ಈಗಾಗಲೇ ನಿರ್ಮಿಸಿದ್ದ ವೇದಿಕೆಯತ್ತ ಸಾಗುತ್ತಿದ್ದ ಅವರು ಕೆಂಪು, ಹಳದಿ, ಹಸಿರು, ಬಿಳಿ, ಮತ್ತು ಕಿತ್ತಳೆ ಬಣ್ಣದ ಧ್ವಜಗಳನ್ನು ಎತ್ತರಕ್ಕೆ ಹಿಡಿದಿದ್ದರು. ಇದೇ ವೇಳೆ ಹಸಿರು ದುಪ್ಪಟ್ಟಾವನ್ನು ತಲೆ ಮೇಲೆ ಹೊದ್ದ ಮಹಿಳಾ ರೈತರ ಗುಂಪೊಂದು ಮೆರವಣಿಗೆಯಲ್ಲಿ ಪಾಲ್ಗೊಂಡಿತ್ತು, ಇನ್ನೊಂದೆಡೆಗೆ ಪುರುಷರ ತುಕಡಿಯೊಂದು ಟ್ರಾಕ್ಟರ್ ಗಳ ಮೇಲೆ ಕುಳಿತು ಅದರ ಸವಾರಿ ಮಾಡುತ್ತಿತ್ತು, ಅವರು ಧರಿಸಿದ್ದ ಪೇಟಗಳು ಬಿಳಿ ಮತ್ತು ಕಡುಗೆಂಪು, ಹಳದಿ ಮತ್ತು ಹಸಿರು ಬಣ್ಣಗಳಿಂದ ಕೂಡಿದ್ದವು. ತಮ್ಮ ಭುಜದ ಮೇಲೆ ಧ್ವಜಗಳನ್ನು ಹಿಡಿದಿದ್ದ ವಿವಿದ ತಂಡಗಳು ಇಡೀ ದಿನ ವೇದಿಕೆಯುದ್ದಕ್ಕೂ ಸಾಗುತ್ತಿದ್ದವು- ಇನ್ನು ಅಲ್ಲಿ ಕಂಡು ಬರುತ್ತಿದ್ದ ಪ್ರತಿಬಣ್ಣವು ಸಹಿತ ಮಹಾಕಾವ್ಯದ ಪದಗಳ ಹೆಣಿಕೆಯಂತಿತ್ತು.
ಇದು ನವೆಂಬರ್ 26, 2020ರಿಂದ ಹೀಗೆಯೇ ವರ್ಷ ಪೂರ್ತಿ ನಡೆದಿತ್ತು, ಅವರಲ್ಲಿ ಹಲವರು ಸಂಸತ್ತು ಅಂಗೀಕರಿಸಿದ ಮೂರು ಕಾನೂನುಗಳ ವಿರುದ್ಧ ಪ್ರತಿಭಟಿಸಲು ದೆಹಲಿಯ ಗೇಟ್ಗಳನ್ನು ತಲುಪಿದ್ದರು. ಈ ಐತಿಹಾಸಿಕ ವಾರ್ಷಿಕೋತ್ಸವದ ಹಿನ್ನಲೆಯಲ್ಲಿ ರೈತರು ಮತ್ತು ಬೆಂಬಲಿಗರು ಕಳೆದ ಶುಕ್ರವಾರದಂದು ಸಿಂಘು, ಟಿಕ್ರಿ ಮತ್ತು ಗಾಜಿಪುರದಲ್ಲಿರುವ ಪ್ರತಿಭಟನಾ ಸ್ಥಳಗಳಲ್ಲಿ ಸಮಾವೇಶಗೊಂಡಿದ್ದರು.
ಅದೊಂದು ಗೆಲುವು, ಕಣ್ಣೀರು ಮತ್ತು ಯೋಜನೆಗಳ ಸ್ಮರಣೆಯ ದಿನವಾಗಿತ್ತು. ಇದು ಗೆದ್ದಿರುವಂತಹ ಯುದ್ಧವಾಗಿರಬಹುದು, ಆದರೆ ಇದೇ ಅಂತಿಮ ಗೆಲುವಲ್ಲ ಎಂದು ನವೆಂಬರ್ 19ರಂದು ಪ್ರಧಾನಿ ಮೋದಿ ಮೂರು ಕಾನೂನುಗಳನ್ನು ರದ್ದುಗೊಳಿಸುವುದಾಗಿ ಘೋಷಿಸಿದ ದಿನ ಸಿಂಘುವಿನಲ್ಲಿದ್ದ 33 ವರ್ಷದ ಗುರ್ಜಿತ್ ಸಿಂಗ್ ಅವರು ಹೇಳುತ್ತಿದ್ದರು. ಸಿಂಗ್ ಅವರು ಪಂಜಾಬ್ನ ಫಿರೋಜ್ಪುರ ಜಿಲ್ಲೆಯ ಝಿರಾ ತೆಹಸಿಲ್ನಲ್ಲಿರುವ ಅವರ ಗ್ರಾಮವಾದ ಅರಿಯನ್ವಾಲಾದಲ್ಲಿ 25 ಎಕರೆಗಳಲ್ಲಿ ಕೃಷಿ ಮಾಡುತ್ತಿದ್ದಾರೆ.
