ಬಿಳಿ ಮತ್ತು ಹಳದಿ ಬಣ್ಣದಿಂದ ಚಿತ್ರಿಸಲಾದ ಮುಖ, ಮೂಗಿನ ಮೇಲೆ ಒಂದು ಮತ್ತು ಕೆನ್ನೆಗಳ ಮೇಲೆ ಎರಡು ಕೆಂಪು ಚುಕ್ಕೆಗಳು, ತಲೆಯ ಮೇಲೆ ಕೋಡಂಗಿ ಟೋಪಿಯಾಗಿ ಆಕಾಶ-ನೀಲಿ ಪ್ಲಾಸ್ಟಿಕ್ ಚೀಲ, ತುಟಿಗಳ ಮೇಲೆ ತಮಾಷೆಯ ಹಾಡು ಮತ್ತು ಕೈಕಾಲುಗಳಲ್ಲಿ ನಿರಾತಂಕ ಲಯ - ಅವನು ನಗೆಯ ದಂಗೆಯಂತೆ ಕಾಣುತ್ತಿದ್ದನು. ಸುತ್ತಲೂ ನಗೆಯ ಹೊನಲು ಹರಡಿತ್ತು. ಎಳಿಲ್ ಅಣ್ಣನ ಕಲಾ ಶಿಬಿರಗಳು ಈ ರೀತಿಯಾಗಿ ಪ್ರಾರಂಭವಾಗುತ್ತವೆ, ಅದು ಜಾವಧು ಬೆಟ್ಟಗಳಲ್ಲಿರುವ ಒಂದು ಸಣ್ಣ ಸಾರ್ವಜನಿಕ ಶಾಲೆಯಾಗಿರಬಹುದು, ಅಥವಾ ಚೆನ್ನೈಯ ಸ್ವಾಂಕಿ ಖಾಸಗಿ ಶಾಲೆಯಾಗಿರಬಹುದು, ಬುಡಕಟ್ಟು ಮಕ್ಕಳಿಗಾಗಿ ಸತ್ಯಮಂಗಲಂ ಕಾಡುಗಳಲ್ಲಿನ ದೂರದಲ್ಲಿನ ಶಾಲೆಯಿರಲಿ, ಅಥವಾ ವಿಶೇಷ ಅಗತ್ಯವುಳ್ಳ ಮಕ್ಕಳ ಶಾಲೆಯಿರಲಿ. ಅಣ್ಣ ಒಂದು ಹಾಡು ಹಾಡುತ್ತಾನೆ, ಒಂದು ಸಣ್ಣ ಸ್ಕಿಟ್, ಇದು ಮಕ್ಕಳು ಓಡುವಾಗ, ಆಡುವಾಗ, ನಗುವಾಗ ಮತ್ತು ಹಾಡುವಾಗ ತಮ್ಮ ಸಂಕೋಚಗಳನ್ನು ಬಿಡಲು ಸಹಾಯ ಮಾಡುತ್ತದೆ.
ತರಬೇತಿ ಪಡೆದ ಕಲಾವಿದನಾದ ಅಣ್ಣ ಶಾಲೆಗಳಲ್ಲಿ ಲಭ್ಯವಿರುವ ಸೌಲಭ್ಯಗಳ ಬಗ್ಗೆ ಎಂದಿಗೂ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಅವರು ಏನನ್ನೂ ಕೇಳುವುದಿಲ್ಲ. ಪ್ರತ್ಯೇಕ ಹೋಟೆಲ್ ಅಥವಾ ವಸತಿ ವ್ಯವಸ್ಥೆ, ವಿಶೇಷ ಸಲಕರಣೆ ಯಾವುದೂ ಬೇಕಿರಲಿಲಲ್ಲ ಅವರಿಗೆ. ಅವರು ವಿದ್ಯುತ್, ನೀರು ಅಥವಾ ಅಲಂಕಾರಿಕ ಕರಕುಶಲ ವಸ್ತುಗಳಿಲ್ಲದೆಯೂ ಕೆಲಸ ಮಾಡುತ್ತಿದ್ದರು. ಅವರು ಮಕ್ಕಳನ್ನು ಭೇಟಿಯಾಗಲು, ಸಂವಹನ ನಡೆಸಲು, ಅವರೊಂದಿಗೆ ಕೆಲಸ ಮಾಡಲು ಮಾತ್ರವೇ ಸದಾ ತುಡಿಯುತ್ತಿದ್ದರು. ಅದರ ಮುಂದೆ ಉಳಿದೆಲ್ಲವೂ ಹಿಂದಕ್ಕೆ ಸರಿಯುತ್ತವೆ. ನೀವು ಮಕ್ಕಳನ್ನು ಅವರ ಬದುಕಿನಿಂದ ಬೇರೆಯಾಗಿ ನೋಡಲು ಸಾಧ್ಯವಿಲ್ಲ. ಮಕ್ಕಳ ವಿಷಯಕ್ಕೆ ಬಂದಾಗ ಅವರು ಮೋಡಿಗಾರ ಮತ್ತು ಕ್ರಿಯಾಶೀಲ ವ್ಯಕ್ತಿ.
