ಮಹಾರಾಷ್ಟ್ರದ ಪಾಲ್ಘಡ್ ಜಿಲ್ಲೆಯ ನಿಂಬಾವಳಿ ಗ್ರಾಮದ ಮರವೊಂದರ ಕೆಳಗಡೆ ಮಧ್ಯ ವಯಸ್ಸಿನ ಯುವಕರು ಇಂದಿಗೂ ಕಾರ್ಯರೂಪಕ್ಕೆ ಬಾರದ 10 ವರ್ಷಗಳ ಹಿಂದಿನ ಕಾರ್ಯಕ್ರಮವೊಂದರ ಬಗ್ಗೆ ಚರ್ಚಿಸುತ್ತಿದ್ದರು. ಕಾಗದ, ಅಳತೆಯ ಸಾಧನಗಳು,ಮಾಪನಗಳು, ಅಳತೆಯ ಟೇಪ್ಗಳೊಂದಿಗೆ ಸರಕಾರಿ ಅಧಿಕಾರಿಗಳ ತಂಡ ಕಾರಿನಿಂದ ಬಂದಿಳಿಯಿತು. ಭೂಮಿಯಡಿಯಲ್ಲಿರುವ ನೀರನ್ನು ಪತ್ತೆ ಮಾಡಲು ಅಗೆಯುವುದಕ್ಕಾಗಿ ಸ್ಥಳವೊಂದನ್ನು ಹುಡುಕಿದರು, ಎಂದು ಬಾಬಾ, ನನ್ನ ತಂದೆ ತಂದೆ 55 ವರ್ಷ ಹರೆಯದ ಪರಶುರಾಮ್ ಪರೇದ್ ನೆನಪಿಸಿಕೊಂಡರು.
“ನಾನು ಅವರನ್ನು ಚೆನ್ನಾಗಿ ನೆನಪಿನ್ನಲ್ಲಿಟ್ಟುಕೊಂಡಿರುವೆ. ಏನು ಮಾಡುತ್ತಿದ್ದೀರೆಂದು ಪುನಃ ಪುನಃ ಅವರನ್ನು ಕೇಳಿದಾಗ, “ನಿಮಗೆ ನೀರು ಬೇಕು ತಾನೆ?” ಎಂದು ಕೇಳಿದರು. ನಾವು ಒಪ್ಪಿದೆವು, “ಪಾನಿ ಕಿಸೇ ನಹೀ ಮಂಗ್ತಾ [ನೀರು ಯಾರಿಗೆ ತಾನೇ ಬೇಡ],” ಎಂದು ಬಾಬಾ ಮತ್ತೆ ಹೇಳಿದರು. ನೀರಿನ ಕೊರತೆ ಇರುವ ಪ್ರದೇಶದಲ್ಲಿ ಸರಕಾರ ಯಾವುದೇ ಸ್ಥಳವನ್ನು ಆಯ್ಕೆ ಮಾಡಿದರೂ ಸ್ವಾಗತಾರ್ಹ, ಆದರೆ ಗ್ರಾಮಸ್ಥರ ಖುಷಿಯ ನಿರೀಕ್ಷೆ ಹೆಚ್ಚು ಕಾಲ ಉಳಿಯಲಿಲ್ಲ.
ತಿಂಗಳ ನಂತರ ಜಾಗ ತೆರವುಗೊಳಿಸಬೇಕೆಂದು ವಾಡಾ ತಾಲೂಕಿನ ನಿಂಬಾವಳಿ ಗ್ರಾಮದ ವರ್ಲಿ ಆದಿವಾಸಿಗಳಿಗೆ ನೋಟೀಸ್ ಜಾರಿಯಾಗುತ್ತದೆ, ಅಲ್ಲಿ ಯಾವುದೇ ಜಲ ಯೋಜನೆಗಳಿರಲಿಲ್ಲ, ಬದಲಾಗಿ ಮುಂಬೈ-ವಡೋದರಾ ರಾಷ್ಟ್ರೀಯ ಎಕ್ಸ್ಪ್ರೆಸ್ ಹೆದ್ದಾರಿಗೆ ಭೂಮಿ ಗುರುತಿಸುವ ಕಾರ್ಯ ನಡೆದಿತ್ತು.
“ನಮಗೆ ಅದು ರಾಷ್ಟ್ರೀಯ ಹೆದ್ದಾರಿಗೆ ಎಂದು ಗೊತ್ತಾದದ್ದು, ಅಂದು ಮಾತ್ರ,” ಎಂದು 50 ವರ್ಷ ಹರೆಯದ ಬಾಲಕೃಷ್ಣ ಲಿಪತ್ ಹೇಳುತ್ತಾರೆ. ಅದು 2012. ದಶಕ ಕಳೆದರೂ ಮೋಸದ ಭೂಸ್ವಾದೀನದಿಂದ ನನ್ನ ಗ್ರಾಮ ಸಂಕಷ್ಟದಲ್ಲಿದೆ, ಅನೇಕರು ಇದು ಮುಗಿದ ಯುದ್ಧ ಎಂದು ತಿಳಿದಿದ್ದಾರೆ, ಇಡೀ ಗ್ರಾಮಕ್ಕೆ ಹೆಚ್ಚುವರಿ ಪರಿಹಾರ, ಬದಲಿ ಭೂಮಿ ನೀಡುವುದು ಮತ್ತು ಸೂಕ್ತ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸುವ ಬೇಡಿಕೆಗಳಿಂದ ಹಿಂದೆ ಸರಿದಿದ್ದಾರೆ.





