ನೀರಿನ ಕನಸು ಕಾಣುತ್ತಾ ಸಾಲದಲ್ಲಿ ಮುಳುಗುವವರು

ಆಂಧ್ರಪ್ರದೇಶದ ಅನಂತಪುರದ ಈ ಕಥೆ 20 ವರ್ಷಗಳ ಹಿಂದೆ ಇದೇ ತಿಂಗಳು 'ದಿ ಹಿಂದೂ' ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ನೀರಿನ ಕೊರತೆ ಹೆಚ್ಚಾಗಿ ಕೊಳವೆ ಬಾವಿ ತೋಡಿಸುವುದು ಹೆಚ್ಚಾಗಿರುವ ಈ ಸಮಯದಲ್ಲಿ ಅದನ್ನು ನಾವು ಮರು ಪ್ರಕಟಿಸುತ್ತಿದ್ದೇವೆ

ಜುಲೈ 7, 2024 | ಪಿ.ಸಾಯಿನಾಥ್

ರೈತರ ಹೃದಯದಲ್ಲಿ ಎಮ್.ಎಸ್.‌ ಸ್ವಾಮಿನಾಥನ್‌ ಅಜರಾಮರ

ಡಾ.ಎಂ.ಎಸ್.ಸ್ವಾಮಿನಾಥನ್, 1925-2023, ಭಾರತದ ಅಗ್ರಗಣ್ಯ ಕೃಷಿ ವಿಜ್ಞಾನಿ. ಅವರು ಕೃಷಿ ಸಂಶೋಧನೆ, ನೀತಿ ಮತ್ತು ಯೋಜನೆ ಕ್ಷೇತ್ರದಲ್ಲಿ ಗಣನೀಯ ಕೊಡುಗೆ ನೀಡಿದ್ದಾರೆ. ಕೃಷಿ ಕ್ಷೇತ್ರದ ಬೆಳವಣಿಗೆಯನ್ನು ಅಳೆಯಲು ಕೇವಲ ಬೆಳೆ ಇಳುವರಿಯನ್ನು ಲೆಕ್ಕಿಸದೆ ರೈತನ ಆದಾಯ ಹೆಚ್ಚಳವನ್ನು ಸಹ ಗಣನೆಗೆ ತೆಗೆದುಕೊಳ್ಳಬೇಕು ಎಂದು ಅವರು ವಾದಿಸಿದ್ದರು

ಅಕ್ಟೋಬರ್ 3, 2023 | ಪಿ.ಸಾಯಿನಾಥ್

ಪುರುಲಿಯಾ: ಸ್ವಾತಂತ್ರ್ಯ, ಪ್ರೇಮದ ಹಾಡುಗಳು

ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಜಾನಪದ ಗೀತೆಗಳು ಹೊಸ ಅರ್ಥವನ್ನು ಪಡೆದುಕೊಂಡಿದ್ದವು. ಡೋಲು ವಾದಕರು ಹಾಗೂ ಗಾಯಕರು ಈ ಸಮಯದಲ್ಲಿ ಸಂದೇಶವಾಹಕರಾಗಿ ಬ್ರಿಟಿಷರ ವಿರುದ್ಧ ದಂಗೆಯೇಳುವಂತೆ ಸಂದೇಶ ಹರಡುತ್ತಿದ್ದರು

ಆಗಸ್ಟ್ 17, 2023 | ಪಿ.ಸಾಯಿನಾಥ್

ಶೋಭಾರಾಂ ಗೆಹೆರ್ವರ್‌: ಗಾಂಧಿ ಮತ್ತು ಅಂಬೇಡ್ಕರ್ ನಡುವೆ ಆಯ್ಕೆ ಮಾಡಿಕೊಳ್ಳಬೇಕೆ?

2023ರ ಆಗಸ್ಟ್‌ 15ರ ಸಂಭ್ರಮದ ದಿನದದಂದು ಪರಿ ನಿಮ್ಮ ಓದಿಗಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಗುಂಡೇಟು ತಿಂದು ಗಾಯಗೊಂಡ ಶೋಭಾರಾಮ್‌ ಗೆಹೆರ್ವರ್‌ ಅವರ ಕತೆಯನ್ನು ತಂದಿದೆ. ರಾಜಸ್ಥಾನದ ದಲಿತ ಸಮುದಾಯಕ್ಕೆ ಸೇರಿದ ಈ 98 ವರ್ಷದ ಹಿರಿಯ ವ್ಯಕ್ತಿ ಸ್ವಯಂ-ಘೋಷಿತ ಗಾಂಧಿವಾದಿ ಹಾಗೂ ಅಂಬೇಡ್ಕರ್‌ ಅವರ ಕಟ್ಟಾ ಅಭಿಮಾನಿ. ಮತ್ತು ಅಂದಿನ ಕಾಲದ ಕ್ರಾಂತಿಕಾರಿ ಭೂಗತ ಹೊರಾಟದ ಭಾಗವೂ ಆಗಿದ್ದವರು. ಈ ಲೇಖನವು 2022ರಲ್ಲಿ ಪೆಂಗ್ವಿನ್ ಪ್ರಕಾಶನ ಪ್ರಕಟಿಸಿದ ಪಿ. ಸಾಯಿನಾಥ್ ಅವರ 'ದಿ ಲಾಸ್ಟ್ ಹೀರೋಸ್, ಫೂಟ್ ಸೋಲ್ಜರ್ಸ್ ಆಫ್ ಇಂಡಿಯಾಸ್ ಫ್ರೀಡಂ' ಪುಸ್ತಕದ ಆಯ್ದ ಭಾಗ

