"ಅಮ್ಮಾ, ಶಾಲೆ ಯಾವಾಗ ತೆರೆಯುತ್ತದೆ?" ಎಂದು ಮುನಿಯಾ ಕೇಳುತ್ತಾಳೆ. ಸೆಣಬಿನ ಸಸ್ಯಗಳನ್ನು ತೆಳುಗೊಳಿಸುವ ಕೊನೆಯ ಸುತ್ತಿನ ಪ್ರಯತ್ನವನ್ನು ಸಹಾರಾ ಮುಂದುವರಿಸಿದ್ದರು. ಇದು ಅವರ 0.10 ಎಕರೆ ಭೂಮಿಯಲ್ಲಿ ಬಿಡುವಿಲ್ಲದ ಕೆಲಸದ ದಿನಗಳ ಸಮಯ. ಮುನಿಯಾಳ ಪ್ರಶ್ನೆಗಳಿಗೆ ಅವರ ಬಳಿ ಸಮಯವಿಲ್ಲ.

"ಶಾಲೆಗಳು ಏಕೆ ತೆರೆಯುತ್ತಿಲ್ಲ...!" ಪುಟ್ಟ ಹುಡುಗಿ ಅದೇ ಪ್ರಶ್ನೆಯನ್ನು ಮತ್ತೆ ಕೇಳುತ್ತಿದ್ದಾಳೆ. ಈ ಬಾರಿ ಸಹಾರಾ ಚೂರು ಕೆಲಸ ನಿಲ್ಲಿಸಿ, ಅವಳ ಕಡೆಗೆ ತಿರುಗಿ ತನ್ನ ಧ್ವನಿಯಲ್ಲಿನ ಹತಾಶೆಯನ್ನು ನಿಯಂತ್ರಿಸಲು ತೀವ್ರವಾಗಿ ಪ್ರಯತ್ನಿಸುತ್ತಾ ಹೇಳುತ್ತಾರೆ: "ದೇಖಿಶ್ ನಾ ಕೀ ಗ್ರೂಮ್ (ನಿನಗೆ ಸುಡುವ ಬಿಸಿಲು ಕಾಣುತ್ತಿಲ್ಲವೆ? ಎಂಟು ತಿಂಗಳಿನಿಂದ ಮಳೆಯಾಗಿಲ್ಲ).”

“ಹಾಗಿದ್ದರೆ ಅವರು ಏಕೆ ಎಸಿ ಹಾಕಿಸುವುದಿಲ್ಲ?” ಮುನಿಯಾ ತನ್ನ ಪಟ್ಟು ಬಿಡುವುದಿಲ್ಲ.

"ಸರ್ಕಾರದ ಬಳಿ ಹಣವಿಲ್ಲ." ಸಹಾರಾರ ತಾಳ್ಮೆ ಕಡಿಮೆಯಾಗುತ್ತಿದೆ.

"ಬೊರೊಲೋಕ್ ಇಂಗ್ಲಿಷ್ ಶಾಲೆಗಳಲ್ಲಿ (ಶ್ರೀಮಂತರ ಇಂಗ್ಲಿಷ್ ಮಾಧ್ಯಮ ಶಾಲೆಗಳು) ಇಷ್ಟೊಂದು ಎಸಿಗಳು ಏಕಿವೆ?"

ಸಹಾರಾ ಸಂಜೆಯವರೆಗೆ ಕಠಿಣ ಪರಿಶ್ರಮ ಮತ್ತು ಮೌನದಲ್ಲಿ ಮುಳುಗುತ್ತಾರೆ. ಅಂದು ಅವರು ತನ್ನ ಕೆಲಸವನ್ನು ಅಪೂರ್ಣವಾಗಿ ಬಿಟ್ಟು ಇಂದು ಮುನಿಯಾ ಮನೆಗೆ ಧಾವಿಸಬೇಕಾಯಿತು. ಅಂದು ಮತದಾನದ ದಿನ. ಸಹಾರಾ ತನ್ನ ಎಂಟು ವರ್ಷದ ಮಗಳೊಂದಿಗೆ ಮತ ಚಲಾಯಿಸಲು ಪ್ರಾಥಮಿಕ ಶಾಲೆಯಲ್ಲಿನ ಬೂತ್ ಕಡೆಗೆ ಧಾವಿಸುತ್ತಾರೆ.

“ನಾವು ಏಕೆ ಮತ ಚಲಾಯಿಸಬೇಕು ಅಮ್ಮಿ?” ಮುನಿಯಾಳ ಪ್ರಶ್ನೆಗಳು ನಿಲ್ಲುತ್ತಲೇ ಇರಲಿಲ್ಲ. ಈ ಕ್ಷಣಕ್ಕೆ ವಿಷಯ ಬದಲಾಗಿರುವುದು ಅವಳ ಅಮ್ಮ ಸಹಾರರಿಗೆ ಸಮಾಧಾನ ತಂದಿತ್ತು. ಆದರೆ ಅವರಿಗೆ ಪ್ರಶ್ನೆಗಳಿಗೆ ಉತ್ತರಿಸುವಷ್ಟು ತ್ರಾಣವಿರಲಿಲ್ಲ.

“ನಿನ್ನೆ ಟಿವಿಯಲ್ಲಿ ದೊಡ್ಡ ನಾಯಕರೊಬ್ಬರು ನಮಗೆ ಮುಸ್ಲಿಂ ಮತ ಬೇಡ ಎನ್ನುತ್ತಿದ್ದರು. ನಾವು ಮುಸ್ಲಿಮರಲ್ಲವೆ ಅಮ್ಮಿ? ನಾವೇಕೆ ಮತ ಚಲಾಯಿಸುತ್ತಿದ್ದೇವೆ?”

ಸಾಲಿನಲ್ಲಿ ನಿಂತಿದ್ದ ಸಹರಾ ಒಮ್ಮೆ ನಿಂತು ಮಗುವಿನ ಮುಖವನ್ನು ನೋಡಿದರು. ಮುನಿಯಾಳಿಗೆ ಆ ತಣ್ಣಗಿನ ಖಾಲಿ ನೋಟದ ಅರ್ಥ ತಿಳಿದಿತ್ತು. ಅವಳು ಸುಮ್ಮನಾದಳು.

ಮೌಮಿತಾ ಆಲಂ ಅವರ ಕವಿತೆಯನ್ನು ಪ್ರತಿಷ್ಠಾ ಪಾಂಡ್ಯ ದನಿಯಲ್ಲಿ ಕೇಳಿ

Indian Election

1. Freebies

Election days make our poverty bare –
Laxmi Bhandar for Muniyaa's mother
Cycle for Muniyya's father.
Free dresses for Muniyya in school.

What does Muniyaa need?
The manifestos never know.

The dilapidated school buildings
now shelter goats.
Rats run amok
on the scaffoldings of factory floors.
Leaders give freebies.
and gobble up our jobs.

2. Language

The leaders play scrabble on the election board.
Time runs fast.
They have a winning concoction at last:
Language sliced into little pieces,
marinated in hatred,
served on platters glazed
for television viewers
and WhatsApp chatters

3. God-crazy

( Hum e vote dijiye
Hum mandir banayenge
Vote for us
We will build Temples)

I see the gods winning…
gods of a certain religion
partisan gods
gods that live in their houses
gods that don't visit our homes
or roam our streets.
Gods that don't know hunger
or inflation or what it means
to want our daughters’ education.

Don't blame me now
for being blasphemous
or an atheist.
I see all the leaders fighting
this battle over gods –
talking to priests not people.
They visit the temples
not worshiping shanties.

They fight over gods –
their gods versus our gods!
Tomorrow, it will be gods’ victory.
Oh, inflation, starvation, poverty!
Oh, democracy!

ಭಾರತದ ಚುನಾವಣೆ

1. ಬಿಟ್ಟಿಭಾಗ್ಯ

ಚುನಾವಣಾ ದಿನಗಳು ನಮ್ಮ ಬಡತವನ್ನು ಬಯಲಿಗಿಡುತ್ತವೆ
ಮುನಿಯಾಳ ತಾಯಿಗೆ ಲಕ್ಷ್ಮಿ ಭಂಡಾರ
ಮುನಿಯಾಳ ತಂದೆಗೆ ಸೈಕಲ್‌
ಮುನಿಯಾಳಿಗೆ ಉಚಿತ ಶಾಲಾ ಸಮವಸ್ತ್ರ

ಮುನಿಯಾಳಿಗೆ ಏನು ಬೇಕು?
ಪ್ರಣಾಳಿಕೆಗಳಿ ಎಂದಿಗೂ ತಿಳಿಯುವುದಿಲ್ಲ

ಮುರುಕಲು ಶಾಲಾ ಕಟ್ಟಡಗಳೀಗ
ಕುರಿ ದೊಡ್ಡಿಯಾಗಿವೆ
ಕಾರ್ಖಾನೆಗಳ ಮಾಡಿನಲ್ಲಿ ಇಲಿಗಳ ಬಳಗ
ಉಚಿತಗಳನ್ನು ನೀಡುತ್ತಾ
ರಾಜಕಾರಣಿಗಳು ಕಸಿಯುತ್ತಿದ್ದಾರೆ ನಮ್ಮ ಕೆಲಸವನ್ನು

2. ಭಾಷೆ

ಚುನಾವಣಾ ಮಂಡಳಿಯಲ್ಲಿ ನಾಯಕರ ಆಟ
ಕಾಲ ಚಲಿಸುತ್ತಿದೆ ವೇಗವಾಗಿ
ಅವರ ಬಳಿ ಗೆಲುವಿನ ಅದ್ಭುತ ಸೂತ್ರವಿದೆ:
ಭಾಷೆಯನ್ನು ಸಣ್ಣ ತುಂಡುಗಳನ್ನಾಗಿ ಕತ್ತರಿಸಿ
ದ್ವೇಷದಲ್ಲಿ ಮುಳುಗಿಸಿಟ್ಟು
ಹೊಳೆಯು ತಟ್ಟೆಗಳಲ್ಲಿ ಬಡಿಸುತ್ತಾರೆ
ಟಿವಿ ನೋಡುಗರಿಗಾಗಿ
ವಾಟ್ಸಪ್‌ ಬಳಕೆದಾರರಿಗಾಗಿ

3. ದೇವ-ಪ್ರಭುತ್ವ

ಹಮೇ ವೋಟ್‌ ದೀಜಿಯೇ
ಹಮ್‌ ಮಂದಿರ್‌ ಬನಾಯೇಂಗೆ
(ನಮಗೆ ಮತ ನೀಡಿ
ನಾವು ಮಂದಿರ ನಿರ್ಮಿಸುತ್ತೇವೆ)

ದೇವರು ಚುನಾವಣೆ ಗೆಲ್ಲುತ್ತಿದ್ದಾನೆ
ನಿರ್ದಿಷ್ಟ ಧರ್ಮಕ್ಕೆ ಸೇರಿದ ದೇವರು
ಪಕ್ಷಪಾತಿ ದೇವರು
ಅವರ ಮನೆಗಳಲ್ಲಿ ಬದುಕುವ ದೇವರು
ನಮ್ಮ ಮನೆಗಳಿಗೆ ಬಾರದ ದೇವರು
ನಮ್ಮ ಬೀದಿಗಳಲ್ಲೂ ಸುಳಿಯದ ದೇವರು.
ಹಸಿವೆಂದರೇನೆಂದು ತಿಳಿಯದ ದೇವರು
ಬೆಲೆಯೇರಿಕೆ ಎಂದರೇನೆಂದು ಅರಿಯದ ದೇವರು
ನಮ್ಮ ಹೆಣ್ಣು ಮಕ್ಕಳಿಗೆ ವಿದ್ಯೆ ಬೇಕೆಂದು ತಿಳಿಯದ ದೇವರು.

ನನ್ನನ್ನು ದೂಷಿಸಬೇಡಿ ದರ್ಮ ನಿಂದನೆ ಮಾಡಿದೆನೆಂದು
ಅಥವಾ ನಾಸ್ತಿಕಳೆಂದು
ಎಲ್ಲಾ ನಾಯಕರೂ ದೇವರಿಗಾಗಿ ಹೋರಾಡುತ್ತಿದ್ದಾರೆ
ಇವರ ಮಾತುಕತೆಯೇನಿದ್ದರೂ ಪುರೋಹಿತರೊಂದಿಗೆ
ಇವರಿಗೆ ಜನರೊಂದಿಗೆ ಸಂಪರ್ಕವೇ ಇಲ್ಲ
ಅವರು ನೇರ ಮಂದಿರಗಳಿಗೆ ಹೋಗುತ್ತಾರೆ
ದೇವನ ಭಕ್ತರಿರುವ ಗುಡಿಸಲು ಅವರಿಗೆ ಕಾಣುವುದೇ ಇಲ್ಲ.

