ಬಕ್ಸಾರ್ ಜಿಲ್ಲೆಯ ಬಾರ್ಕಾ ರಾಜಪುರದಿಂದ ಉತ್ತರಕ್ಕೆ ನಾಲ್ಕು ಕಿಲೋಮೀಟರ್ ದೂರದಲ್ಲಿ ತಿಲಕ್ ರಾಯ್ ಕಾ ಹಟ್ಟ ಎನ್ನುವ 340 ಮನೆಗಳ ಗ್ರಾಮವಿದೆ. ಇಲ್ಲಿನ ಬಹುತೇಕ ಕುಟುಂಬಗಳಿಗೆ ಸ್ವಂತ ಭೂಮಿಯಿಲ್ಲ. ಇಲ್ಲಿ, ಕೆಲವು ಮನೆಗಳ ಹೊರಗಿನ ಕೈ ಪಂಪ್ಗಳಿಂದ ತುಂಬಾ ಕೊಳಕು ನೀರು ಹೊರಬರುತ್ತದೆ.
ಪ್ರಮುಖ ಸಂಶೋಧಕ ಡಾ.ಕುಮಾರ್ ಹೇಳುತ್ತಾರೆ, 2013-14ರಲ್ಲಿ, ಮಹಾವೀರ್ ಕ್ಯಾನ್ಸರ್ ಸಂಸ್ಥೆ ನಡೆಸಿದ ಅಧ್ಯಯನವು ಈ ಹಳ್ಳಿಯ ಅಂತರ್ಜಲದಲ್ಲಿ, ವಿಶೇಷವಾಗಿ ತಿಲಕ್ ರಾಯ್ ಹಟ್ಟದ ಪಶ್ಚಿಮ ಭಾಗಗಳಲ್ಲಿ ಆರ್ಸೆನಿಕ್ ಪ್ರಮಾಣವನ್ನು ಹೆಚ್ಚು ತೋರಿಸಿದೆ. ಆರ್ಸೆನಿಕೋಸಿಸ್ನ ಸಾಮಾನ್ಯ ಲಕ್ಷಣಗಳು ಹಳ್ಳಿಗರಲ್ಲಿ "ವ್ಯಾಪಕವಾಗಿ" ಕಂಡುಬಂದಿವೆ: 28 ಪ್ರತಿಶತ ಅಂಗೈ ಮತ್ತು ಅಡಿಭಾಗಗಳಲ್ಲಿ ಹೈಪರ್ಕೆರಾಟೋಸಿಸ್ (ಲೆಸಿಯಾನ್ಸ್), 31 ಪ್ರತಿಶತದಷ್ಟು ಚರ್ಮದ ಪಿಗ್ಮೆಂಟೇಶನ್ ಅಥವಾ ಮೆಲನೋಸಿಸ್, 57 ಪ್ರತಿಶತದಷ್ಟು ಪಿತ್ತಜನಕಾಂಗದ ತೊಂದರೆಗಳು, 86 ಶೇಕಡಾ ಜಠರದುರಿತ, ಮತ್ತು 9 ಪ್ರತಿಶತ ಮಹಿಳೆಯರು ಅನಿಯಮಿತ ಮುಟ್ಟಿನ ಚಕ್ರದ ಸಮಸ್ಯೆಯಿಂದ ಬಳಲುತ್ತಿದ್ದರು.
ಕಿರಣ್ ದೇವಿಯ ಪತಿ ಬಿಚ್ಚು ಕಾ ಡೇರಾ ಎಂದು ಕರೆಯಲ್ಪಡುವ ಈ ಗ್ರಾಮದಲ್ಲಿ ಪ್ರತ್ಯೇಕವಾದ ಇಟ್ಟಿಗೆ ಮತ್ತು ಮಣ್ಣಿನ ಮನೆಯಲ್ಲಿ ವಾಸಿಸುತ್ತಿದ್ದರು. ಅವರು ಹೇಳುತ್ತಾರೆ, "ಹಲವಾರು ತಿಂಗಳುಗಳಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಆತ 2016ರಲ್ಲಿ ನಿಧನರಾದರು." ಕುಟುಂಬವು ಅವರನ್ನು ಸಿಮ್ರಿ ಮತ್ತು ಬಕ್ಸಾರ್ನಲ್ಲಿರುವ ಹಲವಾರು ವೈದ್ಯರ ಬಳಿಗೆ ಕರೆದೊಯ್ದಿತು, ಮತ್ತು ಅವರಿಗೆ ವಿಭಿನ್ನವಾಗಿ ಚಿಕಿತ್ಸೆ ನೀಡಲಾಯಿತು. 50ಕ್ಕಿಂತ ಹೆಚ್ಚಿನ ವಯಸ್ಸಿನವರಾದ ಕಿರಣ್, "ಅವರು ಟಿಬಿ ಅಥವಾ ಅಥವಾ ಲಿವರ್ ಕ್ಯಾನ್ಸರ್ ಎಂದು ಹೇಳಿದರು." ಎಂದು ಹೇಳುತ್ತಾರೆ. ಅವರು ಒಂದು ಸಣ್ಣ ಭೂಮಿಯ ತುಂಡನ್ನು ಹೊಂದಿದ್ದಾರೆ, ಆದರೆ ಅವರ ಗಂಡನ ಮುಖ್ಯ ಆದಾಯದ ಮೂಲವೆಂದರೆ ದಿನಗೂಲಿಯಾಗಿತ್ತು.
