ತುಳುನಾಡು ಅರಬ್ಬಿ ಸಮುದ್ರ ತೀರದ ಕರಾವಳಿ ಪ್ರದೇಶ. ಇದು ಸಾಗರೋತ್ತರ ವ್ಯಾಪಾರದ ಸುದೀರ್ಘ ಮತ್ತು ಸುಸ್ಥಾಪಿತ ಇತಿಹಾಸವನ್ನು ಹೊಂದಿದೆ. ಭೂತಾರಾಧನೆಯ ಸಂಪ್ರದಾಯವು ಇಲ್ಲಿನ ಜನಜೀವನದಲ್ಲಿ ಹಲವು ಶತಮಾನಗಳಿಂದ ಹಾಸುಹೊಕ್ಕಾಗಿದೆ.

“ಭೂತಾರಧನೆಯಲ್ಲಿ ಸಂಗೀತ ನುಡಿಸುವುದು ನನ್ನ ಉದ್ಯೋಗ” ಎನ್ನುತ್ತಾರೆ ನಾಸಿರ್.‌ ತುಳುನಾಡಿನ ಮುಸ್ಲಿಂ ಸಮುದಾಯಕ್ಕೆ ಸೇರಿದವರಾದ ಅವರು ಮುಸ್ಲಿಂ ಸಮುದಾಯದವರೇ ನಿರ್ವಹಿಸುವ ವಾದ್ಯ ಸಂಗೀತ ತಂಡದ ಸದಸ್ಯರಾಗಿದ್ದಾರೆ. “ಈ ಆಚರಣೆಗಳಲ್ಲಿ ಪ್ರದರ್ಶನ ನೀಡುವಾಗ ನಮಗೆ ಯಾವುದೇ ತೊಂದರೆ ಎದುರಾಗಿಲ್ಲ.”

ಭೂತಾರಾಧನೆಯು ಅನೇಕ ಸಮುದಾಯಗಳನ್ನು ಒಂದು ಚಪ್ಪರದಡಿ ತರುವ ಆಚರಣೆಯಾಗಿದೆ ಎನ್ನುತ್ತಾರೆ ಕರ್ನಾಟಕದ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಸಂಸ್ಥೆಯ ಸಹಾಯಕ ಸಂಸೋಧಕ  ನಿತೇಶ್ ಅಂಚನ್.

ನಾಸಿರ್‌ ಅವರ ಕುಟುಂಬವು ನಾಲ್ಕು ತಲೆಮಾರುಗಳಿಂದ ಭೂತಾರಾಧನೆಯ ಆಚರಣೆಗಳಲ್ಲಿ ನಾದಸ್ವರ ಮತ್ತು ಇತರ ವಾದ್ಯಗಳನ್ನು ನುಡಿಸುತ್ತಿದೆ. ಅವರು ತಮ್ಮ ತಂದೆಯಿಂದ ಈ ಕಲೆಯನ್ನು ಬಳುವಳಿಯಾಗಿ ಪಡೆದಿದ್ದು. ಅವರ ಕುಟುಂಬದಲ್ಲಿ ಈ ವೃತ್ತಿಯಲ್ಲಿರುವ ಕೊನೆಯ ಕೊಂಡಿ ನಾಸಿರ್.

“ಭೂತಗಳು ತುಳುನಾಡು ಜನರ ದೈವಗಳು” ಎಂದು ಅಂಚನ್‌ ಹೇಳುತ್ತಾರೆ. ಇಲ್ಲಿ ಭೂತಗಳು ಕೇವಲ ಪೂಜಿಸಲ್ಪಡುವುದಿಲ್ಲ, ಅವು ಇಲ್ಲಿನ ಜನರ ಬದುಕಿನ ಅವಿಭಾಜ್ಯ ಅಂಗವಾಗಿವೆ ಎಂದು ಅವರು ಮುಂದುವರೆದು ಹೇಳುತ್ತಾರೆ.ಭೂತಾರಾಧನೆಗೆ ಸಂಬಂದಿಸಿದ ಪ್ರದರ್ಶನಗಳಲ್ಲಿ ಮಹಿಳೆಯರು ಪಾತ್ರ ಧರಿಸುವುದಿಲ್ಲ. ಆದರೆ ಮಹಿಳಾ ಪಾತ್ರಗಳಿವೆ. ಅವುಗಳನ್ನು ಗಂಡಸರೇ ನಿರ್ವಹಿಸುತ್ತಾರೆ.

ಈ ಕಿರುಚಿತ್ರವು ನಾಸಿರ್‌ ಅವರು ತುಳುನಾಡಿನ ವಿವಿಧೆಡೆ ಭೂತಾರಾಧನೆಯಲ್ಲಿ ನೀಡಿದ ಪ್ರದರ್ಶನಗಳನ್ನು ಒಳಗೊಂಡಿದೆ.

ತುಳುನಾಡಿನ ಭೂತಗಳು: ಸಾಮರಸ್ಯ ಸಂಪ್ರದಾಯದ ಸ್ಫೂರ್ತಿ

ಕವರ್ ಫೋಟೋ: ಗೋವಿಂದ್ ರಾಧೇಶ್ ನಾಯರ್

ಈ ವರದಿಗೆ ಮೃಣಾಲಿನಿ ಮುಖರ್ಜಿ ಫೌಂಡೇಶನ್ (ಎಂಎಂಎಫ್) ನ ಫೆಲೋಶಿಪ್ ಬೆಂಬಲ ನೀಡಿರುತ್ತದೆ.

ಅನುವಾದ: ಶಂಕರ. ಎನ್. ಕೆಂಚನೂರು

Faisal Ahmed

फैज़ल अहमद, डॉक्यूमेंट्री फ़िल्म बनाते हैं. अभी वह कर्नाटक के तटीय इलाक़े में स्थित अपने गांव मालपे में रहते हैं. इससे पहले उन्होंने मणिपाल अकादमी ऑफ़ हायर एज़ुकेशन के साथ काम किया, जहां उन्होंने तुलुनाडु की जीवित संस्कृतियों पर डॉक्यूमेंट्री फ़िल्मों का निर्देशन किया है. वह एमएमएफ़-पारी के 2022-23 के फ़ेलो हैं.

की अन्य स्टोरी Faisal Ahmed
Text Editor : Siddhita Sonavane

सिद्धिता सोनावने एक पत्रकार हैं और पीपल्स आर्काइव ऑफ़ रूरल इंडिया में बतौर कंटेंट एडिटर कार्यरत हैं. उन्होंने अपनी मास्टर्स डिग्री साल 2022 में मुम्बई के एसएनडीटी विश्वविद्यालय से पूरी की थी, और अब वहां अंग्रेज़ी विभाग की विज़िटिंग फैकल्टी हैं.

की अन्य स्टोरी Siddhita Sonavane
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

की अन्य स्टोरी Shankar N. Kenchanuru