every-house-is-like-a-graveyard-kn

Dharmapuri, Tamil Nadu

Feb 24, 2024

'ಇಲ್ಲಿನ ಪ್ರತಿ ಮನೆಯೂ ಸ್ಮಶಾನದಂತಾಗಿದೆ'

ತಮಿಳುನಾಡಿನ ಕೃಷ್ಣಗಿರಿ ಬಳಿಯ ಪಟಾಕಿ ಗೋದಾಮಿನಲ್ಲಿ ನಡೆದ ಪಟಾಕಿ ಸ್ಫೋಟದಲ್ಲಿ ಎಂಟು ಯುವಕರು ಜೀವ ಕಳೆದುಕೊಂಡಿದ್ದರು. ಅದರ ನಂತರ ಅವರ ಊರಿನಲ್ಲೀಗ ಸ್ಮಶಾನ ಮೌನ ನೆಲೆಸಿದೆ. ದೀಪಾವಳಿಗೆ ಒಂದು ತಿಂಗಳಿರುವಾಗ ನಡೆದ ಈ ದುರಂತದಲ್ಲಿ ಎಂಟು ಯುವಕರು ಮೃತಪಟ್ಟರು. ಅವರೆಲ್ಲರೂ ದಲಿತ ಕುಟುಂಬಗಳಿಗೆ ಸೇರಿದವರು ಮತ್ತು ಆಪ್ತ ಸ್ನೇಹಿತರಾಗಿದ್ದರು. ಸಾಲ ತೀರಿಸಲು, ಕಾಲೇಜು ಶುಲ್ಕ ಪಾವತಿಸಲು ಮತ್ತು ಮನೆಯ ಇತರ ಖರ್ಚುಗಳನ್ನು ಸರಿದೂಗಿಸುವ ಸಲುವಾಗಿ ಅವರು ಈ ಕೆಲಸಕ್ಕೆ ಸೇರಿಕೊಂಡಿದ್ದರು

Want to republish this article? Please write to [email protected] with a cc to [email protected]

Author

M. Palani Kumar

ಪಳನಿ ಕುಮಾರ್ ಅವರು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ಸ್ಟಾಫ್ ಫೋಟೋಗ್ರಾಫರ್. ದುಡಿಯುವ ವರ್ಗದ ಮಹಿಳೆಯರು ಮತ್ತು ಅಂಚಿನಲ್ಲಿರುವ ಜನರ ಬದುಕನ್ನು ದಾಖಲಿಸುವುದರಲ್ಲಿ ಅವರಿಗೆ ಆಸಕ್ತಿ. ಪಳನಿ 2021ರಲ್ಲಿ ಆಂಪ್ಲಿಫೈ ಅನುದಾನವನ್ನು ಮತ್ತು 2020ರಲ್ಲಿ ಸಮ್ಯಕ್ ದೃಷ್ಟಿ ಮತ್ತು ಫೋಟೋ ದಕ್ಷಿಣ ಏಷ್ಯಾ ಅನುದಾನವನ್ನು ಪಡೆದಿದ್ದಾರೆ. ಅವರು 2022ರಲ್ಲಿ ಮೊದಲ ದಯನಿತಾ ಸಿಂಗ್-ಪರಿ ಡಾಕ್ಯುಮೆಂಟರಿ ಫೋಟೋಗ್ರಫಿ ಪ್ರಶಸ್ತಿಯನ್ನು ಪಡೆದರು. ಪಳನಿ ತಮಿಳುನಾಡಿನ ಮ್ಯಾನ್ಯುವಲ್‌ ಸ್ಕ್ಯಾವೆಂಜಿಗ್‌ ಪದ್ಧತಿ ಕುರಿತು ಜಗತ್ತಿಗೆ ತಿಳಿಸಿ ಹೇಳಿದ "ಕಕ್ಕೂಸ್‌" ಎನ್ನುವ ತಮಿಳು ಸಾಕ್ಷ್ಯಚಿತ್ರಕ್ಕೆ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದಾರೆ.

Editor

Kavitha Muralidharan

ಪತ್ರಿಕೋದ್ಯಮದ ವೃತ್ತಿಯನ್ನು ಸ್ವತಂತ್ರವಾಗಿ ನಿರ್ವಹಿಸುತ್ತಿರುವ ಕವಿತ ಮುರಳೀಧರನ್ ಅನುವಾದಕರೂ ಹೌದು. ಈ ಹಿಂದೆ ‘ಇಂಡಿಯ ಟುಡೆ’ (ತಮಿಳು) ಪತ್ರಿಕೆಯ ಸಂಪಾದಕರಾಗಿದ್ದು, ಅದಕ್ಕೂ ಮೊದಲು ‘ದಿ ಹಿಂದು’ (ತಮಿಳು) ಪತ್ರಿಕೆಯ ವರದಿ ವಿಭಾಗದ ಮುಖ್ಯಸ್ಥರಾಗಿದ್ದ ಕವಿತ, ಪ್ರಸ್ತುತ ‘ಪರಿ’ಯ ಸ್ವಯಂಸೇವಕರಾಗಿದ್ದಾರೆ.

Translator

Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.