ಎಲ್ಲವೂ ಎಂದಿನಂಥೆ ಇರುತ್ತಿದ್ದರೆ ಇಷ್ಟೊತ್ತಿಗೆ ಶಂಶುದ್ದೀನ್ ಮುಲ್ಲಾ ಎಂಜಿನ್ ಮತ್ತು ಪಂಪ್ಗಳನ್ನು ಸರಿಪಡಿಸಲು ಹೊಲಗಳಲ್ಲಿ ಇರುತ್ತಿದ್ದರು.
ಲಾಕ್ಡೌನ್ನ ಎರಡನೇ ದಿನವಾದ ಮಾರ್ಚ್ 26ರಂದು ಅವರು ಸುಲ್ಕುದ್ ಗ್ರಾಮ (ಕೊಲ್ಹಾಪುರ ಜಿಲ್ಲೆಯ ಕಾಗಲ್ ತಾಲೂಕು)ದಲ್ಲಿರುವ ಅವರ ಮನೆಗೆ ಹತಾಶನಾಗಿದ್ದ ರೈತ ಬಂದಾಗಲಷ್ಟೇ ಅವರು ಮನೆಯಿಂದ ಹೊರಗೆ ಕಾಲಿಟ್ಟಿದ್ದು, "ಅವರು ನನ್ನನ್ನು ತಮ್ಮ ಜಮೀನಿಗೆ ಕರೆದೊಯ್ದರು, ಅಲ್ಲಿ ನಾನು ಅವರ ಡೀಸೆಲ್-ಎಂಜಿನ್ ವಾಟರ್ ಪಂಪ್ ಸೆಟ್ ಅನ್ನು ಸರಿಪಡಿಸಿದೆ." ಒಂದು ವೇಳೆ ಶಂಶುದ್ದೀನ್ ಹಾಗೆ ಮಾಡದೆ ಹೋಗಿದ್ದಲ್ಲಿ, ರೈತನು ತನ್ನ ಕಬ್ಬಿನ ಬೆಳೆಗೆ ನೀರು ಹಾಯಿಸುವುದು ಕಷ್ಟವಾಗುತ್ತಿತ್ತು.
ತಮ್ಮ 10ನೇ ವಯಸ್ಸಿನಲ್ಲಿ ಕೆಲಸ ಮಾಡಲು ಆರಂಭಿಸಿದ್ದ 84 ವರ್ಷದ ಈ ಮಾಸ್ಟರ್ ಮೆಕ್ಯಾನಿಕ್, ತಮ್ಮ 74 ವರ್ಷಗಳ ಜೀವನದಲ್ಲಿ ಇದೇ ಎರಡನೇ ಬಾರಿಗೆ ಇಂಜಿನ್ ಸರಿಪಡಿಸುವ ಕೆಲಸದಿಂದ ವಿರಾಮ ತೆಗೆದುಕೊಂಡಿದ್ದಾರೆ. ಇದಕ್ಕೂ ಮೊದಲು ಅವರು 2019ರ ಜನವರಿಯಲ್ಲಿ ಆಂಜಿಯೋಪ್ಲ್ಯಾಸ್ಟಿ ಶಸ್ತ್ರಚಿಕಿತ್ಸೆಗೆ ಒಳಗಾದಾಗ ತೆಗೆದುಕೊಂಡಿದ್ದರು.
ಶಂಶುದ್ದೀನ್ ತಮ್ಮ ಏಳು ದಶಕದ ವೃತ್ತಿ ಜೀವನದಲ್ಲಿ ಬೋರ್ವೆಲ್ ಪಂಪ್ಗಳು, ಕಿರಿದಾದ-ಅಗೆಯುವ ಯಂತ್ರಗಳು, ನೀರಿನ ಪಂಪ್ಗಳು, ಡೀಸೆಲ್ ಎಂಜಿನ್ಗಳು ಸೇರಿದಂತೆ 5,000ಕ್ಕೂ ಹೆಚ್ಚು ಎಂಜಿನ್ಗಳನ್ನು ದುರಸ್ತಿ ಮಾಡಿದ್ದಾರೆ ಮತ್ತು ಈಗ ಅವರ ಈ ಕೌಶಲ ಕಲೆಯ ಮಟ್ಟಕ್ಕೆ ಏರಿದೆ. ಕರ್ನಾಟಕದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಬಾರವಾಡ್ ಗ್ರಾಮದಲ್ಲಿರುವ ಅವರ ಮನೆ ಬಹಳ ಹಿಂದಿನಿಂದಲೂ ಕೂಡ ಯಂತ್ರೋಪಕರಣಗಳ ಸಮಸ್ಯೆಯೊಂದಿಗೆ ಬರುವ ರೈತರಿಗೆ ಒಂದು ರೀತಿ ಎಸ್ಒಎಸ್ ಕೇಂದ್ರದಂತಾಗಿದೆ. ಸಾಮಾನ್ಯ ವರ್ಷದಲ್ಲಿ ಅವರ ಗರಿಷ್ಟ ದುಡಿಮೆಯ ದಿನಗಳೆಂದರೆ ಮಾರ್ಚ್, ಎಪ್ರಿಲ್, ಮೇ ತಿಂಗಳುಗಳು. ಈ ಅವಧಿಯಲ್ಲಿ ಅವರು 30 ವಿವಿಧ ರೀತಿಯ ಇಂಜಿನ್ನುಗಳನ್ನು ದುರಸ್ತಿ ಮಾಡಬಹುದೆಂದು ಅವರು ಅಂದಾಜಿಸುತ್ತಾರೆ. ಈ ಕೆಲಸದಮೂಲಕ ಅವರು ಇಂಜಿನ್ ಒಂದಕ್ಕೆ 500 ರೂಪಾಯಿಗಳನ್ನು ಸಂಪಾದಿಸುತ್ತಾರೆ. ಆದರೆ ಈಗ ಲಾಕ್ ಡೌನ್ ನಿಂದಾಗಿ ಎಲ್ಲವೂ ನಷ್ಟವಾಗಿದೆ.
ಈಗ ಅವರ ಕುಟುಂಬವು ಫೆಬ್ರುವರಿ ಮತ್ತು ಮಾರ್ಚ್ ತಿಂಗಳಲ್ಲಿ ಅವರು ರಿಪೇರಿ ಮಾಡಿದ ಎಂಟು ಇಂಜಿನ್ ಗಳಿಂದ ಬಂದಂತಹ 5000 ರೂ.ಗಳ ಆದಾಯ ಮತ್ತು ಸರ್ಕಾರವು ಘೋಷಿಸಿದ ಪ್ರತಿಯೊಬ್ಬರಿಗೂ ಐದು ಕಿಲೋಗ್ರಾಂಗಳಷ್ಟು ಉಚಿತ ಆಹಾರ ಧಾನ್ಯಗಳ ರೇಷನ್ ಮೇಲೆ ನಡೆಯುತ್ತಿದೆ.












