಲ್ಲ.
ನಿನ್ನ ಬೆಳಗುತಿದೆಯೆಂದು
ಈ ಜಗತ್ತು ನಿನ್ನ ಮುಷ್ಟಿಯಲ್ಲಿದೆಯೆಂದು
ನೀನು ಬಹಳ ಸಂತೋಷದಲ್ಲಿರುವೆ.
ಒಂದು ಹನಿ ಇಲ್ಲವಾಗುವುದೆಂದರೇನು ಎನ್ನುವುದು
ನಿನಗೆ ಅರ್ಥವಾಗಲಿಕ್ಕಿಲ್ಲ.
ಎಷ್ಟಾದರೂ ನೀನು ಈ ಭೂಮಿಯ ಮೇಲಿನ ಶ್ರೇಷ್ಟ ಸೃಷ್ಟಿ

ಅನುವಾದ: ಶಂಕರ. ಎನ್. ಕೆಂಚನೂರು

Poem and Text : Jitendra Vasava

జితేంద్ర వాసవ గుజరాత్‌ రాష్ట్రం, నర్మదా జిల్లాలోని మహుపారా గ్రామానికి చెందిన కవి. ఆయన దేహ్వాలీ భీలీ భాషలో రాస్తారు. ఆయన ఆదివాసీ సాహిత్య అకాడమీ (2014) వ్యవస్థాపక అధ్యక్షులు; ఆదివాసీ స్వరాలకు అంకితమైన కవితా పత్రిక లఖారాకు సంపాదకులు. ఈయన ఆదివాసీ మౌఖిక సాహిత్యంపై నాలుగు పుస్తకాలను కూడా ప్రచురించారు. అతని డాక్టరల్ పరిశోధన, నర్మదా జిల్లాలోని భిల్లుల మౌఖిక జానపద కథల సాంస్కృతిక, పౌరాణిక అంశాలపై దృష్టి సారించింది. PARIలో ప్రచురించబడుతున్న అతని కవితలు, పుస్తకంగా రాబోతున్న అతని మొదటి కవితా సంకలనంలోనివి.

Other stories by Jitendra Vasava
Illustration : Labani Jangi

లావణి జంగి 2020 PARI ఫెలో. పశ్చిమ బెంగాల్‌లోని నాడియా జిల్లాకు చెందిన స్వయం-బోధిత చిత్రకారిణి. ఆమె కొల్‌కతాలోని సెంటర్ ఫర్ స్టడీస్ ఇన్ సోషల్ సైన్సెస్‌లో లేబర్ మైగ్రేషన్‌పై పిఎచ్‌డి చేస్తున్నారు.

Other stories by Labani Jangi
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru