ದಟ್ಟ ಮರಗಳಿಂದ ತುಂಬಿರುವ ಕುದುರೆಮುಖ ರಾಷ್ಟ್ರೀಯ ಉದ್ಯಾನದ ಬೆಟ್ಟಗಳಲ್ಲಿ, ಪ್ರಾಚೀನ ಕಾಲದಿಂದಲೂ ಕಾಡಿನಲ್ಲಿಯೇ ವಾಸಿಸುತ್ತಿರುವ ಸಮುದಾಯಗಳು ಬದುಕಿಗೆ ಅತ್ಯಗತ್ಯವಾದ ಸೌಲಭ್ಯಗಳಿಲ್ಲದೆ ಸಂಕಷ್ಟದಿಂದ ಬದುಕುತ್ತಿವೆ. ಇಂತಹ ಸಮುದಾಯಗಳಲ್ಲಿ ಒಂದಾಗಿರುವ ಕುತ್ಲೂರು ಗ್ರಾಮದ ಮಲೆಕುಡಿಯರ 30 ಮನೆಗಳು ಇಂದಿಗೂ ವಿದ್ಯುತ್ ಸಂಪರ್ಕ ಮತ್ತು ನೀರಿನ ಸಮಸ್ಯೆಗಳಿಂದ ಬಳಲುತ್ತಿವೆ. “ಇಲ್ಲಿನ ಜನರ ದೊಡ್ಡ ಬೇಡಿಕೆಯೆಂದರೆ ವಿದ್ಯುತ್‌,” ಎಂದು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕುತ್ಲೂರಿನ ರೈತ ಶ್ರೀಧರ ಮಲೆಕುಡಿಯರವರು ಹೇಳುತ್ತಾರೆ.

ಸುಮಾರು ಎಂಟು ವರ್ಷಗಳ ಹಿಂದೆ ತಮ್ಮ ಮನೆಗೆ ವಿದ್ಯುತ್‌ ಸಂಪರ್ಕ ನೀಡಲು ಶ್ರೀಧರ ಅವರು ಪಿಕೋ ಹೈಡ್ರೋ ಜನರೇಟರನ್ನು ಖರೀದಿಸಿದರು. ಸ್ವತಃ ವಿದ್ಯುಚ್ಛಶಕ್ತಿಯನ್ನು ಉತ್ಪಾದಿಸಲು ಹೂಡಿಕೆ ಮಾಡಿದ 11 ಮನೆಗಳಲ್ಲಿ ಇವರದೂ ಒಂದು. "ಉಳಿದ ಮನೆಗಳಿಗೆ ವಿದ್ಯುತ್‌ ಆಗಲಿ, ಜಲವಿದ್ಯುತ್ ಆಗಲಿ, ನೀರಿನ ಸರಬರಾಜಾಗಲೀ ಏನೂ ಇಲ್ಲ,” ಎಂದು ಅವರು ಹೇಳುತ್ತಾರೆ. ಈಗ ಆ ಗ್ರಾಮದ 15 ಮನೆಗಳು ಪಿಕೋ ಹೈಡ್ರೋ ಯಂತ್ರಗಳಿಂದ ಜಲವಿದ್ಯುತನ್ನು ಉತ್ಪಾದಿಸುತ್ತಿವೆ. ಸಣ್ಣ ನೀರಿನ ಟರ್ಬೈನ್ ಮನೆಯ ಒಂದೆರಡು ಬಲ್ಬ್‌ಗಳು ಉರಿಯಲು ಸಾಕಾಗುವಷ್ಟು ಸುಮಾರು 1 ಕಿಲೋವ್ಯಾಟ್ ವಿದ್ಯುತನ್ನು ಉತ್ಪಾದಿಸುತ್ತದೆ.

ಅರಣ್ಯ ಹಕ್ಕು ಕಾಯಿದೆ ಜಾರಿಯಾಗಿ 18 ವರ್ಷ ಕಳೆದರೂ ಕುದುರೆಮುಖ ರಾಷ್ಟ್ರೀಯ ಉದ್ಯಾನದಲ್ಲಿ ಬದುಕುತ್ತಿರುವ ಈ ಜನರಿಗೆ ಕಾನೂನಿನಡಿ ಮಂಜೂರಾದ ನೀರು, ರಸ್ತೆ, ಶಾಲೆ, ಆಸ್ಪತ್ರೆಯಂತಹ ಮೂಲ ಸೌಕರ್ಯಗಳು ಇನ್ನೂ ಸಿಕ್ಕಿಲ್ಲ. ಪರಿಶಿಷ್ಟ ಪಂಗಡಕ್ಕೆ ಸೇರಿರುವ ಮಲೆಕುಡಿಯ ಸಮುದಾಯದವರು ವಿದ್ಯುತ್ ಸಂಪರ್ಕ ಸೇರಿದಂತೆ ತಮಗೆ ಸಿಗಬೇಕಾದ ಅಗತ್ಯ ಸೌಲಭ್ಯಗಳನ್ನು ಪಡೆಯಲು ಹರಸಾಹಸ ಪಡುತ್ತಿದ್ದಾರೆ.

ವಿಡಿಯೋ ನೋಡಿ: ‘ವಿದ್ಯುತ್  ಸಂಪರ್ಕವಿಲ್ಲದ ಜನರ ಕಷ್ಟ’

ವಿ . ಸೂ : ಈ ವಿಡಿಯೋವನ್ನು 2017ರಲ್ಲಿ ಮಾಡಲಾಗಿದೆ. ಕುತ್ಲೂರಿಗೆ ಇಂದಿಗೂ ವಿದ್ಯುತ್ ಸಂಪರ್ಕ ಸಿಕ್ಕಿಲ್ಲ.

ಅನುವಾದ: ಚರಣ್‌ ಐವರ್ನಾಡು

Vittala Malekudiya

विट्टल मालेकुडिय पत्रकार असून २०१७ सालासाठीचे पारी फेलो आहेत. कुद्रेमुख अभयारण्याच्या राखीव वनक्षेत्रात येणाऱ्या दक्षिण कन्नड जिल्ह्याच्या बेळतांगडी तालुक्यात कुथलुर गावी राहणारे विट्टल वनांमध्ये राहणाऱ्या मालेकुडिय आदिवासी समुदायाचे आहेत. मँगलोर विद्यापीठातून त्यांनी पत्रकारिता व जनसंवाद विषयात एमए केलं आहे. सध्या ते प्रजावाणी या कन्नड दैनिकाच्या बंगळुरु कचेरीत काम करतात.

यांचे इतर लिखाण Vittala Malekudiya
Editor : Vinutha Mallya

विनुता मल्ल्या पीपल्स अर्काइव्ह ऑफ रुरल इंडिया (पारी) मध्ये संपादन सल्लागार आहेत. त्यांनी दोन दशकांहून अधिक काळ पत्रकारिता आणि संपादन केलं असून अनेक वृत्तांकने, फीचर तसेच पुस्तकांचं लेखन व संपादन केलं असून जानेवारी ते डिसेंबर २०२२ या काळात त्या पारीमध्ये संपादन प्रमुख होत्या.

यांचे इतर लिखाण Vinutha Mallya
Translator : Charan Aivarnad

Charan Aivarnad is a poet and a writer. He can be reached at: [email protected]

यांचे इतर लिखाण Charan Aivarnad