ವೀಡಿಯೊ ವೀಕ್ಷಿಸಿ : ಸಾಯೋವರೆಗೂ ನಮಗಿರೋದು ಇದೊಂದೇ ಕೆಲಸ

ಬಕ್ಕಿಂಗ್‌ಹ್ಯಾಮ್‌ ಕಾಲುವೆಯಲ್ಲಿ ನೀರು ಹಕ್ಕಿಯಂತೆ ನೀರಿನೊಳಗೆ ಡೈವ್‌ ಮಾಡುತ್ತಾ, ಈಜುತ್ತಾ ಸಾಗುವ ಅವರನ್ನು ನಾನು ಮೊದಲಿಗೆ ನೋಡಿದ್ದು 2019ರಲ್ಲಿ. ಅವರ ಈ ಕೌಶಲ ನನ್ನನ್ನು ಅವರತ್ತ ಆಕರ್ಷಿಸಿತು. ಅವರು ಕಾಲುವೆಯ ತಟದಲ್ಲಿನ ಮರಳಿನೊಳಗೆ ಕೈ ತೂರಿಸಿ ಚಾಕಚಕ್ಯೆತೆಯಿಂದ ಎಲ್ಲರಿಗಿಂತಲೂ ವೇಗವಾಗಿ ಸೀಗಡಿ ಹಿಡಿಯುತ್ತಿದ್ದರು.

ಗೋವಿಂದಮ್ಮ ವೇಲು, ತಮಿಳುನಾಡಿನಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿಸಲಾಗಿರುವ ಇರುಳ ಸಮುದಾಯಕ್ಕೆ ಸೇರಿದವರು. ಅವರು ಸಣ್ಣ ಹುಡುಗಿಯಾಗಿದ್ದ ಕಾಲದಿಂದಲೂ ಚೆನೈ ಬಳಿಯ ಕೋಸಸ್ಥಲೈಯಾರ್‌ ನದಿಯ ಗುಂಟ ಮೀನು ಹೀಡಿಯುತ್ತಿದ್ದರು. ಈಗ ಬದುಕಿನ ಎಂಬತ್ತನೇ ವಸಂತದ ಸನಿಹದಲ್ಲಿರುವ ಅವರು ಕುಟುಂಬದ ಭೀಕರ ಆರ್ಥಿಕ ಸಮಸ್ಯೆಯ ಕಾರಣಕ್ಕೆ ದುಡಿಯಲೇಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ. ಆದರೆ ಅವರಿಗೆ ದೃಷ್ಟಿ ಮಂದವಾಗಿದೆ ಮತ್ತು ಕೈಕಾಲುಗಳ ತುಂಬಾ ಗಾಯಗಳಿವೆ.

ಅಂದು ಚೆನ್ನೈ ಉತ್ತರ ಭಾಗದ ಕೋಸಸ್ಥಲೈಯಾರ್‌ ನದಿಯ ಪಕ್ಕದಲ್ಲಿರುವ ಬಕ್ಕಿಂಗ್‌ ಹ್ಯಾಮ್‌ ಕಾಲುವೆಯಲ್ಲಿ ಅವರು ಮೀನು ಹಿಡಿಯುವಾಗ ನಾನು ಈ ವಿಡಿಯೋ ಶೂಟ್‌ ಮಾಡಿದೆ. ಸೀಗಡಿ ಹಿಡಿಯಲು ಓಡಾಡುತ್ತಲೇ ಅವರು ನನ್ನೊಡನೆ ತನ್ನ ಬದುಕಿನ ಕುರಿತು ಮಾತನಾಡಿದರು.

ಗೋವಿಂದಮ್ಮನವರ ಕುರಿತು ಇನ್ನಷ್ಟು ತಿಳಿಯಲು ನೀವು ಈ ವರದಿಯನ್ನು ಓದಬಹುದು.

ಅನುವಾದ : ಶಂಕರ . ಎನ್ . ಕೆಂಚನೂರು

M. Palani Kumar

ಪಳನಿ ಕುಮಾರ್ ಅವರು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ಸ್ಟಾಫ್ ಫೋಟೋಗ್ರಾಫರ್. ದುಡಿಯುವ ವರ್ಗದ ಮಹಿಳೆಯರು ಮತ್ತು ಅಂಚಿನಲ್ಲಿರುವ ಜನರ ಬದುಕನ್ನು ದಾಖಲಿಸುವುದರಲ್ಲಿ ಅವರಿಗೆ ಆಸಕ್ತಿ. ಪಳನಿ 2021ರಲ್ಲಿ ಆಂಪ್ಲಿಫೈ ಅನುದಾನವನ್ನು ಮತ್ತು 2020ರಲ್ಲಿ ಸಮ್ಯಕ್ ದೃಷ್ಟಿ ಮತ್ತು ಫೋಟೋ ದಕ್ಷಿಣ ಏಷ್ಯಾ ಅನುದಾನವನ್ನು ಪಡೆದಿದ್ದಾರೆ. ಅವರು 2022ರಲ್ಲಿ ಮೊದಲ ದಯನಿತಾ ಸಿಂಗ್-ಪರಿ ಡಾಕ್ಯುಮೆಂಟರಿ ಫೋಟೋಗ್ರಫಿ ಪ್ರಶಸ್ತಿಯನ್ನು ಪಡೆದರು. ಪಳನಿ ತಮಿಳುನಾಡಿನ ಮ್ಯಾನ್ಯುವಲ್‌ ಸ್ಕ್ಯಾವೆಂಜಿಗ್‌ ಪದ್ಧತಿ ಕುರಿತು ಜಗತ್ತಿಗೆ ತಿಳಿಸಿ ಹೇಳಿದ "ಕಕ್ಕೂಸ್‌" ಎನ್ನುವ ತಮಿಳು ಸಾಕ್ಷ್ಯಚಿತ್ರಕ್ಕೆ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದಾರೆ.

Other stories by M. Palani Kumar
Text Editor : Vishaka George

ವಿಶಾಖಾ ಜಾರ್ಜ್ ಪರಿಯಲ್ಲಿ ಹಿರಿಯ ಸಂಪಾದಕರಾಗಿದ್ದಾರೆ. ಅವರು ಜೀವನೋಪಾಯ ಮತ್ತು ಪರಿಸರ ಸಮಸ್ಯೆಗಳ ಬಗ್ಗೆ ವರದಿ ಮಾಡುತ್ತಾರೆ. ವಿಶಾಖಾ ಪರಿಯ ಸಾಮಾಜಿಕ ಮಾಧ್ಯಮ ಕಾರ್ಯಗಳ ಮುಖ್ಯಸ್ಥರಾಗಿದ್ದಾರೆ ಮತ್ತು ಪರಿಯ ಕಥೆಗಳನ್ನು ತರಗತಿಗೆ ತೆಗೆದುಕೊಂಡು ಹೋಗಲು ಮತ್ತು ವಿದ್ಯಾರ್ಥಿಗಳು ತಮ್ಮ ಸುತ್ತಲಿನ ಸಮಸ್ಯೆಗಳನ್ನು ದಾಖಲಿಸಲು ಸಹಾಯ ಮಾಡಲು ಎಜುಕೇಷನ್ ತಂಡದಲ್ಲಿ ಕೆಲಸ ಮಾಡುತ್ತಾರೆ.

Other stories by Vishaka George
Translator : Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.

Other stories by Shankar N. Kenchanuru