ಆಗಸ್ಟ್ 15, 2023 | ಪಿ.ಸಾಯಿನಾಥ್

ಎಚ್ಚರಿಕೆ, ಉಡುಗೊರೆ ನೀಡುವ ಗುತ್ತಿಗೆದಾರರಿದ್ದಾರೆ

ಜಾರ್ಖಂಡ್‌ ರಾಜ್ಯದ ಗುಮ್ಲಾ ಜಿಲ್ಲೆಯ ಟೆಟ್ರಾ ಗ್ರಾಮದ ತೆರೇಸಾ ಲಾಕ್ರಾ, ಸಣ್ಣ ಗ್ರಾಮವೊಂದರ ಸರಪಂಚ್‌ ಅಲ್ಲಿನ ಪ್ರಬಲರ ಇಚ್ಛೆಗೆ ವಿರುದ್ಧವಾಗಿ ನಿಂತರೆ ಏನಾಗುತ್ತದೆನ್ನುವ ಪಾಠವೊಂದನ್ನು ಇತ್ತೀಚೆಗೆ ಕಲಿತಿದ್ದಾರೆ

ಜುಲೈ 10, 2023 | ಪಿ.ಸಾಯಿನಾಥ್

ವಿದರ್ಭ: ಮಳೆಯಿಲ್ಲದ ಊರಿನಲ್ಲಿ ʼಹಿಮʼ ಮತ್ತು ನೀರಿನಾಟ

2005ರಲ್ಲಿ ಪ್ರಕಟವಾದ ಈ ವರದಿಯ ಸಾರಾಂಶವನ್ನು 11ನೇ ತರಗತಿಗೆ ಪಾಠ ಮಾಡಲಾಗುತ್ತಿತ್ತು ಎನ್‌ಸಿಇಆರ್‌ಟಿ ತನ್ನ ಇತ್ತೀಚಿನ ಸುತ್ತಿನ ವಾಸ್ತವವನ್ನು ಮರೆಮಾಚುವ ಪ್ರಯತ್ನದ ಭಾಗವಾಗಿ 2023-2024ರ ಪಠ್ಯ ಪುಸ್ತಕದಿಂದ ಈ ಪಠ್ಯವನ್ನು ತೆಗೆದುಹಾಕಿದೆ. ವಿಚಿತ್ರವೆಂದರೆ, ಫನ್‌ ಎಂಡ್‌ ಫುಡ್‌ ವಿಲೇಜ್‌ ಈಗಲೂ ಕಾರ್ಯನಿರ್ವಹಿಸುತ್ತಿದೆ

ಏಪ್ರಿಲ್ 11, 2023 | ಪಿ.ಸಾಯಿನಾಥ್

ತೇಲು ಮಹತೋ ತೋಡಿದ ಬಾವಿ

ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಹಿರಿಯರಲ್ಲಿ ಕೆಲವೇ ಕೆಲವು ಜನರು ಉಳಿದಿದ್ದಾರೆ. ಅವರಲ್ಲೊಬ್ಬರು ಏಪ್ರಿಲ್ 6, 2023ರಂದು ಪಶ್ಚಿಮ ಬಂಗಾಳದ ಪುರುಲಿಯಾ ಜಿಲ್ಲೆಯಲ್ಲಿರುವ ತಮ್ಮ ಮನೆಯಲ್ಲಿ ಕೊನೆಯುಸಿರೆಳೆದರು

ಏಪ್ರಿಲ್ 10, 2023 | ಪಿ.ಸಾಯಿನಾಥ್

ವೈವಿಧ್ಯತೆಯ ಏಕತೆ, ವಿವಿಧತೆಯ ಹರ್ಷ

ಪರಿ ಅನುವಾದಕರ ತಂಡವು ನಮ್ಮ ಭಾಷೆಗಳ ಮೂಲಕ ಮತ್ತು ಅದರಾಚೆಗೆ ನಾವು ವಾಸಿಸುವ ವೈವಿಧ್ಯಮಯ ಜಗತ್ತಿಗೆ ಧುಮುಕುವ ಮೂಲಕ ಅಂತರರಾಷ್ಟ್ರೀಯ ಭಾಷಾಂತರ ದಿನವನ್ನು ಆಚರಿಸುತ್ತಿದೆ

ಸೆಪ್ಟೆಂಬರ್ 30, 2022 | ಪಿ.ಸಾಯಿನಾಥ್

ಕ್ರಾಂತಿಗೆ ಕೈತುತ್ತು ನೀಡಿದ ಭವಾನಿ ಮಹತೊ

ಮೊದಲಿಗೆ 101ರಿಂದ 104 ವರ್ಷದವರಿರಬಹುದಾದ ಭವಾನಿ ಮಹತೊ ತಾವು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿಲ್ಲವೆಂದು ಖಡಾಖಂಡಿತವಾಗಿ ಹೇಳಿದರು. ನಂತರ ಪಶ್ಚಿಮ ಬಂಗಾಳದ ಪುರುಲಿಯಾ ಜಿಲ್ಲೆಯಲ್ಲಿರುವ ಅವರ ಮನೆಯಲ್ಲಿ ಕುಳಿತು ಅವರ ಕತೆ ಕೇಳುವಾಗ ಆ ಕತೆಗೆ ಸಿಕ್ಕ ತಿರುವಿನಿಂದಾಗಿ ದೊರೆತ ಅವರ ಮಹಾನ್‌ ತ್ಯಾಗದ ವಿವರ ನಮ್ಮನ್ನು ದಂಗುಬಡಿಸಿತು

ಏಪ್ರಿಲ್ 18, 2022 | ಪಿ.ಸಾಯಿನಾಥ್

ಕ್ಯಾಪ್ಟನ್ ಭಾವ್‌ ಅವರೊಡನೆ ಇಲ್ಲವಾದ ಇತಿಹಾಸದ ಒಂದು ಕ್ಷಣ

'ನಾವು ವಿಮೋಚನೆ ಮತ್ತು ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದೆವು – ನಾವು ವಿಮೋಚನೆಯನ್ನು ಪಡೆದೆವು'

ಫೆಬ್ರವರಿ 17, 2022 | ಪಿ.ಸಾಯಿನಾಥ್‌

ದೇಶಭಕ್ತಿಯ ವಿರೋಧಾಭಾಸ: ದೇಸಿ ಮತ್ತು ವಿದೇಶಿ ಮದ್ಯ

ಕಳೆದ ದಶಕದಲ್ಲಿ ಮಧ್ಯಪ್ರದೇಶದಲ್ಲಿ ಭಾರತೀಯ ನಿರ್ಮಿತ ವಿದೇಶಿ ಮದ್ಯದ 'ಸೇವನೆ' ಶೇಕಡಾ 23ರಷ್ಟು ಹೆಚ್ಚಾಗಿದೆ ಎಂದು ಹೊರಡಿಸಲಾಗಿರುವ ಅಧಿಕೃತ ಪ್ರಕಟಣೆಯು 1994ರಲ್ಲಿ ಸುರ್ಗುಜಾ ಜಿಲ್ಲೆಯ ಮೂಲಕ ಹಾದು ಹೋಗುವಾಗ ನಡೆದ ಘಟನೆಯೊಂದರ ಕುತೂಹಲಕಾರಿ ನೆನಪುಗಳನ್ನು ಮತ್ತೆ ಚಿಗುರಿಸಿದೆ

ಜನವರಿ 3, 2022 | ಪಿ.ಸಾಯಿನಾಥ್

ಭಾರತದ ಮುಖ್ಯ ನ್ಯಾಯಮೂರ್ತಿಗಳಿಗೊಂದು ಬಹಿರಂಗ ಪತ್ರ

ಭಾರತದಲ್ಲಿ ತನಿಖಾ ಪತ್ರಿಕೋದ್ಯಮ ಕಣ್ಮರೆಯಾಗುತ್ತಿದೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿಗಳು ಸರಿಯಾಗಿಯೇ ಗಮನಿಸಿದ್ದಾರೆ. ಆದರೆ ಸ್ವತಂತ್ರ ಭಾರತದ ಇತಿಹಾಸದಲ್ಲಿಯೇ ಪತ್ರಿಕಾ ಸ್ವಾತಂತ್ರ್ಯ ಅತ್ಯಂತ ಕೆಳಮಟ್ಟದಲ್ಲಿದೆ ಎಂಬ ಅಂಶವನ್ನು ಕೂಡಾ ನ್ಯಾಯಾಂಗವು ಗಮನಿಸಬೇಕಲ್ಲವೇ?

