“ನನ್ನ ಐದು ವರ್ಷದ ಮಗಳಿಗೆ ಈಗ ತೀವ್ರ ಜ್ವರವಿದೆ, ಆದರೆ ಪೊಲೀಸರು ನನ್ನ ಪತಿಯನ್ನು (ಅವಳನ್ನು ವೈದ್ಯರ ಬಳಿ ಕರೆದೊಯ್ಯದಂತೆ) ತಡೆದರು. ಹಾಗಾಗಿ ಅವರು ಹೆದರಿ ವಾಪಸ್ ಬಂದರು. ನಮಗೆ ನಮ್ಮ ಕಾಲೋನಿಯ ಹೊರಗೆ ಹೋಗಲು ಅವಕಾಶವಿಲ್ಲ, ಆಸ್ಪತ್ರೆಗೆ ಕೂಡ ಹೋಗುವಂತಿಲ್ಲ” ಎಂದು ಶಕೀಲಾ ನಿಜಾಮುದ್ದೀನ್ ಹೇಳುತ್ತಿದ್ದರು.
30 ವರ್ಷದ ಶಕೀಲಾ, ಅಹಮದಾಬಾದ್ ನಗರದಲ್ಲಿರುವ ಸಿಟಿಜನ್ ನಗರ ರಿಲೀಫ್ ಕಾಲೋನಿಯಲ್ಲಿ ವಾಸಿಸುತ್ತಿದ್ದಾರೆ. ಅವರು ಮನೆಯಲ್ಲಿ ಗಾಳಿಪಟಗಳನ್ನು ತಯಾರಿಸುವುದರ ಮೂಲಕ ಜೀವನ ಸಾಗಿಸುತ್ತಾರೆ. ಅವರು ಮತ್ತು ಅವರ ಪತಿ, ದಿನಗೂಲಿ ಕೆಲಸಗಾರರಾಗಿದ್ದಾರೆ, ಈಗ ಲಾಕ್ಡೌನ್ ನಿಂದಾಗಿ ಅವರ ಆದಾಯದ ಜೊತೆಗೆ ಅವರ ಭರವಸೆಗಳು ಕ್ಷೀಣಿಸುತ್ತಿವೆ. "ಕ್ಲಿನಿಕ್ ಮುಚ್ಚಲಾಗಿದೆ," ಎಂದು ಅವರು ನನಗೆ ವೀಡಿಯೊ ಕರೆಯಲ್ಲಿ ಹೇಳಿದರು. “ಅವರು ನಮಗೆ 'ಮನೆಗೆ ಹೋಗಿ, ಕೆಲವು ಮನೆಮದ್ದುಗಳನ್ನು ತೆಗೆದುಕೊಳ್ಳಿ' ಎಂದು ಹೇಳುತ್ತಾರೆ. ಆಸ್ಪತ್ರೆಗೆ ಹೋಗಲು ಬಯಸಿದರೆ, ಪೊಲೀಸರು ಕಡತಗಳು ಮತ್ತು ದಾಖಲೆಗಳನ್ನು ಕೇಳುತ್ತಾರೆ. ಅವುಗಳನ್ನು ನಾವು ಎಲ್ಲಿಂದ ತರಬೇಕು ಹೇಳಿ?” ಎಂದು ಅವರು ಹತಾಶೆಯಿಂದ ಪ್ರಶ್ನಿಸುತ್ತಾರೆ.
2004ರಲ್ಲಿ ಗುಜರಾತ್ನಲ್ಲಿ ದತ್ತಿ ಸಂಸ್ಥೆಗಳಿಂದ ಸ್ಥಾಪಿಸಲ್ಪಟ್ಟ 81 ಕಾಲೋನಿಗಳಲ್ಲಿ ಒಂದಾಗಿರುವ ಈ ಕಾಲೋನಿಯಲ್ಲಿ, ಸುಮಾರು 50,000 ಕ್ಕೂ ಅಧಿಕ ಜನರು 2002 ರಲ್ಲಿನಡೆದ ಕೋಮುಗಲಭೆಯ ನಂತರ ಇಲ್ಲಿಗೆ ಸ್ಥಳಾಂತರಿಸಲ್ಪಟ್ಟಿದ್ದಾರೆ. ಈಗ ಲಾಕ್ ಡೌನ್ನಿಂದಾಗಿ ಮತ್ತೆ ಕೆಟ್ಟ ಗಳಿಗೆಯನ್ನು ಎದುರಿಸುತ್ತಿದ್ದಾರೆ.
ಆದರೆ ಅವರಲ್ಲಿ ಒಬ್ಬರು ತಮ್ಮ ಟಿವಿ ಪರದೆಯ ಮೇಲೆ ಅಮಿತಾಬ್ ಬಚ್ಚನ್ ಅವರನ್ನು ನೋಡುತ್ತಾ ನನಗೆ ಹೇಳುವಂತೆ, ಅಲ್ಲಿ ಎಲ್ಲರೂ ಒಟ್ಟಾಗಿ ಮತ್ತು ಕರೋನವೈರಸ್ ಭಾರತದಾದ್ಯಂತ ಹರಡುವುದನ್ನು ತಡೆಯುವಂತೆ ಅವರು ಮನವಿ ಮಾಡುತ್ತಿದ್ದರು.
"ನಾವು ಮನೆಯೊಳಗೆ ಕೈಗಳನ್ನು ಮಡಚಿಕೊಂಡು ಹೀಗೆ ಕುಳಿತುಕೊಳ್ಳುವುದಾದರೆ, ನಾವು ಏತಕ್ಕೆ ಕೈ ತೊಳೆಯಬೇಕು?" ಎಂದು ರೇಷ್ಮಾ ಸೈಯದ್ ಪ್ರಶ್ನಿಸುತ್ತಾರೆ, ಸಿಟಿಜಿನ್ ನಗರದ ನಾಯಕರಾಗಿರುವ ಕಾರಣ ಅವರಿಗೆ ಪ್ರೀತಿಯಿಂದ ರೇಷ್ಮಾ ಆಪಾ ಎಂದು ಕರೆಯುತ್ತಾರೆ, ಇದು 2002 ರ ಗಲಭೆ ಸಂತ್ರಸ್ತರ ಪುನರ್ವಸತಿಗಾಗಿ ಅಹ್ಮದಾಬಾದ್ನಲ್ಲಿ ಸ್ಥಾಪಿಸಿದ 15 ಕಾಲೋನಿಗಳಲ್ಲಿ ಇದು ಕೂಡ ಒಂದು. ಕಾಲೋನಿ ಗೇಟ್ ಬಳಿ ಕೆತ್ತಿರುವ ಕಲ್ಲಿನ ಫಲಕದ ಪ್ರಕಾರ, ಇದು 2004 ರಲ್ಲಿ ಕೇರಳ ರಾಜ್ಯ ಮುಸ್ಲಿಂ ಪರಿಹಾರ ಸಮಿತಿಯ ನೆರವಿನಿಂದ ಇದನ್ನು ನಿರ್ಮಿಸಲಾಯಿತು. ಆಗ ಮೊದಲು 40 ಕುಟುಂಬಗಳು ಇಲ್ಲಿಗೆ ಬಂದವು, ಎರಡು ವರ್ಷಗಳ ಹಿಂದೆ ಗಲಭೆಯಲ್ಲಿ ಬದುಕುಳಿದವರು ತಮ್ಮೆಲ್ಲಾ ವಸ್ತುಗಳು ಸುಟ್ಟು ಕರಕಲವಾಗಿದ್ದಕ್ಕೆ ಸಾಕ್ಷಿಯಾಗಿದ್ದರು.










