ಮಮತಾ ಪರೇದ್ ಪರಿಯಲ್ಲಿ ನಮ್ಮ ಸಹೋದ್ಯೋಗಿಯಾಗಿದ್ದರು. ಅಪರೂಪದ ಪ್ರತಿಭೆ ಮತ್ತು ಬದ್ಧತೆಯನ್ನು ಹೊಂದಿದ್ದ ಯುವ ಪತ್ರಕರ್ತರಾಗಿದ್ದ ಅವರು ಡಿಸೆಂಬರ್ 11, 2022ರಂದು ದುರಂತ ಸಾವನ್ನು ಕಂಡರು.

ಅವರು ನಮ್ಮ ಅಗಲಿ ಇಂದಿಗೆ ಒಂದು ವರ್ಷ. ನಾವು ಅವರ ನೆನಪಿನಲ್ಲಿ ವಿಶೇಷ ಪಾಡ್‌ಕಾಸ್ಟ್‌ ಒಂದನ್ನು ನಿಮಗಾಗಿ ತಂದಿದ್ದೇವೆ. ಇದರಲ್ಲಿ ಅವರು ತನ್ನ ಜನರ ಕುರಿತಾಗಿ ಮಾತನಾಡಿದ್ದಾರೆ. ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ವಾಡಾ ತಾಲ್ಲೂಕಿನ ಆದಿವಾಸಿ ಸಮುದಾಯವಾದ ವಾರ್ಲಿ ಸಮುದಾಯಕ್ಕೆ ಸೇರಿದವರಾದ ಮಮತಾ ಸಾಯುವ ಕೆಲವು ತಿಂಗಳ ಮೊದಲು ಈ ಆಡಿಯೋ ರೆಕಾರ್ಡ್‌ ಮಾಡಿದ್ದರು.

ಈ ವರದಿಯಲ್ಲಿ ಮೂಲಭೂತ ಸೌಕರ್ಯಗಳು ಮತ್ತು ಹಕ್ಕುಗಳನ್ನು ಪಡೆಯಲು ನಡೆಸುತ್ತಿದ್ದ ಹೋರಾಟಗಳ ಬಗ್ಗೆ ಬರೆದಿದ್ದಾರೆ. ಧೈರ್ಯಶಾಲಿ ಪತ್ರಕರ್ತರಾಗಿದ್ದ ಅವರು ಸಣ್ಣ ಕುಗ್ರಾಮಗಳಿಂದ ವರದಿ ಮಾಡಿದ್ದರು. ಅಂತಹ ಹಳ್ಳಿಗಳಲ್ಲಿ ಕೆಲವನ್ನು ಭೂಪಟದಲ್ಲೂ ನೋಡಲು ಸಾಧ್ಯವಿಲ್ಲ. ಹಸಿವು, ಬಾಲಕಾರ್ಮಿಕತೆ, ಜೀತದಾಳು, ಶಾಲಾ ಶಿಕ್ಷಣದ ಲಭ್ಯತೆ, ಭೂ ಹಕ್ಕುಗಳು, ಸ್ಥಳಾಂತರ, ಜೀವನೋಪಾಯ ಮುಂತಾದ ವಿಷಯಗಳ ಕುರಿತು ವರದಿ ಮಾಡುವಲ್ಲಿ ಅವರು ತೀವ್ರ ಬದ್ಧತೆಯನ್ನು ತೋರಿಸಿದ್ದರು.


ಈ ಸಂಚಿಕೆಯಲ್ಲಿ, ಮಮತಾ ತನ್ನ ಊರಾದ ನಿಂಬಾವಳಿಯಲ್ಲಿ ನಡೆದ ಅನ್ಯಾಯದ ಕಥೆಯನ್ನು ವಿವರಿಸಿದ್ದಾರೆ . ಮುಂಬೈ-ವಡೋದರಾ ಎಕ್ಸ್‌ಪ್ರೆಸ್‌ ವೇ ಯೋಜನೆಯ ನೀರಿನ ಯೋಜನೆಗಾಗಿ ಸರ್ಕಾರಿ ಅಧಿಕಾರಿಗಳು ಒಳ್ಳೆಯತನದ ಸೋಗಿನಲ್ಲಿ ಗ್ರಾಮಸ್ಥರನ್ನು ಪಿತ್ರಾರ್ಜಿತ ಭೂಮಿಯನ್ನು ಬಿಟ್ಟುಕೊಡುವಂತೆ ಹೇಗೆ ಮೋಸಗೊಳಿಸಿದರು ಎಂಬುದನ್ನು ಅವರು ವಿವರಿಸುತ್ತಾರೆ. ಯೋಜನೆಯು ಅವರ ಹಳ್ಳಿಯನ್ನು ಹಾಳುಗೆಡವಿತು, ಮತ್ತು ಅದಕ್ಕೆ ನೀಡಲಾದ ಪರಿಹಾರವು ಸಂಪೂರ್ಣವಾಗಿ ಅಸಮರ್ಪಕವಾಗಿತ್ತು.