2018ರಿಂದ, ಕಿರಣ್ ದೇವಿಯವರ ಅಂಗೈಗಳು ಗಟ್ಟಿಯಾದ ಮತ್ತು ಮಸುಕಾದ ಬಣ್ಣದ ಕಲೆಗಳನ್ನು ಹೊಂದಿದ್ದು, ಇದು ನೀರಿನಲ್ಲಿ ಆರ್ಸೆನಿಕ್ ಕಲಬೆರಕೆಯನ್ನು ಸೂಚಿಸುತ್ತದೆ. "ಇದು ನೀರಿನ ಪರಿಣಾಮ ಎಂದು ನನಗೆ ತಿಳಿದಿದೆ, ಆದರೆ ನಾನು ನನ್ನ ಪಂಪ್ ಅನ್ನು ಬಳಸದಿದ್ದರೆ, ನೀರಿಗೆ ಏನು ಮಾಡುವುದು?" ಅವರ ಮನೆಯ ಕೈ ಪಂಪ್ ಮನೆಯ ಹೊರಗೆ, ಒಂದು ಸಣ್ಣ ಆವರಣದಲ್ಲಿದೆ, ಅಲ್ಲಿ ಒಂದು ಎತ್ತನ್ನು ಕಟ್ಟಲಾಗಿತ್ತು.
ಮಳೆಗಾಲ ಮುಗಿದ ನಂತರ, (ನವೆಂಬರ್ನಿಂದ ಮೇ) ನೀರಿನ ಗುಣಮಟ್ಟವು ಹದಗೆಡುತ್ತದೆ ಮತ್ತು ನೀರು ಬೆರೆಸಿದ ಚಹಾದಂತೆ ಕಾಣುತ್ತದೆ ಎಂದು ಅವರು ಹೇಳುತ್ತಾರೆ. ಅವರು ಕೇಳುತ್ತಾರೆ, “ನಾವು ಎರಡು ಹೊತ್ತಿನ ಊಟಕ್ಕೇ ಪಡಿಪಾಟಲುಪಡುತ್ತೇವೆ. ನಾನು ವೈದ್ಯರಲ್ಲಿಗೆ ಅಥವಾ ಪರೀಕ್ಷೆಗಾಗಿ ಪಾಟ್ನಾಗೆ ಹೇಗೆ ಹೋಗಲು ಸಾಧ್ಯ? ಅವರ ಅಂಗೈಗಳು ತುಂಬಾ ತುರಿಸುತ್ತಿರುತ್ತವೆ ಮತ್ತು ಡಿಟರ್ಜೆಂಟ್ ಬಾರ್ ಸ್ಪರ್ಶಿಸಿದಾಗ ಅಥವಾ ಜಾನುವಾರುಗಳ ಸಗಣಿಯನ್ನು ಎತ್ತಿ ಹಾಕುವಾಗ ಕೈ ಉರಿಯುತ್ತದೆ.
ರಾಮುನಿ ಹೇಳುತ್ತಾರೆ, "ಮಹಿಳೆಯರು ಮತ್ತು ನೀರಿನ ನಡುವೆ ನಿಕಟ ಸಂಬಂಧವಿದೆ, ಏಕೆಂದರೆ ಮನೆಯ ಎಲ್ಲಾ ಕೆಲಸಗಳನ್ನು ಈ ಎರಡರ ಸಹಾಯದಿಂದ ಮಾಡಲಾಗುತ್ತದೆ. ಹೀಗಾಗಿ, ನೀರು ಕೆಟ್ಟದಾಗಿದ್ದರೆ, ನಿಸ್ಸಂಶಯವಾಗಿ ಮಹಿಳೆಯರ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಉಮಾಶಂಕರ್ ಹೇಳುವಂತೆ ಕ್ಯಾನ್ಸರ್ ಅನ್ನು ಸಾಮಾಜಿಕ ಕಳಂಕವೆಂದು ಪರಿಗಣಿಸಲಾಗುತ್ತದೆ, ಇದರಿಂದಾಗಿ ಅನೇಕ ಜನರು, ವಿಶೇಷವಾಗಿ ಮಹಿಳೆಯರು ಚಿಕಿತ್ಸೆಗೆ ಹೋಗಲು ಹಿಂಜರಿಯುತ್ತಾರೆ, ಮತ್ತು ಚಿಕಿತ್ಸೆ ಪಡೆಯುವುದು ತಡವಾಗುತ್ತದೆ.
