aarey-adivasis-then-we-lost-this-land-of-ours-kn

Mumbai Suburban, Maharashtra

May 14, 2025

ಆರೆ ಆದಿವಾಸಿಗಳು: ʼನಂತರ… ನಾವು ನಮ್ಮ ಈ ಭೂಮಿಯನ್ನು ಕಳೆದುಕೊಂಡೆವುʼ

ಉತ್ತರ ಮುಂಬೈನ 3,200 ಎಕರೆಗಳ ಆರೆ ಪ್ರದೇಶವು ಒಂದೊಮ್ಮೆ 27 ಆದಿವಾಸಿ ಕೊಪ್ಪಲುಗಳ ನೆಲೆಯೆನಿಸಿತ್ತು. ವರ್ಷಗಳು ಕಳೆದಂತೆ, ಹೈನು (dairy) ಸಂಸ್ಕರಣಾ ಘಟಕ ಮತ್ತು ʼಚಲನಚಿತ್ರ ನಗರಿʼಗಳನ್ನೊಳಗೊಂಡಂತೆ ಅನೇಕ ಯೋಜನೆಗಳು ಈ ಭೂಮಿಯ ಬೃಹತ್‌ ಭಾಗಗಳನ್ನು ಕಬಳಿಸಿವೆ. ಮುಂಬೈ ಮೆಟ್ರೊ ಸಲುವಾಗಿ ನಿರ್ಮಿಸುತ್ತಿರುವ ಕಾರ್‌ ಶೆಡ್‌, ಇತ್ತೀಚೆಗೆ ಈ ಭೂಮಿಯ ಹಕ್ಕನ್ನು ಪಡೆದಿದ್ದು, ಇದಕ್ಕಾಗಿ ಸುಮಾರು 2600 ಮರಗಳನ್ನು ಇತ್ತೀಚೆಗೆ ಕತ್ತರಿಸಲಾಯಿತಲ್ಲದೆ, ಕಾನೂನು ಹೋರಾಟವೂ ನಡೆಯಿತು. ಈ ಪ್ರಕ್ರಿಯೆಯಲ್ಲಿ, ಅನೇಕ ಆದಿವಾಸಿಗಳ ಮನೆಗಳನ್ನು ಸಹ ನೆಲಸಮಗೊಳಿಸಿ, ಅವರ ಕೃಷಿ ಭೂಮಿಗಳನ್ನು ವಶಪಡಿಸಿಕೊಂಡು, ಜೀವನೋಪಾಯವನ್ನು ನಾಶಪಡಿಸಲಾಯಿತು. ಅನೇಕರು ವಿರೋಧಿಸಿದರು, ಮೋರ್ಚಾಗಳನ್ನು ಆಯೋಜಿಸಿದರು, ಅಹವಾಲುಗಳನ್ನು ಸಲ್ಲಿಸಿದರು. ಅವರಲ್ಲೊಬ್ಬರು ಈ ಪಾಡ್‌ಕಾಸ್ಟ್‌ನಲ್ಲಿ ಹೇಳಿರುವಂತೆ, ʼಮೆಟ್ರೊಗಾಗಿ ಒಂದೇ ಒಂದು ಮೋರ್ಚಾ ಸಹ ಆಯೋಜಿಸಲ್ಪಡಲಿಲ್ಲ’

Author

Aayna

Translator

Shailaja G. P.

Want to republish this article? Please write to [email protected] with a cc to [email protected]

Editor

Sharmila Joshi

ಶರ್ಮಿಳಾ ಜೋಶಿಯವರು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ಮಾಜಿ ಕಾರ್ಯನಿರ್ವಾಹಕ ಸಂಪಾದಕಿ ಮತ್ತು ಬರಹಗಾರ್ತಿ ಮತ್ತು ಸಾಂದರ್ಭಿಕ ಶಿಕ್ಷಕಿ.

Translator

Shailaja G. P.

ಶೈಲಜಾ ([email protected]) ಕನ್ನಡ ಭಾಷೆಯ ಲೇಖಕಿ ಮತ್ತು ಅನುವಾದಕಿ. ಅವರು ಖಾಲಿದ್ ಹುಸೇನ್ ಅವರ 'ದಿ ಕೈಟ್ ರನ್ನರ್' ಮತ್ತು ಫ್ರಾನ್ಸಿಸ್ ಬುಕಾನನ್ ಅವರ 'ಎ ಜರ್ನಿ ಫ್ರಮ್ ಮದ್ರಾಸ್ ಥ್ರೂ ದಿ ಕಂಟ್ರಿಸ್ ಆಫ್ ಮೈಸೂರು ಕೆನರಾ ಮತ್ತು ಮಲಬಾರ್' ಅನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಲಿಂಗ ಸಮಾನತೆ, ಮಹಿಳಾ ಸಬಲೀಕರಣ ಸೇರಿದಂತೆ ವಿವಿಧ ಸಾಮಾಜಿಕ ವಿಷಯಗಳ ಬಗ್ಗೆ ಅವರ ಅನೇಕ ಲೇಖನಗಳು ಮುದ್ರಣ ಮಾಧ್ಯಮಗಳಲ್ಲಿ ಪ್ರಕಟವಾಗಿವೆ. ಶೈಲಜಾ ಅವರು ಪಾಯಿಂಟ್ ಆಫ್ ವ್ಯೂ, ಹೆಲ್ಪ್ ಏಜ್ ಇಂಡಿಯಾ ಮತ್ತು ನ್ಯಾಷನಲ್ ಫೆಡರೇಶನ್ ಆಫ್ ದಿ ಬ್ಲೈಂಡ್ ನಂತಹ ಎನ್‌ಜಿಒಗಳಿಗೆ ಅನುವಾದಕಿಯಾಗಿ ಕೊಡುಗೆ ನೀಡುತ್ತಿದ್ದಾರೆ.

Author

Aayna

ಆಯ್ನಾ ಪರಿ ಬಹುಮಾಧ್ಯಮ ವೇದಿಕೆಯ ಛಾಯಾಗ್ರಾಹಕರು ಮತ್ತು ವರದಿಗಾರರು.