"ಅವರನ್ನು ಶಾಲೆಗೆ ಬರುವಂತೆ ಮಾಡುವುದು ಒಂದು ಸವಾಲಾಗಿದೆ."
ಮುಖ್ಯಶಿಕ್ಷಕ ಶಿವಜೀ ಸಿಂಗ್ ಯಾದವ್ ಅವರ ಮಾತಿನಲ್ಲಿ ಹೇಳುವುದಾದರೆ, ಅವರು 34 ವರ್ಷಗಳ ಅನುಭವವನ್ನು ಹೊಂದಿದ್ದಾರೆ. ಯಾದವ್, ಅಥವಾ ಅವರ ವಿದ್ಯಾರ್ಥಿಗಳು ಅವರುನ್ನು ಕರೆಯುವಂತೆ 'ಮಾಸ್ಟರ್ಜೀ,' ದಾಬ್ಲಿ ಚಪೋರಿಯ ಏಕೈಕ ಶಾಲೆಯನ್ನು ನಡೆಸುತ್ತಾರೆ. ಅಸ್ಸಾಂನ ಮಜುಲಿ ಜಿಲ್ಲೆಯ ಬ್ರಹ್ಮಪುತ್ರ ನದಿಯಲ್ಲಿರುವ ಈ ದ್ವೀಪದಲ್ಲಿ ವಾಸಿಸುವ 63 ಕುಟುಂಬಗಳ ಹೆಚ್ಚಿನ ಮಕ್ಕಳು ಈ ಶಾಲೆಗೆ ಸೇರುತ್ತಾರೆ.
ಧೋನೆಖಾನಾ ಕಿರಿಯ ಪ್ರಾಥಮಿಕ ಶಾಲೆಯ ಏಕೈಕ ತರಗತಿಯಲ್ಲಿ ತನ್ನ ಮೇಜಿನ ಮೇಲೆ ಕುಳಿತಿದ್ದ ಶಿವಜೀ ತನ್ನ ಸುತ್ತಲೂ ಇದ್ದ ತನ್ನ ವಿದ್ಯಾರ್ಥಿಗಳನ್ನು ಮುಗುಳ್ನಗುತ್ತಾ ನೋಡಿದರು. ನಲವತ್ತೊಂದು ಹೊಳೆಯುವ ಮುಖಗಳು - ಎಲ್ಲಾ 6ರಿಂದ 12 ವರ್ಷ ವಯಸ್ಸಿನವರು ಮತ್ತು 1-5 ನೇ ತರಗತಿಯ ವಿದ್ಯಾರ್ಥಿಗಳು – ಅವರತ್ತ ನೋಡಿದರು. “ಕಲಿಸುವುದು,ಅದರಲ್ಲೂ ಸಣ್ಣ ಮಕ್ಕಳಿಗೆ ಕಲಿಸುವುದು ನಿಜಕ್ಕೂ ಕಷ್ಟದ ಕೆಲಸ, ಅವರು ಶಾಲೆಯಿಂದ ಓಡುವುದಕ್ಕೆ ಕಾಯುತ್ತಿರುತ್ತಾರೆ,” ಎನ್ನುತ್ತಾರವರು.
ಭಾರತೀಯ ಶಿಕ್ಷಣ ವ್ಯವಸ್ಥೆಯನ್ನು ಪರಾಮರ್ಶಿಸುವ ವೇಗವನ್ನು ಒಟ್ಟುಗೂಡಿಸುವ ಮೊದಲು, ಅವರು ಸ್ವಲ್ಪ ವಿರಾಮ ತೆಗೆದುಕೊಂಡು ಕೆಲವು ಹಳೆಯ ವಿದ್ಯಾರ್ಥಿಗಳನ್ನು ಕರೆದು ರಾಜ್ಯ ಸರ್ಕಾರದ ಶಿಕ್ಷಣ ನಿರ್ದೇಶನಾಲಯವು ಕಳುಹಿಸಿದ ಅಸ್ಸಾಮಿ ಮತ್ತು ಇಂಗ್ಲಿಷ್ ಕಥೆ ಪುಸ್ತಕಗಳ ಪೊಟ್ಟಣವನ್ನು ತೆರೆಯುವಂತೆ ಅವರು ಅವರಿಗೆ ಸೂಚನೆ ನೀಡಿದರು. ಹೊಸ ಪುಸ್ತಕಗಳ ಉತ್ಸಾಹವು ತನ್ನ ಶಿಷ್ಯರನ್ನು ಕಾರ್ಯನಿರತವಾಗಿರಿಸುತ್ತದೆ ಮತ್ತು ನಮ್ಮೊಂದಿಗೆ ಮಾತನಾಡಲು ಅವರಿಗೆ ಅನುವು ಮಾಡಿಕೊಡುತ್ತದೆ ಎನ್ನುವುದು ಅವರ ಅನುಭವಜನ್ಯ ತಿಳುವಳಿಕೆ.
"ಸರ್ಕಾರವು ಕಾಲೇಜು ಪ್ರಾಧ್ಯಾಪಕರಿಗೆ ನೀಡುವ ಸಂಬಳವನ್ನು ಅವರು ಪ್ರಾಥಮಿಕ ಶಾಲಾ ಶಿಕ್ಷಕರಿಗೂ ನೀಡಬೇಕು; ನಾವು ಮಕ್ಕಳ ಶಿಕ್ಷಣಕ್ಕೆ ಅಡಿಪಾಯ ಹಾಕುವವರು" ಎಂದು ಅವರು ಪ್ರಾಥಮಿಕ ಶಿಕ್ಷಣದ ಪ್ರಾಮುಖ್ಯತೆಯನ್ನು ಒತ್ತಿಹೇಳುತ್ತಾರೆ. ಆದರೆ, ಅವರು ಹೇಳುತ್ತಾರೆ, ಪೋಷಕರು ಪ್ರಾಥಮಿಕ ಶಾಲಾ ಶಿಕ್ಷಣವನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ, ಕೇವಲ ಪ್ರೌಢ ಶಾಲೆ ಮಾತ್ರ ಮುಖ್ಯ ಎಂದು ನಂಬುತ್ತಾರೆ, ಎನ್ನುವ ಮೂಲಕ ತಪ್ಪು ಕಲ್ಪನೆಯನ್ನು ಸರಿಪಡಿಸಲು ಅವರು ಶ್ರಮಿಸುತ್ತಾರೆ.

