ಡಿಸೆಂಬರ್ 23, 2021 | ಪಿ.ಸಾಯಿನಾಥ್

ಹಲವು ಬಗೆಯಲ್ಲಿ ಗೆದ್ದ ರೈತರು ಮತ್ತು ಎಲ್ಲ ವಿಧದಲ್ಲೂ ಸೋತುಹೋದ ಮಾಧ್ಯಮ

ಪ್ರಧಾನಿಯವರು ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸಿದ್ದು ʼಕೆಲವುʼ ರೈತರನ್ನು 'ಮನವೊಲಿಸಲು' ಸಾಧ್ಯವಾಗದ ಸಲುವಾಗಿಯಲ್ಲ, ಅವರದನ್ನು ರದ್ದುಗೊಳಿಸಿದ್ದು ಹೇಡಿ ಮಾಧ್ಯಮಗಳು ತಮ್ಮ ಹೋರಾಟ ಮತ್ತು ಬಲವನ್ನು ಅಪಮೌಲ್ಯಗೊಳಿಸಲು ಪ್ರಯತ್ನಿಸಿದ್ದಾಗಲೂ, ಛಲ ಬಿಡದೆ ಅದರ ವಿರುದ್ಧ ದೃಢನಿಶ್ಚಯದಿಂದ ನಿಂತಿದ್ದ ʼಹಲವುʼ ರೈತರ ಸಲುವಾಗಿ

ನವೆಂಬರ್ 20, 2021 | ಪಿ.ಸಾಯಿನಾಥ್

ಅಭಿವೃದ್ಧಿಯ ಉಪಟಳಕ್ಕೆ ಬಸವಳಿದ ಚಿಕಪಾರ್

ಸೈನ್ಯ, ವಾಯು ಪಡೆ ಮತ್ತು ನೌಕಾಪಡೆ ಈ ಮೂರರಿಂದಲೂ ಆಕ್ರಮಿಸಲ್ಪಟ್ಟು ಇಲ್ಲವಾದ ಸ್ಥಳವೊಂದು ಈ ಭೂಮಿಯ ಮೇಲೆ ಇರುವುದು ಹೌದಾದರೆ ಅದು ಖಂಡಿತವಾಗಿಯೂ, ಒಡಿಶಾದ ಕೊರಾಪುಟ್‌ನ ಚಿಕಪಾರ್‌ ಎನ್ನುವ ಊರು

ನವೆಂಬರ್ 18, 2021 | ಪಿ.ಸಾಯಿನಾಥ್

ನಹಕುಲ್‌ ಪಾಂಡೋ ಸಾಲ ಮಾಡಿ ಸೂರು ಕಳೆದುಕೊಂಡ ಕತೆ

1990ರ ದಶಕವು ಬಡತನ ನಿರ್ಮೂಲನೆಯ ಗುರಿಯನ್ನು ಹೊಂದಿರುವ ಬಹಳಷ್ಟು 'ಯೋಜನೆಗಳಿಗೆ' ಸಾಕ್ಷಿಯಾಯಿತು ಮತ್ತು ಅವುಗಳನ್ನು ಬೇಕಾಬಿಟ್ಟಿ ಜಾರಿಗೊಳಿಸಲಾಯಿತು. ಛತ್ತೀಸಗಢದ ಸುರ್ಗುಜಾ ಜಿಲ್ಲೆಯಲ್ಲಿ ನಹಕುಲ್ ಪಾಂಡೋ ತಮ್ಮ ಸೂರನ್ನು ಕಳೆದುಕೊಂಡ ಕತೆ ಅಂತಹ ಬೇಜವಾಬ್ದರಿಗಳ ಉದಾಹರಣೆಯಂತಿದೆ

ನವೆಂಬರ್ 3, 2021 | ಪಿ.ಸಾಯಿನಾಥ್

ಸಣ್ಣ ಪ್ರತಿಫಲಕ್ಕಾಗಿ ದೊಡ್ಡ ಅಪಾಯವೆದುರಿಸುವ ಕಡಲ ವೀರರು

ತಮ್ಮ ಮಾಲಿಕರನ್ನು ಶ್ರೀಮಂತರನ್ನಾಗಿಸಲು ಹಗಲಿರುಳು ದುಡಿವ ತಮಿಳುನಾಡಿನ ರಾಮನಾಡ್‌ ಜಿಲ್ಲೆಯ ಮೀನುಗಾರರೊಡನೆ ಎರಡು ರಾತ್ರಿಗಳ ಪ್ರವಾಸದ ನೆನಪು

