ಕೊಲ್ಹಾಪುರ ಪ್ರಗತಿಪರ (ಪುರೋಗಾಮಿ) ನಗರವೆಂದೇ ಪರಿಚಿತ. ಇದಕ್ಕೆ ಶಾಹು, ಫುಲೆ ಮತ್ತು ಅಂಬೇಡ್ಕರ್ ಅವರಂತಹ ಮಹಾನ್ ವ್ಯಕ್ತಿಗಳ ಪರಂಪರೆಯ ಹಿನ್ನೆಲೆಯಿದೆ. ವಿವಿಧ ಧರ್ಮಗಳು ಮತ್ತು ಜಾತಿಗಳ ಜನರು ಈಗಲೂ ವೈವಿಧ್ಯಮಯ ಸಂಸ್ಕೃತಿಗಳ ನಡುವೆ ಗೌರವ ಮತ್ತು ಸ್ನೇಹ ಹಾಗೂ ಪ್ರಗತಿಪರ ಚಿಂತನೆಯ ಈ ಪರಂಪರೆಯನ್ನು ಜೀವಂತವಾಗಿಡಲು ಈಗಲೂ ಶ್ರಮಿಸುತ್ತಿದ್ದಾರೆ.

ಆದರೆ ಇದೆಲ್ಲದರ ನಡುವೆಯೂ ಈ ಸೌಹಾರ್ದ ಸಮಾಜದಲ್ಲಿ ಹುಳಿ ಹಿಂಡುವ ಸಂಘಟಿತ ಪ್ರಯತ್ನಗಳೂ ನಡೆಯುತ್ತಿವೆ. ಚಿಂತನೆಗಳನ್ನು ಚಿಂತನೆಗಳ ಮೂಲಕವೇ ಎದುರಿಸಬೇಕು. ಈ ನಿಟ್ಟಿನಲ್ಲಿ ಶರ್ಫುದ್ದೀನ್ ದೇಸಾಯಿ ಮತ್ತು ಸುನಿಲ್ ಮಾಲಿ ಅವರಂತಹ ನಾಗರಿಕರು ಸಮಾಜದಲ್ಲಿ ಸಾಮರಸ್ಯ ಕಾಪಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ.

ಶರ್ಫುದ್ದೀನ್ ದೇಸಾಯಿ ಮತ್ತು ಸುನಿಲ್ ಮಾಲಿ ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ತಾರಾದಾಳ ಗ್ರಾಮದವರು. ಇಲ್ಲಿ ಶರ್ಫುದ್ದೀನ್ ದೇಸಾಯಿ ಹಿಂದೂ ಗುರುವಿನೊಂದಿಗೆ ಸಂಬಂಧ ಹೊಂದಿದ್ದರೆ, ಸುನಿಲ್ ಮಾಲಿ ಮುಸ್ಲಿಂ ಗುರುವಿನ ಅನುಯಾಯಿ.

ಚಿತ್ರವನ್ನು ನೋಡಿ: ಸಹೋದರತ್ವ

ಅನುವಾದ: ಶಂಕರ. ಎನ್. ಕೆಂಚನೂರು

Jaysing Chavan

ਜੈਸਿੰਗ ਸ਼ਵਨ ਕੋਲ੍ਹਾਪੁਰ ਦੇ ਇੱਕ ਫ੍ਰੀਲੈਂਸ ਫੋਟੋਗ੍ਰਾਫਰ ਅਤੇ ਫ਼ਿਲਮ ਨਿਰਮਾਤਾ ਹਨ।

Other stories by Jaysing Chavan
Text Editor : PARI Desk

ਪਾਰੀ ਡੈਸਕ ਸਾਡੇ (ਪਾਰੀ ਦੇ) ਸੰਪਾਦਕੀ ਕੰਮ ਦਾ ਧੁਰਾ ਹੈ। ਸਾਡੀ ਟੀਮ ਦੇਸ਼ ਭਰ ਵਿੱਚ ਸਥਿਤ ਪੱਤਰਕਾਰਾਂ, ਖ਼ੋਜਕਰਤਾਵਾਂ, ਫ਼ੋਟੋਗ੍ਰਾਫਰਾਂ, ਫ਼ਿਲਮ ਨਿਰਮਾਤਾਵਾਂ ਅਤੇ ਅਨੁਵਾਦਕਾਂ ਨਾਲ਼ ਮਿਲ਼ ਕੇ ਕੰਮ ਕਰਦੀ ਹੈ। ਡੈਸਕ ਪਾਰੀ ਦੁਆਰਾ ਪ੍ਰਕਾਸ਼ਤ ਟੈਕਸਟ, ਵੀਡੀਓ, ਆਡੀਓ ਅਤੇ ਖ਼ੋਜ ਰਿਪੋਰਟਾਂ ਦੇ ਉਤਪਾਦਨ ਅਤੇ ਪ੍ਰਕਾਸ਼ਨ ਦਾ ਸਮਰਥਨ ਵੀ ਕਰਦੀ ਹੈ ਤੇ ਅਤੇ ਪ੍ਰਬੰਧਨ ਵੀ।

Other stories by PARI Desk
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru