ಕೊಲ್ಹಾಪುರ ಪ್ರಗತಿಪರ (ಪುರೋಗಾಮಿ) ನಗರವೆಂದೇ ಪರಿಚಿತ. ಇದಕ್ಕೆ ಶಾಹು, ಫುಲೆ ಮತ್ತು ಅಂಬೇಡ್ಕರ್ ಅವರಂತಹ ಮಹಾನ್ ವ್ಯಕ್ತಿಗಳ ಪರಂಪರೆಯ ಹಿನ್ನೆಲೆಯಿದೆ. ವಿವಿಧ ಧರ್ಮಗಳು ಮತ್ತು ಜಾತಿಗಳ ಜನರು ಈಗಲೂ ವೈವಿಧ್ಯಮಯ ಸಂಸ್ಕೃತಿಗಳ ನಡುವೆ ಗೌರವ ಮತ್ತು ಸ್ನೇಹ ಹಾಗೂ ಪ್ರಗತಿಪರ ಚಿಂತನೆಯ ಈ ಪರಂಪರೆಯನ್ನು ಜೀವಂತವಾಗಿಡಲು ಈಗಲೂ ಶ್ರಮಿಸುತ್ತಿದ್ದಾರೆ.

ಆದರೆ ಇದೆಲ್ಲದರ ನಡುವೆಯೂ ಈ ಸೌಹಾರ್ದ ಸಮಾಜದಲ್ಲಿ ಹುಳಿ ಹಿಂಡುವ ಸಂಘಟಿತ ಪ್ರಯತ್ನಗಳೂ ನಡೆಯುತ್ತಿವೆ. ಚಿಂತನೆಗಳನ್ನು ಚಿಂತನೆಗಳ ಮೂಲಕವೇ ಎದುರಿಸಬೇಕು. ಈ ನಿಟ್ಟಿನಲ್ಲಿ ಶರ್ಫುದ್ದೀನ್ ದೇಸಾಯಿ ಮತ್ತು ಸುನಿಲ್ ಮಾಲಿ ಅವರಂತಹ ನಾಗರಿಕರು ಸಮಾಜದಲ್ಲಿ ಸಾಮರಸ್ಯ ಕಾಪಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ.

ಶರ್ಫುದ್ದೀನ್ ದೇಸಾಯಿ ಮತ್ತು ಸುನಿಲ್ ಮಾಲಿ ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ತಾರಾದಾಳ ಗ್ರಾಮದವರು. ಇಲ್ಲಿ ಶರ್ಫುದ್ದೀನ್ ದೇಸಾಯಿ ಹಿಂದೂ ಗುರುವಿನೊಂದಿಗೆ ಸಂಬಂಧ ಹೊಂದಿದ್ದರೆ, ಸುನಿಲ್ ಮಾಲಿ ಮುಸ್ಲಿಂ ಗುರುವಿನ ಅನುಯಾಯಿ.

ಚಿತ್ರವನ್ನು ನೋಡಿ: ಸಹೋದರತ್ವ

ಅನುವಾದ: ಶಂಕರ. ಎನ್. ಕೆಂಚನೂರು

Jaysing Chavan

ಜೈಸಿಂಗ್‌ ಚೌಹಾನ್‌ ಅವರು ಕೊಲ್ಲಾಪುರ ಮೂಲ್‌ ಓರ್ವ ಹವ್ಯಾಸಿ ಛಾಯಾಚಿತ್ರಗ್ರಾಹಕ ಮತ್ತು ಫಿಲ್ಮ್‌ಮೇಕರ್.

Other stories by Jaysing Chavan
Text Editor : PARI Desk

ಪರಿ ಡೆಸ್ಕ್ ನಮ್ಮ ಸಂಪಾದಕೀಯ ಕೆಲಸಗಳ ಕೇಂದ್ರಸ್ಥಾನ. ಈ ತಂಡವು ದೇಶಾದ್ಯಂತ ಹರಡಿಕೊಂಡಿರುವ ನಮ್ಮ ವರದಿಗಾರರು, ಸಂಶೋಧಕರು, ಛಾಯಾಗ್ರಾಹಕರು, ಚಲನಚಿತ್ರ ನಿರ್ಮಾಪಕರು ಮತ್ತು ಭಾಷಾಂತರಕಾರರೊಂದಿಗೆ ಕೆಲಸ ಮಾಡುತ್ತದೆ. ಪರಿ ಪ್ರಕಟಿಸುವ ಪಠ್ಯ, ವಿಡಿಯೋ, ಆಡಿಯೋ ಮತ್ತು ಸಂಶೋಧನಾ ವರದಿಗಳ ತಯಾರಿಕೆ ಮತ್ತು ಪ್ರಕಟಣೆಯಗೆ ಡೆಸ್ಕ್ ಸಹಾಯ ಮಾಡುತ್ತದೆ ಮತ್ತು ಅವುಗಳನ್ನು ನಿರ್ವಹಿಸುತ್ತದೆ.

Other stories by PARI Desk
Translator : Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.

Other stories by Shankar N. Kenchanuru