ಅಕ್ಟೋಬರ್ 26, 2021 | ಪಿ.ಸಾಯಿನಾಥ್

ಕಿಶನ್‌ ಜೀ ಅವರ ಗಾಡಿ ಲಾರಿ ಕೆಳಗೆ ಸಿಕ್ಕಿಕೊಂಡ ಕ್ಷಣ

ಸಣ್ಣ ತಳ್ಳುಗಾಡಿ ವ್ಯಾಪಾರಿಗಳು ಎಲ್ಲೆಡೆ ಇರುವಂತೆ ಮುರಾದಾಬಾದ್‌ನಲ್ಲಿ ಕೂಡ ಇದ್ದಾರೆ, ಇಲ್ಲಿ ಅವರ ಗಾಡಿಗಳು ಆಗಾಗ ದೊಡ್ಡ ವಾಹನಗಳಿಂದ ತೊಂದರೆಗೊಳಗಾಗುತ್ತವೆ

ಅಕ್ಟೋಬರ್ 4, 2021 | ಪಿ.ಸಾಯಿನಾಥ್

ಪ್ರತಿ ಭಾರತೀಯ ಭಾಷೆಯೂ ನಮ್ಮದೇ ಭಾಷೆ

ಇಂದು ಸೆಪ್ಟೆಂಬರ್ 30, ಈ ದಿನವನ್ನು ಅಂತರರಾಷ್ಟ್ರೀಯ ಅನುವಾದ ದಿನವಾಗಿ ಆಚರಿಸುತ್ತೇವೆ. ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾ 13 ಭಾಷೆಗಳಲ್ಲಿ ತನ್ನ ವರದಿ/ಲೇಖನಗಳನ್ನು ಪ್ರಕಟಿಸುತ್ತದೆ - ಅಂದರೆ, ಇದು ಇತರ ಯಾವುದೇ ಸುದ್ದಿ ಪಸರಿಸುವ ಜಾಲತಾಣಗಳಿಗಿಂತ ಹೆಚ್ಚು

ಸೆಪ್ಟೆಂಬರ್ 30, 2021 | ಪಿ.ಸಾಯಿನಾಥ್

ಹೌಸಾಬಾಯಿ ಪಾಟೀಲ್: ಇತಿಹಾಸ ಸೇರಿದ ವೀರಗಾಥೆ

1943-46ರಲ್ಲಿ ಬ್ರಿಟಿಷ್ ಸಂಸ್ಥೆಗಳ ಮೇಲೆ ದಾಳಿ ಮಾಡಿದ ಸತಾರಾದಲ್ಲಿನ ಕ್ರಾಂತಿಕಾರಿ ಭೂಗತ ವ್ಯಕ್ತಿಯೊಂದಿಗೆ ಆ ದಾಳಿಯಲ್ಲಿ ಭಾಗವಹಿಸಿದ್ದ 95 ವರ್ಷದ ಫೈರ್ ಬ್ರಾಂಡ್ ಸ್ವಾತಂತ್ರ್ಯ ಹೋರಾಟಗಾರ್ತಿ, ಕೊನೆಯವರೆಗೂ ಬಡವರಿಗಾಗಿ ಹಾಗೂ ನ್ಯಾಯದ ಸಲುವಾಗಿ ಬಡಿದಾಡುವ ಹೋರಾಟಗಾರರಾಗಿಯೇ ಉಳಿದಿದ್ದರು

ಸೆಪ್ಟೆಂಬರ್ 24, 2021 | ಪಿ.ಸಾಯಿನಾಥ್

ಮಲ್ಕನಗಿರಿಯಲ್ಲಿ ಸಂತೆಯಿಂದ ಸಂತೆಗೆ!

ಒಡಿಶಾದ ಮಲ್ಕಾನ್‌ಗಿರಿ ಜಿಲ್ಲೆಯ ಆದಿವಾಸಿ ಜನರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಹಾಟ್‌ಗಳು ಅಥವಾ ಗ್ರಾಮೀಣ ಮಾರುಕಟ್ಟೆಗಳನ್ನು ಅವಲಂಬಿಸಿದ್ದಾರೆ. ಆದಾಗ್ಯೂ, ಕೆಲವೊಮ್ಮೆ ಅವರು ಅಲ್ಲಿಗೆ ತಲುಪುವುದಿಲ್ಲ

ಆಗಸ್ಟ್ 19, 2021 | ಪಿ.ಸಾಯಿನಾಥ್

ನಮ್ಮ ಸ್ವಾತಂತ್ರ್ಯಗಳಿಗಾಗಿ ಭಗತ್‌ ಸಿಂಗ್‌ ಝುಗ್ಗಿಂಯಾ ಅವರ ಹೋರಾಟ

ನಮ್ಮ ನಡುವೆ ಬದುಕಿರುವ ಭಾರತದ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಒಬ್ಬರಾದ ಪಂಜಾಬಿನ ಹೋಶಿಯಾರ್ ಪುರ ಜಿಲ್ಲೆಯ ಭಗತ್ ಸಿಂಗ್ ಝುಗ್ಗಿಂಯಾ ಬ್ರಿಟಿಷ್ ರಾಜ್ ವಿರುದ್ಧದ ತಮ್ಮ ಹೋರಾಟವನ್ನೂ ಎಂದೂ ನಿಲ್ಲಿಸಲಿಲ್ಲ. ಇಂದಿಗೂ, ಅವರು ರೈತರು ಮತ್ತು ಕಾರ್ಮಿಕರಿಗಾಗಿ ಹೋರಾಟದ ಕಣದಲ್ಲಿದ್ದಾರೆ - ಅದೂ 93ನೇ ವಯಸ್ಸಿನಲ್ಲಿ

