ಅಂಚೆ ಕಚೇರಿಯ ಕಿಟಕಿ ತೆರೆದಿತ್ತು. ಅಲ್ಲಿದ್ದ ಪೋಸ್ಟ್ ಮ್ಯಾನ್ ಆ ಕಿಟಕಿ ಮೂಲಕ ನಾವು ಸಮೀಪಿಸುತ್ತಿರುವುದನ್ನು ಗಮನಿಸುತ್ತಿದ್ದರು.ʼ
ರೇಣುಕಾ ಪ್ರಸಾದ್ ಅವರು ಒಂದು ಮುಗುಳ್ನಗೆಯೊಡನೆ ನಮ್ಮನ್ನು ಕಚೇರಿಯೊಳಗೆ ಸ್ವಾಗತಿಸಿದರು. ಆ ಅಂಚೆ ಕಚೇರಿ ಮನೆಯೊಂದರ ಭಾಗವಾಗಿರುವ ಒಂದು ಕೋಣೆ. ಕೋಣೆಯ ಒಳಗೆ ಹೋಗಲು ಮನೆಯ ಮೂಲಕವೇ ದಾರಿ. ಅವರ ಆ ಪುಟ್ಟ ಕಾರ್ಯಕ್ಷೇತ್ರದೊಳಗೆ ಕಾಲಿಡುತ್ತಲೇ ನಮ್ಮನ್ನು ಕಾಗದ ಮತ್ತು ಶಾಯಿಯ ವಾಸನೆ ನಮ್ಮನ್ನು ಸ್ವಾಗತಿಸಿದವು. ಅವರು ತಮ್ಮ ಕಾಗದಗಳನ್ನು ವಿಳಾಸಗಳಿಗೆ ಅನುಗುಣವಾಗಿ ಜೋಡಿಸುತ್ತಿದ್ದರು. ನನ್ನೆಡೆಗೆ ನೋಡಿ ಮುಗುಳ್ನಕ್ಕು ಕುಳಿತುಕೊಳ್ಳುವಂತೆ ಸನ್ನೆ ಮಾಡಿದರು. “ಬನ್ನಿ, ಬನ್ನಿ! ಆರಾಮಾಗಿ ಕೂತ್ಕೊಳ್ಳಿ” ಎನ್ನುತ್ತಾ ಮತ್ತೆ ಸ್ವಾಗತಿಸಿದರು.
ಹೊರಗಿನ ತಾಪಮಾನಕ್ಕೆ ಹೋಲಿಸಿದರೆ ಅಂಚೆ ಕಚೇರಿಯ ಒಳಗಿನ ವಾತಾವರಣ ತಣ್ಣಗಿತ್ತು. ಗಾಳಿಯೊಡನೆ ಸ್ನೇಹ ಬೆಳೆಸಲೆಂದು ಇದ್ದ ಒಂದು ಕಿಟಕಿಯನ್ನು ತೆರೆದಿಡಲಾಗಿತ್ತು. ಕೈ ಕಚೇರಿಯ ಸುಣ್ಣ ಬಳಿದ ಗೋಡೆಯಲ್ಲಿ ಯಿಂದ ತಯಾರಿಸಿದ ಹಲವು ಪೋಸ್ಟರುಗಳು, ನಕ್ಷೆಗಳು ಮತ್ತು ಪಟ್ಟಿಗಳು ನೇತಾಡುತ್ತಿದ್ದವು. ಅಲ್ಲಿದ್ದ ಡೆಸ್ಕ್ ಮತ್ತು ಸೆಲ್ಫ್ಗಳು ಕಚೇರಿಯ ಸಾಕಷ್ಟು ಜಾಗವನ್ನು ಕಬಳಿಸಿದ್ದವಾದರೂ ಅವುಗಳಿಂದ ಅಲ್ಲಿ ಇಕ್ಕಟ್ಟೇನೂ ಆಗುತ್ತಿರಲಿಲ್ಲ.
64 ವರ್ಷ ಹಿರಿಯರಾದ ರೇಣುಕಪ್ಪ ಗ್ರಾಮೀಣ್ ಡಾಕ್ ಸೇವಕ್ (ಗ್ರಾಮೀಣ ಅಂಚೆ ಸೇವಕ) ಆಗಿ ತುಮಕೂರು ಜಿಲ್ಲೆಯ ದೇವರಾಯಪಟ್ಟಣ ಎನ್ನುವ ಪಟ್ಟಣದಲ್ಲಿ ಕೆಲಸ ಮಾಡುತ್ತಾರೆ. ಇವರ ಸುಪರ್ದಿಯಲ್ಲಿ ಒಟ್ಟು ಆರು ಹಳ್ಳಿಗಳು ಬರುತ್ತವೆ.
ದೇವರಾಯಪಟ್ಟಣದ ಈ ಗ್ರಾಮೀಣ ಅಂಚೆ ಕಚೇರಿಯ ಅಧಿಕೃತ ಕೆಲಸದ ಸಮಯ ಬೆಳಗ್ಗೆ 8:30ರಿಂದ ಮಧ್ಯಾಹ್ನ 1 ಗಂಟೆಯ ತನಕ. ಆದರೆ ಕೆಲವೊಮ್ಮೆ ಇಲ್ಲಿನ ಏಕಮಾತ್ರ ಉದ್ಯೋಗಿಯಾಗಿರುವ ರೇಣುಕಾ ಪ್ರಸಾದ್ ಬೆಳಗಿನ 7 ಗಂಟೆಗೆಲ್ಲ ಬಂದು ಕೆಲಸ ಶುರುಹಚ್ಚಿಕೊಳ್ಳುತ್ತಾರೆ. ಮತ್ತು ಕೆಲಸ ಮುಗಿಯುವಾಗ ಸಂಜೆ 5 ದಾಟಿರುತ್ತದೆ. “ಇಲ್ಲಿನ ಕೆಲಸಗಳನ್ನು ಮುಗಿಸಲು ದಿನದ ನಾಲ್ಕೂವರೆ ಗಂಟೆಗಳು ಸಾಲುವುದಿಲ್ಲ” ಎಂದು ಈ ಹಿರಿಯ ಅಂಚೆಯಣ್ಣ ವಿವರಿಸುತ್ತಾರೆ.








