ಖೇಲಾ ಹೋಬೆ (ಆಟ ನಡೆಯುತ್ತಿದೆ) ಮತ್ತು ಅಬ್ಕಿ ಬಾರ್ 400 ಪಾರ್ (ಈ ಬಾರಿ ನಾವು 400 ಗಡಿ ದಾಟುತ್ತೇವೆ) ನಡುವೆ ಸಿಲುಕಿರುವ ನಮ್ಮ ತವರು ರಾಜ್ಯವೆನ್ನುವುದು ಸಣ್ಣ ಭಾರತ, ಇದೊಂದು ಸರ್ಕಾರಿ ಯೋಜನೆಗಳು, ಸಿಂಡಿಕೇಟ್ ಮಾಫಿಯಾಗಳು, ಸರ್ಕಾರದ ಕೊಡುಗೆಗಳು ಮತ್ತು ಭಿನ್ನಾಭಿಪ್ರಾಯದ ಆಂದೋಲನಗಳ ಕುತೂಹಲಕಾರಿ ಮಿಶ್ರಣ.
ಉದ್ಯೋಗದಲ್ಲಿ ಸಿಲುಕಿರುವ ನಿರಾಶ್ರಿತ ವಲಸಿಗರು ಮತ್ತು ತಾಯ್ನಾಡಿನಲ್ಲಿರುವ ಹತಾಶ ನಿರುದ್ಯೋಗಿ ಯುವಕರು, ಕೇಂದ್ರ ಮತ್ತು ರಾಜ್ಯ ನಡುವಿನ ಸಂಘರ್ಷದಲ್ಲಿ ಸಿಲುಕಿರುವ ಸಾಮಾನ್ಯ ಜನರು, ಹವಾಮಾನ ಬದಲಾವಣೆಯಿಂದ ಕಂಗೆಟ್ಟಿರುವ ರೈತರು ಮತ್ತು ಮೂಲಭೂತವಾದಿ ಭಾಷಣಗಳ ವಿರುದ್ಧ ಹೋರಾಡುತ್ತಿರುವ ಅಲ್ಪಸಂಖ್ಯಾತರು ಇಲ್ಲಿದ್ದಾರೆ. ಜಾತಿ, ವರ್ಗ, ಲಿಂಗ, ಭಾಷೆ, ಜನಾಂಗೀಯತೆ, ಧರ್ಮ, ಎಲ್ಲವೂ ಮುಖ್ಯ ರಸ್ತೆಗಳಲ್ಲಿ ಗದ್ದಲ ಮಾಡುತ್ತಿವೆ.
ಈ ಹುಚ್ಚು ಜಗತ್ತಿನ ನಡುವೆ ಬದುಕುವಾಗ ಸಂಪೂರ್ಣವಾಗಿ ಗೊಂದಲಕ್ಕೊಳಗಾದ, ಅಸಹಾಯಕ, ಭ್ರಮನಿರಸನಗೊಂಡ ಧ್ವನಿಗಳು ಮತ್ತು ಅಧಿಕಾರದಲ್ಲಿರುವವರ ಮೋಡಿ ಮಾತುಗಳಿಗೆ ಮರುಳಾಗದ ಜನರೂ ಸಿಗುತ್ತಾರೆ. ಸಂದೇಶ್ ಖಾಲಿಯಿಂದ ಹಿಮಾಲಯದ ಚಹಾ ತೋಟಗಳವರೆಗೆ, ಕೋಲ್ಕತ್ತಾದಿಂದ ರಾರ್ಹ್ ರೀತಿಯ ಮರೆತುಹೋದ ಪ್ರದೇಶಗಳವರೆಗೆ ಸುತ್ತಾಡುತ್ತಾ ಜನರ ಮಾತು ಕೇಳಿದ್ದೇವೆ, ಚಿತ್ರಗಳನ್ನು ಕ್ಲಿಕ್ಕಿಸಿದ್ದೇವೆ ಮತ್ತು ಮಾತನಾಡಿದ್ದೇವೆ.

