ಆಗಸ್ಟ್ 15, 2021 | ಪಿ.ಸಾಯಿನಾಥ್

‘ಆದರೆ ಸರ್, ನನ್ನ ಕ್ಯಾಬಿನ್ನಿನಲ್ಲಿ ಇಷ್ಟಿರಿಯೋ ಇದೆ ಅಲ್ವಾ?

ಹಳ್ಳಿಗಳ ಅನೇಕ ಲಾರಿ ಡ್ರೈವರುಗಳಂತೆಯೇ, ಕೊರಪುಟ್‌ನ ಈ ಗಾಡಿಯ ಚಾಲಕನೂ ತನ್ನ ಮಾಲಿಕನ ಕಣ್ಣು ತಪ್ಪಿಸಿ ಜನರನ್ನು ಸಾಗಿಸುವ ಮೂಲಕ ಒಂದಿಷ್ಟು ಸಂಪಾದನೆ ಮಾಡುತ್ತಾರೆ

ಆಗಸ್ಟ್ 5, 2021 | ಪಿ.ಸಾಯಿನಾಥ್

ಉತ್ತರ ಪ್ರದೇಶ ಪಂಚಾಯತ್‌ ಚುನಾವಣೆ: 1,621ಕ್ಕೆ ತಲುಪಿದ ಶಿಕ್ಷಕರ ಸಾವಿನ ಸಂಖ್ಯೆ

ದಿನದಿಂದ ದಿನಕ್ಕೆ ಬೆಳೆಯುತ್ತಿರುವ ದುರಂತದ ಸರಮಾಲೆಗೆ ಕಾರಣವಾದ ಪಂಚಾಯತ್ ಚುನಾವಣೆಗಳನ್ನು ಏಪ್ರಿಲ್‌ ತಿಂಗಳಿನಲ್ಲಿ ಯುಪಿ ಸರ್ಕಾರ ಏಕೆ ನಡೆಸಲು ಒಪ್ಪಿಕೊಂಡಿತು? ಪರಿ ನಿಮಗಾಗಿ ಈ ವರದಿಯನ್ನು ತಂದಿದೆ

ಮೇ 18, 2021 | ಪಿ.ಸಾಯಿನಾಥ್

ಅದು ಕಷ್ಟದ ದಿನಗಳ ರಾತ್ರಿಯಾಗಿತ್ತು

ಪೂರ್ವ ಮಹಾರಾಷ್ಟ್ರದ ಗೊಂಡಿಯಾ ಜಿಲ್ಲೆಯ ನೂರಾರು ಮಹಿಳೆಯರು ದೈನಂದಿನ ಕೂಲಿಗಾಗಿ ಸಣ್ಣ ಪಟ್ಟಣಗಳಿಂದ ಹತ್ತಿರದ ಹಳ್ಳಿಗಳಿಗೆ ತೆರಳುತ್ತಾರೆ. ನಗರಗಳಿಂದ ಹಳ್ಳಿಗಳಿಗೆ ನಡೆಯುವ ಈ ವಲಸೆಯ ಕುರಿತು ಹೆಚ್ಚು ಅಧ್ಯಯನಗಳು ನಡೆದಿಲ್ಲ

ಮೇ 1, 2021 | ಪಿ.ಸಾಯಿನಾಥ್

ಗಣಪತಿ ಬಾಳ್‌ ಯಾದವ್‌ (1920-2021) – ಅವರ ಸಾವಿಗಾಗಿ ವಿಷಾದಿಸುತ್ತೇವೆ, ಆದರೆ ಅವರ ಬದುಕನ್ನು ಸಂಭ್ರಮಿಸುತ್ತೇವೆ

ಭಾರತದಲ್ಲಿ ನಮ್ಮೊಡನೆ ಬದುಕಿರುವ ಕೆಲವೇ ಕೆಲವು ಹಿರಿಯ ಸ್ವಾತಂತ್ರ್ಯ ಹೋರಾಟಗಾರರಲ್ಲಿ 101 ವರ್ಷ ಪ್ರಾಯದ ಗಣಪತಿ ಯಾದವ್‌ ಒಬ್ಬರಾಗಿದ್ದರು. ಈ ಹಿರಿಯ ಜೀವ ತನ್ನ ಜೀವನದ ಕೊನೆಯ ದಿನಗಳವರೆಗೂ ತನ್ನ ಸೈಕಲ್‌ ಸವಾರಿಯನ್ನು ನಿಲ್ಲಿಸಿರಲಿಲ್ಲ