ನಮಗೆ ಪರಿಯಲ್ಲಿ, ಮಮತಾರನ್ನು ತಿಳಿದುಕೊಳ್ಳಲು ಮತ್ತು ಅವರೊಂದಿಗೆ ಕೆಲಸ ಮಾಡಲು ಬಹಳಷ್ಟು ಅವಕಾಶ ಸಿಕ್ಕಿತು; ಪರಿಯಲ್ಲಿ ಪ್ರಕಟವಾದ ಅವರ ಎಲ್ಲಾ ಒಂಬತ್ತು ವರದಿಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.

ಮಮತಾ ತನ್ನ ಬರವಣಿಗೆ ಮತ್ತು ಸಮುದಾಯದೊಂದಿಗಿನ ಕೆಲಸಗಳಲ್ಲಿ ಈಗಲೂ ಬದುಕಿದ್ದಾರೆ. ಅವರ ನೆನಪು ನಮ್ಮನ್ನು ಕಾಡಲಿದೆ.

ಈ ಪಾಡ್‌ಕಾಸ್ಟ್‌ ನಿರ್ಮಾಣದಲ್ಲಿ ಸಹಾಯ ಮಾಡಿದ ಹಿಮಾಂಶು ಸೈಕಿಯಾ ಅವರಿಗೆ ಧನ್ಯವಾದಗಳು.

ಈ ವರದಿಯಲ್ಲಿ ಬಳಸಲಾಗಿರುವ ಮುಖ್ಯ ಚಿತ್ರವನ್ನು ಸಿಟಿಜನ್ಸ್ ಫಾರ್ ಜಸ್ಟೀಸ್ ಅಂಡ್ ಪೀಸ್ ವೆಬ್‌ಸೈಟಿನಿಂದ ಪಡೆಯಲಾಗಿದೆ. ಮಮತಾ ಇದರ ಫೆಲೋಶಿಪ್‌ ಕೂಡಾ ಪಡೆದಿದ್ದರು. ಚಿತ್ರವನ್ನು ಬಳಸಲು ಅನುಮತಿ ನೀಡಿದ್ದಕ್ಕಾಗಿ ಸಂಸ್ಥೆಗೆ ಧನ್ಯವಾದವನ್ನು ತಿಳಿಸುತ್ತೇವೆ.

ಅನುವಾದ: ಶಂಕರ. ಎನ್. ಕೆಂಚನೂರು

Aakanksha

Aakanksha is a reporter and photographer with the People’s Archive of Rural India. A Content Editor with the Education Team, she trains students in rural areas to document things around them.

यांचे इतर लिखाण Aakanksha
Editors : Medha Kale

मेधा काळे यांना स्त्रिया आणि आरोग्याच्या क्षेत्रात कामाचा अनुभव आहे. कुणाच्या गणतीत नसणाऱ्या लोकांची आयुष्यं आणि कहाण्या हा त्यांचा जिव्हाळ्याचा विषय आहे.

यांचे इतर लिखाण मेधा काळे
Editors : Vishaka George

विशाखा जॉर्ज बंगळुरुस्थित पत्रकार आहे, तिने रॉयटर्ससोबत व्यापार प्रतिनिधी म्हणून काम केलं आहे. तिने एशियन कॉलेज ऑफ जर्नलिझममधून पदवी प्राप्त केली आहे. ग्रामीण भारताचं, त्यातही स्त्रिया आणि मुलांवर केंद्रित वार्तांकन करण्याची तिची इच्छा आहे.

यांचे इतर लिखाण विशाखा जॉर्ज
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

यांचे इतर लिखाण Shankar N. Kenchanuru