ಅವರು ದೇವರುಗಳಿಗಾಗಿ ಹೋರಾಡುತ್ತಾರೆ
ಅವರ ದೇವರು – ನಮ್ಮದೇವರು ಎನ್ನುವ ಹೋರಾಟ ಅವರದು!
ದೇವರಿಗಷ್ಟೇ ಇಲ್ಲಿ ಭವಿಷ್ಯವಿರುವುದು!
ಇದು ದೇವರ ಗೆಲುವು.
ಹಣದುಬ್ಬರ, ಬಡತನ
ಹಸಿವು, ಓಹ್‌ ಮತ್ತೆ ಪ್ರಜಾಪ್ರಭುತ್ವ!
ಹಾಗೆಂದರೇನು?!


ಅನುವಾದ: ಶಂಕರ. ಎನ್. ಕೆಂಚನೂರು

Poem and Text : Moumita Alam

ମୌମିତା ଆଲମ ହେଉଛନ୍ତି ପଶ୍ଚିମବଙ୍ଗର ଜଣେ କବି। ତାଙ୍କର ଦୁଇଟି କବିତା ସଂକଳନ ପ୍ରକାଶିତ – ‘ଦ ମ୍ୟୁଜିଙ୍ଗସ ଅଫ ଦି ଡାର୍କ’ (‘ଅନ୍ଧକାରର ଗୀତ’) ଓ ‘ପୋଏମ୍ସ ଆଟ ଡେ’ବ୍ରେକ’ (‘ଭୋର ବେଳର କବିତା’)। ତାଙ୍କ କୃତିସମୂହ ତେଲୁଗୁ ଓ ତାମିଲ ଭାଷାରେ ମଧ୍ୟ ଅନୁଦିତ।

ଏହାଙ୍କ ଲିଖିତ ଅନ୍ୟ ବିଷୟଗୁଡିକ Moumita Alam
Illustration : Antara Raman

ଅନ୍ତରା ରମଣ ଜଣେ ଚିତ୍ରକର ଏବଂ ସାମାଜିକ ପ୍ରକ୍ରିୟା ଓ ପୌରାଣିକ ଚିତ୍ର ପ୍ରତି ଆଗ୍ରହ ରହିଥିବା ଜଣେ ୱେବସାଇଟ୍ ଡିଜାଇନର୍। ବେଙ୍ଗାଲୁରୁର ସୃଷ୍ଟି ଇନଷ୍ଟିଚ୍ୟୁଟ୍ ଅଫ୍ ଆର୍ଟ, ଡିଜାଇନ୍ ଏବଂ ଟେକ୍ନୋଲୋଜିର ସ୍ନାତକ ଭାବେ ସେ ବିଶ୍ୱାସ କରନ୍ତି ଯେ କାହାଣୀ ବର୍ଣ୍ଣନା ଏବଂ ଚିତ୍ରକଳା ସହଜୀବୀ।

ଏହାଙ୍କ ଲିଖିତ ଅନ୍ୟ ବିଷୟଗୁଡିକ Antara Raman
Editor : Pratishtha Pandya

ପ୍ରତିଷ୍ଠା ପାଣ୍ଡ୍ୟା ପରୀରେ କାର୍ଯ୍ୟରତ ଜଣେ ବରିଷ୍ଠ ସମ୍ପାଦିକା ଯେଉଁଠି ସେ ପରୀର ସୃଜନଶୀଳ ଲେଖା ବିଭାଗର ନେତୃତ୍ୱ ନେଇଥାନ୍ତି। ସେ ମଧ୍ୟ ପରୀ ଭାଷା ଦଳର ଜଣେ ସଦସ୍ୟ ଏବଂ ଗୁଜରାଟୀ ଭାଷାରେ କାହାଣୀ ଅନୁବାଦ କରିଥାନ୍ତି ଓ ଲେଖିଥାନ୍ତି। ସେ ଜଣେ କବି ଏବଂ ଗୁଜରାଟୀ ଓ ଇଂରାଜୀ ଭାଷାରେ ତାଙ୍କର କବିତା ପ୍ରକାଶ ପାଇଛି।

ଏହାଙ୍କ ଲିଖିତ ଅନ୍ୟ ବିଷୟଗୁଡିକ Pratishtha Pandya
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

ଏହାଙ୍କ ଲିଖିତ ଅନ୍ୟ ବିଷୟଗୁଡିକ Shankar N. Kenchanuru