ರಾಮುನಿಯವರಿಗೆ ಸ್ತನದ ಕ್ಯಾನ್ಸರ್ ಇರುವುದು ಪತ್ತೆಯಾದ ಕೂಡಲೇ, ಗ್ರಾಮದ ಅಂಗನವಾಡಿ ಜನರಿಗೆ ನೀರಿನ ಗುಣಮಟ್ಟದ ಬಗ್ಗೆ ಅರಿವು ಮೂಡಿಸುವ ಅಭಿಯಾನವನ್ನು ಆರಂಭಿಸಿತು. ರಾಮುನಿ ಅವರು ಮುಖ್ಯಸ್ಥರಾಗಿ ಆಯ್ಕೆಯಾದರೆ ಈ ದಿಕ್ಕಿನಲ್ಲಿ ಹೆಚ್ಚಿನ ಕೆಲಸ ಮಾಡಲು ಯೋಜಿಸುತ್ತಿದ್ದಾರೆ. ಅವರು ಹೇಳುತ್ತಾರೆ, "ಪ್ರತಿಯೊಬ್ಬರೂ ತಮ್ಮ ಮನೆಗಳಿಗೆ RO ನೀರನ್ನು ಖರೀದಿಸಲು ಸಾಧ್ಯವಿಲ್ಲ ಮತ್ತು ಎಲ್ಲಾ ಮಹಿಳೆಯರಿಗೂ ಸುಲಭವಾಗಿ ಆಸ್ಪತ್ರೆಗೆ ಹೋಗಲು ಸಾಧ್ಯವಿಲ್ಲ. ಈ ಕಷ್ಟವನ್ನು ನಿವಾರಿಸಲು ನಾವು ಇತರ ಮಾರ್ಗಗಳನ್ನು ಅನ್ವೇಷಿಸುವುದನ್ನು ಮುಂದುವರಿಸುತ್ತೇವೆ."
ಗ್ರಾಮೀಣ ಭಾರತದ ಹದಿಹರೆಯದ ಬಾಲಕಿಯರು ಮತ್ತು ಯುವತಿಯರ ಬಗ್ಗೆ PARI ಮತ್ತು ಕೌಂಟರ್ ಮೀಡಿಯಾ ಟ್ರಸ್ಟ್ನ ಬೆಂಬಲಿತ ರಾಷ್ಟ್ರವ್ಯಾಪಿ ವರದಿ ಮಾಡುವ ಯೋಜನೆಯು ಮಹತ್ವದ ಆದರೆ ಸಮಾಜದ ಅಂಚಿನಲ್ಲಿರುವ ಗುಂಪುಗಳ ಪರಿಸ್ಥಿತಿಯನ್ನು ಅನ್ವೇಷಿಸಲು, ಸಾಮಾನ್ಯ ಜನರ ಮಾತುಗಳು ಮತ್ತು ಜೀವಂತ ಅನುಭವಗಳ ಮೂಲಕ ತಿಳಿಯುವ ಉದ್ದೇಶವನ್ನು ಹೊಂದಿದೆ. ಇದು ಪಾಪ್ಯುಲೇಷನ್ ಆಫ್ ಇಂಡಿಯಾದ ಬೆಂಬಲವನ್ನು ಹೊಂದಿದೆ.
ಈ ಲೇಖನವನ್ನು ಮರುಪ್ರಕಟಿಸುವ ಆಸಕ್ತಿಯಿದೆಯೇ? ಹಾಗಿದ್ದಲ್ಲಿ ದಯವಿಟ್ಟು ಈ ಇ-ಮೇಲ್ ವಿಳಾಸವನ್ನು ಸಂಪರ್ಕಿಸಿ: [email protected] ಒಂದು ಕಾರ್ಬನ್ ಪ್ರತಿಯನ್ನು [email protected]. ಈ ವಿಳಾಸಕ್ಕೆ ಕಳುಹಿಸಿ
ಅನುವಾದ: ಶಂಕರಎನ್. ಕೆಂಚನೂರು