ಏಪ್ರಿಲ್ 20, 2021 | ಪಿ.ಸಾಯಿನಾಥ್

ಫೋರ್ಬ್ಸ್, ಭಾರತ ಮತ್ತು ಸಾಂಕ್ರಾಮಿಕ ಪಿಡುಗೆಂಬ ಮಾಯಾಪೆಟ್ಟಿಗೆ

ಕಳೆದ ಒಂದು ವರ್ಷದ ಅವಧಿಯಲ್ಲಿ ದೇಶದ ಜಿಡಿಪಿ ಪ್ರಮಾಣ 7.7ರಷ್ಟು ಕುಸಿದಿದೆ, ಒಂದೆಡೆ ನಾವು ಇನ್ನೊಂದು ಸುತ್ತಿನ ʼರಿವರ್ಸ್‌ʼ ವಲಸೆಗೆ ತಯಾರಾಗುತ್ತಿದ್ದರೆ, ದೆಹಲಿಯಲ್ಲಿ ಈಗಲೂ ರೈತರು ತಮ್ಮ ದನಿ ಒಂದು ದಿನ ಆಳುವವರಿಗೆ ಕೇಳಿಸಬಹುದೆಂದು ಕಾಯುತ್ತಿದ್ದಾರೆ. ಆದರೆ ಇದೆಲ್ಲದರ ನಡುವೆ ಸಂಭವಿಸಿರುವ ಅದ್ಭುತವೆಂದರೆ ನಮ್ಮ ಭಾರತೀಯ ಬಿಲಿಯನೇರ್‌ಗಳು ದಾಖಲೆಯ ಸಂಪತ್ತನ್ನು ಗಳಿಸಿ ಇನ್ನಷ್ಟು ಎತ್ತರಕ್ಕೇರಿದ್ದಾರೆ

ಏಪ್ರಿಲ್ 16, 2021 | ಪಿ.ಸಾಯಿನಾಥ್

ಶ್ರೀಮಂತ ರೈತರು, ಜಾಗತಿಕ ಒಳಸಂಚು, ಸ್ಥಳೀಯ ಮೂರ್ಖತನ

ದೆಹಲಿಯ ಗಡಿಯಲ್ಲಿ ಪ್ರತಿಭಟನಾ ನಿರತ ರೈತರನ್ನು ಚದುರಿಸುವ ಪ್ರಯತ್ನಗಳು ವಿಫಲವಾದ ನಂತರ ಜಾಗತಿಕ ಒಳಸಂಚಿನ ಬಗ್ಗೆ ಮಾತನಾಡುವ ಮೂಲಕ ಸ್ಥಳೀಯ ದಬ್ಬಾಳಿಕೆಯನ್ನು ಸಮರ್ಥಿಸಲಾಗುತ್ತಿದೆ. ಇದು ಹೀಗೆಯೇ ಮುಂದುವರೆದು ಈ ಜನರು ರೈತ ಹೋರಾಟದಲ್ಲಿ ಬೇರೆ ಗ್ರಹದ ಜೀವಿಗಳ ಕೈವಾಡವಿದೆಯೆಂದು ಆರೋಪಿಸುವ ದಿನಗಳೂ ಬರಬಹುದೆ?

ಫೆಬ್ರವರಿ 6, 2021 | ಪಿ.ಸಾಯಿನಾಥ್

ನೀವು ಈ ಕಾನೂನುಗಳು ರೈತರಿಗೆ ಮಾತ್ರ ಸಂಬಂದಿಸಿದ್ದು ಎಂದು ಭಾವಿಸಿದ್ದೀರಾ?

ಹೊಸ ಕೃಷಿ ಕಾನೂನುಗಳು ರೈತರಿಗೆ ಮಾತ್ರವಲ್ಲದೆ, ಎಲ್ಲರಿಗೂ ಕಾನೂನು ನೆರವು ಪಡೆಯುವ ಆಯ್ಕೆಯನ್ನು ನಿರಾಕರಿಸುತ್ತವೆ - 1975-77ರ ತುರ್ತು ಪರಿಸ್ಥಿತಿಯ ನಂತರ ಯಾರೂ ಯಾವ ಸರಕಾರವೂ ಹೀಗೆ ಮಾಡಿರಲಿಲ್ಲ. ದೆಹಲಿಯ ಗಡಿಯಲ್ಲಿರುವ ರೈತರು ನಮ್ಮೆಲ್ಲರ ಹಕ್ಕುಗಳಿಗಾಗಿ ಹೋರಾಡುತ್ತಿದ್ದಾರೆ