ಆ ದಿನ ಸಿಂಘುವಿನಲ್ಲಿದ್ದ 45 ವರ್ಷದ ಗುರ್ಜಿತ್ ಸಿಂಗ್ ಆಜಾದ್ ಅವರು ಮಾತನಾಡುತ್ತಾ "ಇದು ಜನರ ಗೆಲುವಾಗಿದೆ, ನಾವು ಹಠಮಾರಿ ಆಡಳಿತಗಾರನನ್ನು ಸೋಲಿಸಿದ್ದೇವೆ ಮತ್ತು ಇದರಿಂದಾಗಿ ನಮಗೆ ಸಂತೋಷವಾಗಿದೆ” ಎಂದು ಹೇಳಿದರು. ಗುರುದಾಸ್ಪುರ ಜಿಲ್ಲೆಯ ಕಹ್ನುವಾನ್ ತೆಹಸಿಲ್ನಲ್ಲಿರುವ ಭಟ್ಟಿಯಾನ್ನ ಆಜಾದ್ನ ಹಳ್ಳಿಯಲ್ಲಿ, ಅವರ ಚಿಕ್ಕಪ್ಪನವರು ಹೊಂದಿರುವ ಎರಡು ಎಕರೆಗಳಲ್ಲಿ ಮುಖ್ಯವಾಗಿ ಗೋಧಿ ಮತ್ತು ಭತ್ತವನ್ನು ಬೆಳೆಯುತ್ತಾರೆ. "ಈ ಯುದ್ಧವು ನವೆಂಬರ್ 26ರಂದು ಪ್ರಾರಂಭವಾಗಲಿಲ್ಲ. ಆ ದಿನ ಅದು ದೆಹಲಿಯ ಗಡಿಯನ್ನು ತಲುಪಿತು" ಎಂದು ಅವರು ಹೇಳಿದರು. “ಮಸೂದೆಗಳು ಕಾನೂನಾಗುವ ಮೊದಲೇ ರೈತರು ಪ್ರತಿಭಟನೆ ಆರಂಭಿಸಿದ್ದರು.ಈ ಮೂರು ಕೃಷಿ ಕಾನೂನುಗಳನ್ನು ಸೆಪ್ಟೆಂಬರ್ 2020 ನಲ್ಲಿ ಅಂಗೀಕರಿಸಿದ ನಂತರ, ರೈತರೆಲ್ಲರಿಗೂ ದೆಹಲಿಗೆ ಬರುವಂತೆ ಕರೆ ನೀಡಲಾಯಿತು. ನಾವು ಆ ಕರೆಯನ್ನು ಅನುಸರಿಸಿದೆವು" ಎಂದು ಅವರು ಹೇಳಿದರು.
ಕಳೆದ ವರ್ಷ ನಡೆದ ಘಟನಾವಳಿಯ ಮೆರವಣಿಗೆಯನ್ನು ಅವರು ಸ್ಮರಿಸಿಕೊಳ್ಳುತ್ತಾ: “ನಾವು ನಮ್ಮ ರಾಜಧಾನಿಯತ್ತ ಸಾಗುತ್ತಿದ್ದಂತೆ, ಸರ್ಕಾರವು ಜಲ ಫಿರಂಗಿಗಳನ್ನು ಬಳಸಿತು. ಅವರು ಕಂದಕಗಳನ್ನು ಅಗೆದರು.ಆದರೆ ನಾವಿಲ್ಲಿ ಎತ್ತರದ ಬೇಲಿಗಳು ಮತ್ತು ಮುಳ್ಳುತಂತಿಗಳಿಂದ ತಡೆಯಲು ನಾವೇನು ಉದ್ವೇಗದಿಂದ ಯುದ್ಧಕ್ಕೆ ಬರುತ್ತಿಲ್ಲ. (ಕಳೆದ ವರ್ಷ, 62 ವರ್ಷದ ಜೋಗರಾಜ್ ಸಿಂಗ್ ನನಗೆ ಹೇಳಿದ್ದರು, ಅವರಂತಹ ರೈತರು ಪೊಲೀಸರಿಗೆ ಆಹಾರವನ್ನು ನೀಡುತ್ತಾರೆ, ಮತ್ತು ಪೊಲೀಸರೂ ತಮ್ಮ ಮಕ್ಕಳಿದ್ದ ಹಾಗೆ - ಆದ್ದರಿಂದ ಅವರ ಲಾಠಿಗಳಿಗೂ ಆಹಾರ ಬೇಕೆಂದರೆ ಅದಕ್ಕೂ ಬೆನ್ನೆಲುಬಾಗಿ ನಿಲ್ಲಲೂ ಸಿದ್ಧ ಎನ್ನುತ್ತಾರೆ).




















