"ನಾವು ತಲೆಮಾರುಗಳಿಂದ ಕೇವಲ ಎರಡು ಕೆಲಸಗಳನ್ನು ಮಾಡುತ್ತಿದ್ದೇವೆ - ದೋಣಿ ನಡೆಸುವುದು ಮತ್ತು ಮೀನುಗಾರಿಕೆ. ಉ [ನಿರು]ದ್ಯೋಗದ ಪ್ರರಿಸ್ಥಿತಿಯನ್ನು ಗಮನಿಸಿದರೆ, ನನ್ನ ಮಕ್ಕಳು ಸಹ ಇದನ್ನು ಮುಂದುವರಿಸಬೇಕಾಗುತ್ತದೆ ಎನ್ನಿಸುತ್ತದೆ" ಎಂದು ವಿಕ್ರಮಾದಿತ್ಯ ನಿಷಾದ್ ಹೇಳುತ್ತಾರೆ. ಅವರು ಕಳೆದ 20 ವರ್ಷಗಳಿಂದ ಗಂಗಾ ನದಿಯ ಒಂದು ಘಾಟ್ (ದಡ) ದಿಂದ ಮತ್ತೊಂದು ದಡಕ್ಕೆ ವಾರಣಾಸಿಯ ಯಾತ್ರಾರ್ಥಿಗಳು ಮತ್ತು ಪ್ರವಾಸಿಗರನ್ನು ಸಾಗಿಸುತ್ತಿದ್ದಾರೆ.
ಗಂಗೆಯು ಹರಿಯುವ ಒಂದು ಸಾವಿರ ಕಿಲೋಮೀಟರಿಗೂ ಹೆಚ್ಚು ಪ್ರದೇಶದಲ್ಲಿ ನಿರುದ್ಯೋಗವು ಕಳೆದ ಐದು ವರ್ಷಗಳಿಂದ ಸುಮಾರು 50 ಪ್ರತಿಶತದಲ್ಲೇ ನಿಂತಿದೆ ಎಂದು ಇಂಡಿಯಾ ಎಂಪ್ಲಾಯ್ಮೆಂಟ್ ರಿಪೋರ್ಟ್ 2024 ಹೇಳುತ್ತದೆ.
"ಮೋದಿಜೀ 'ವೋಕಲ್ ಫಾರ್ ಲೋಕಲ್' ಮತ್ತು 'ವಿರಾಸತ್ ಹಿ ವಿಕಾಸ್ [ಪರಂಪರೆಯೇ ಅಭಿವೃದ್ಧಿ]' ಗಾಗಿ ಪ್ರಚಾರ ಮಾಡುತ್ತಿದ್ದಾರೆ. ದಯವಿಟ್ಟು ಹೇಳಿ ಆ ವಿರಾಸತ್ [ಪರಂಪರೆ] ಯಾರಿಗಾಗಿ? ಇದು ನಾವು, ಕಾಶಿ [ವಾರಣಾಸಿ] ಜನರಿಗಾಗಿಯೋ ಅಥವಾ ಹೊರಗಿನವರಿಗಾಗಿಯೋ?" ಎಂದು ಅವರು ಕೇಳುತ್ತಾರೆ. ಪ್ರಧಾನಿ ನರೇಂದ್ರ ಮೋದಿ ಅವರು ವಾರಣಾಸಿಯಿಂದ ಮೂರನೇ ಬಾರಿಗೆ ಆಯ್ಕೆಯಾದರು ಮತ್ತು ಅವರ ಪ್ರಚಾರ ನಮಗೆ ಸಾಕಾಗಿದೆ ಎಂದ ಈ ಅಂಬಿಗ, "ನಾವು ಅಭಿವೃದ್ಧಿಯನ್ನು ನೋಡಬೇಕು" ಎಂದು ಹೇಳಿದರು.