ಡಿಸೆಂಬರ್ 10, 2020 | ಪಿ.ಸಾಯಿನಾಥ್

‘ನಾವು ಅವನ ರಕ್ತವನ್ನು ಸಾಕಷ್ಟು ಹೊರತೆಗೆಯಲಿಲ್ಲ’

ಈ ಕೊವಿಡ್‌ ಬಿಕ್ಕಟ್ಟು ಮುಂದಿಟ್ಟಿರುವ ಮುಖ್ಯ ಪ್ರಶ್ನೆಯೆಂದರೆ ನಾವು ಎಷ್ಟು ಬೇಗ ಸಹಜ(ನಾರ್ಮಲ್) ಸ್ಥಿತಿಗೆ ಮರಳಬಹುದು ಎನ್ನುವುದಲ್ಲ. ಇಲ್ಲಿ ಭಾರತದ ಲಕ್ಷಾಂತರ ಬಡ ಭಾರತೀಯರಿಗೆ ʼಸಹಜ ಸ್ಥಿತಿʼಯೇ ಸಮಸ್ಯೆಯಾಗಿತ್ತು. ಮತ್ತು ಈಗಿನ ಹೊಸ ಸಹಜತೆಯು ತಮ್ಮ ಹಳೆಯ ಸಹಜತೆಗೆ ಸ್ಟಿರಾಯ್ಡ್‌ ನೀಡಿದಂತಾಗಿದೆ

ಆಗಸ್ಟ್ 10, 2020 | ಪಿ.ಸಾಯಿನಾಥ್

ಶಂಕರಯ್ಯ: ಒಂಭತ್ತು ದಶಕಗಳ ಕ್ರಾಂತಿಕಾರಿ

ಇಂದು ನಮ್ಮೊಂದಿಗಿರುವ ಕೆಲವೇ ಸ್ವಾತಂತ್ರ್ಯ ಹೋರಾಟಗಾರರಲ್ಲಿ, ಎನ್‍. ಶಂಕರಯ್ಯ ಅವರೂ ಒಬ್ಬರು. ಚೆನ್ನೈನಲ್ಲಿ ‘ಪರಿ’ಯೊಂದಿಗೆ ಸಂಭಾಷಿಸುತ್ತ; ಬ್ರಿಟಿಷ್‍ ರಾಜ್‍ ವಿರುದ್ಧ ಸಾರ್ವಜನಿಕವಾಗಿ, ಜೈಲಿನಲ್ಲಿ ಹಾಗೂ ಭೂಗತರಾಗಿ ತಾವು ನಡೆಸಿದ ಹೋರಾಟಗಳ ಅಚ್ಚರಿದಾಯಕ ಕಥೆಯನ್ನು ಅವರು ನಮಗೆ ತಿಳಿಸಿದರು

ಜುಲೈ 15, 2020 | ಪಿ.ಸಾಯಿನಾಥ್

ಕೊವಿಡ್ 19 ಅನ್ನು ಕುರಿತಂತೆ ನಾವು ಮಾಡಬೇಕಾದುದೇನು?

ಬಿಕ್ಕಟ್ಟಿನ ಪರಿಸ್ಥಿತಿಯನ್ನು ನಿಭಾಯಿಸುವ ನಿಟ್ಟಿನಲ್ಲಿ ಸರ್ಕಾರವು ಪ್ರಕಟಿಸಿದ ಈ ‘ಪ್ಯಾಕೇಜ್’, ಸಂವೇದನಾಶೂನ್ಯತೆ ಹಾಗೂ ಉಪೇಕ್ಷೆಯ ಮಿಶ್ರಣವೇ ಸರಿ

ಮಾರ್ಚ್ 27, 2020 | ಪಿ.ಸಾಯಿನಾಥ್

ಒಣಹುಲ್ಲಿನ ರಾಶಿಯ ಮೇಲೆ ನೇತಾಡುತ್ತಿರುವ ಮನುಷ್ಯ

ಗ್ರಾಮೀಣ ಭಾರತದ ಬೀದಿಗಳಲ್ಲಿ ಪ್ರಯಾಣಿಸುವಾಗ, ನೀವು ಕೆಲವೊಮ್ಮೆ ವಿಚಿತ್ರ ಅನುಭೂತಿಗಳನ್ನು ಎದುರಿಸುತ್ತೀರಿ ಅದು ನಿಮಗೆ ಸಂತೋಷವನ್ನು ನೀಡುತ್ತದೆ

ಮಾರ್ಚ್ 19, 2020 | ಪಿ.ಸಾಯಿನಾಥ್

P. Sainath is Founder Editor, People's Archive of Rural India. He has been a rural reporter for decades and is the author of 'Everybody Loves a Good Drought' and 'The Last Heroes: Foot Soldiers of Indian Freedom'.

Other stories by P. Sainath
Translator : PARI Translations, Kannada