ಒಂದು ದಿನ ಅಪ್ಪ ಕುಡಿದು ಬಂದು ಅಮ್ಮನ ಮೇಲೆ ಕಿರುಚಾಡಲು ಪ್ರಾರಂಭಿಸಿದಾಗ ಮನೆಯ ತೊಂದರೆಯ ನೆನಪು ನನ್ನ ಮೊದಲ ನೆನಪಾಯಿತು. ಅಪ್ಪ ಅಮ್ಮನ ಮೇಲೆ ಹಲ್ಲೆ ಮಾಡಿದರು ಮತ್ತು ಆ ಸಮಯದಲ್ಲಿ ನಮ್ಮೊಂದಿಗೆ ಇದ್ದ ಅಮ್ಮನ ಪೋಷಕರು ಮತ್ತು ಒಡಹುಟ್ಟಿದವರನ್ನು ಅತ್ಯಂತ ಆಕ್ರಮಣಕಾರಿ ಭಾಷೆಯಿಂದ ಅವಮಾನಿಸಿದರು. ಮಾತನ್ನು ಕೇಳಲೇಬೇಕಾಗಿದ್ದರೂ, ಅವರು ಅಪ್ಪನ ಮಾತುಗಳನ್ನು ನಿರ್ಲಕ್ಷಿಸಲು ಪ್ರಯತ್ನಿಸಿದರು. ಇದರ ನಂತರ ಈ ಪ್ರಕೋಪಗಳು ದಿನನಿತ್ಯದ ಘಟನೆಗಳಾದವು.
ನಾನು 2ನೇ ತರಗತಿಯಲ್ಲಿದ್ದಾಗ ನಡೆದ ಒಂದು ಘಟನೆ ನನಗೆ ಸ್ಪಷ್ಟವಾಗಿ ನೆನಪಿದೆ. ಎಂದಿನಂತೆ, ಅಪ್ಪ ಕುಡಿದು ಕೋಪದಿಂದ ಮನೆಗೆ ಬಂದು, ಅಮ್ಮ, ನಂತರ ನನ್ನ ಒಡಹುಟ್ಟಿದವರು ಮತ್ತು ನನ್ನನ್ನು ಹೊಡೆದರು. ಅವರು ನಮ್ಮ ಬಟ್ಟೆಗಳು ಮತ್ತು ವಸ್ತುಗಳನ್ನು ಬೀದಿಗೆ ಎಸೆದು, ತನ್ನ ಮನೆಯಿಂದ ಹೊರಹೋಗುವಂತೆ ಕೂಗಿದರು. ಆ ಚಳಿಗಾಲದ ರಾತ್ರಿ, ಸಣ್ಣ ಮರಿಗಳು ತಮ್ಮ ತಾಯಂದಿರ ಬೆಚ್ಚನೆ ಅಪ್ಪುಗೆ ಬಯಸುವಂತೆ, ಬೀದಿಯಲ್ಲಿ ನಮ್ಮ ತಾಯಿಗೆ ಅಂಟಿಕೊಂಡಿದ್ದೆವು.
ನಾವು ಓದುತ್ತಿದ್ದ ಬುಡಕಟ್ಟು ಸರ್ಕಾರಿ ಸಂಸ್ಥೆ ಜಿಟಿಆರ್ ಮಾಧ್ಯಮಿಕ ಶಾಲೆಯಲ್ಲಿ ಊಟ ಮತ್ತು ಆಹಾರ ಸೌಲಭ್ಯಗಳು ಇದ್ದುದರಿಂದ, ನನ್ನ ಹಿರಿಯಣ್ಣ ಮತ್ತು ಸಹೋದರಿ ಅಲ್ಲಿಯೇ ಉಳಿಯಲು ನಿರ್ಧರಿಸಿದರು. ಆ ದಿನಗಳಲ್ಲಿ, ನಮ್ಮ ಬಳಿ ಹೆಚ್ಚುವರಿಯಾಗಿದ್ದದ್ದು ನಮ್ಮ ಅಳು ಮತ್ತು ಕಣ್ಣೀರು ಮಾತ್ರ. ನಾವು ನಮ್ಮ ಮನೆಯಲ್ಲಿಯೇ ಇದ್ದೆವು, ಆದರೆ ಅಪ್ಪ ಮಾತ್ರ ಹೊರಟು ಹೋದರು.
ನಾವು ಮುಂದೆ ಏನಾಗಬಹುದೆನ್ನುವ ಭಯದಲ್ಲೇ ಬದುಕುತ್ತಿದ್ದೆವು. ಒಂದು ದಿನ ಅಪ್ಪ ಕುಡಿದು ಬಂದು ಅಮ್ಮನ ತಮ್ಮನೊಂದಿಗೆ ಜಗಳಕ್ಕಿಳಿದು ಅವರ ಮೇಲೆ ಚೂರಿಯಿಂದ ಹಲ್ಲೆಗೆ ಪ್ರಯತ್ನಿಸಿದರು. ಆದರೆ ಅವರನ್ನು ಎಲ್ಲರೂ ಸೇರಿ ತಡೆಯಲು ಪ್ರಯತ್ನಿಸಿದರು. ಚೂರಿ ಮೊಂಡಾಗಿದ್ದ ಕಾರಣ ಅವರಿಗೆ ಗಾಯವಾಗಿರಲಿಲ್ಲ. ಆ ಸಂದರ್ಭದಲ್ಲಿ ಅಮ್ಮನನ್ನು ತಂಗಿ ಹಿಡಿದುಕೊಂಡಿದ್ದಳು. ತಳ್ಳಾಟದಲ್ಲಿ ಬಿದ್ದು ಅಮ್ಮನಿಗೆ ಪೆಟ್ಟಾಯಿತು. ನಾನು ಅಲ್ಲಿ ನಡೆಯುತ್ತಿದ್ದ ಗಲಾಟೆಯನ್ನು ಅರಗಿಸಿಕೊಳ್ಳಲಾಗದೆ ಅಸಹಾಯಕತೆಯಿಂದ ನಿಂತಿದ್ದೆ.
ಮರುದಿನ ಅಂಗಳದಲ್ಲಿ ನೋಡುವಾಗ ಅಲ್ಲಿ ನನ್ನ ಅಪ್ಪ ಮತ್ತು ಮಾವನ ಕಪ್ಪು, ಕೆಂಪು ಬಣ್ಣದ ರಕ್ತದ ಕಲೆಗಳಿದ್ದವು. ಮಧ್ಯರಾತ್ರಿಯ ಹೊತ್ತಿಗೆ ಅಪ್ಪ ನನ್ನ ಮತ್ತು ಅಕ್ಕನ ಕೈ ಹಿಡಿದು ತಾತನ ಮನೆಯ ಹೊರಗೆ ಎಳೆದುಕೊಂಡು ಬಂದರು. ಅಲ್ಲಿಂದ ನಮ್ಮ ಹೊಲದ ನಡುವೆ ಇದ್ದ ಅವರ ಸಣ್ಣ ಕೋಣೆಗೆ ಕರೆದೊಯ್ದರು. ಇದಾಗಿ ಕೆಲವು ತಿಂಗಳ ನಂತರ ಅಪ್ಪ ಅಮ್ಮ ಬೇರ್ಪಟ್ಟರು.