ಒಮ್ಮೆ ಅವರು ಸತ್ಯಮಂಗಲದ ಒಂದು ಹಳ್ಳಿಯಲ್ಲಿ ಬಣ್ಣಗಳನ್ನು ನೋಡದ ಮಕ್ಕಳೊಂದಿಗೆ ಕೆಲಸ ಮಾಡಿದರು. ಅವರು ತಮ್ಮ ಕಲ್ಪನೆಗೆ ತೋಚಿದ್ದನ್ನು ರಚಿಸಲು ಬಣ್ಣಗಳನ್ನು ಬಳಸಲು ಮಕ್ಕಳಿಗೆ ಮೊದಲ ಬಾರಿಗೆ ಸಹಾಯ ಮಾಡಿದರು, ಆ ಮಕ್ಕಳು ತಮಗಾಗಿ ಹೊಸ ಅನುಭವವನ್ನು ಕಂಡುಕೊಳ್ಳಲು ಸಹಾಯ ಮಾಡಿದರು. ಕಳೆದ 22 ವರ್ಷಗಳಿಂದ, ಅವರು ತಮ್ಮ ಕಲಾ ಶಾಲೆ ಕಳಿಮಣ್ ವಿರಳ್ಗಳ್ [ಜೇಡಿಮಣ್ಣಿನ ಬೆರಳುಗಳು] ಸಂಸ್ಥೆಯನ್ನು ಪ್ರಾರಂಭಿಸಿದಾಗಿನಿಂದ, ಮಕ್ಕಳಿಗಾಗಿ ದಣಿವರಿಯದೆ ಈ ಅನುಭವಗಳನ್ನು ಸೃಷ್ಟಿಸುತ್ತಿದ್ದಾರೆ. ಅವರು ರೋಗಕ್ಕೆ ಶರಣಾಗುವುದನ್ನು ನಾನು ಎಂದೂ ಕಂಡಿಲ್ಲ. ಮಕ್ಕಳೊಂದಿಗಿನ ಅವರ ಕೆಲಸವೇ ಅವರ ಪಾಲಿಗೆ ಚಿಕಿತ್ಸೆ ಮತ್ತು ಮಕ್ಕಳೆದುರು ಕಾಣಿಸಿಕೊಳ್ಳಲು ಅವರು ಸದಾ ಸಿದ್ಧವಿರುತ್ತಿದ್ದರು.
ಒಮ್ಮೆ ಅವರು ಸತ್ಯಮಂಗಲದ ಒಂದು ಹಳ್ಳಿಯಲ್ಲಿ ಬಣ್ಣಗಳನ್ನು ನೋಡದ ಮಕ್ಕಳೊಂದಿಗೆ ಕೆಲಸ ಮಾಡಿದರು. ಅವರು ತಮ್ಮ ಕಲ್ಪನೆಗೆ ತೋಚಿದ್ದನ್ನು ರಚಿಸಲು ಬಣ್ಣಗಳನ್ನು ಬಳಸಲು ಮಕ್ಕಳಿಗೆ ಮೊದಲ ಬಾರಿಗೆ ಸಹಾಯ ಮಾಡಿದರು, ಆ ಮಕ್ಕಳು ತಮಗಾಗಿ ಹೊಸ ಅನುಭವವನ್ನು ಕಂಡುಕೊಳ್ಳಲು ಸಹಾಯ ಮಾಡಿದರು. ಕಳೆದ 22 ವರ್ಷಗಳಿಂದ, ಅವರು ತಮ್ಮ ಕಲಾ ಶಾಲೆ ಕಳಿಮಣ್ ವಿರಳ್ಗಳ್ [ಜೇಡಿಮಣ್ಣಿನ ಬೆರಳುಗಳು] ಸಂಸ್ಥೆಯನ್ನು ಪ್ರಾರಂಭಿಸಿದಾಗಿನಿಂದ, ಮಕ್ಕಳಿಗಾಗಿ ದಣಿವರಿಯದೆ ಈ ಅನುಭವಗಳನ್ನು ಸೃಷ್ಟಿಸುತ್ತಿದ್ದಾರೆ. ಅವರು ರೋಗಕ್ಕೆ ಶರಣಾಗುವುದನ್ನು ನಾನು ಎಂದೂ ಕಂಡಿಲ್ಲ. ಮಕ್ಕಳೊಂದಿಗಿನ ಅವರ ಕೆಲಸವೇ ಅವರ ಪಾಲಿಗೆ ಚಿಕಿತ್ಸೆ ಮತ್ತು ಮಕ್ಕಳೆದುರು ಕಾಣಿಸಿಕೊಳ್ಳಲು ಅವರು ಸದಾ ಸಿದ್ಧವಿರುತ್ತಿದ್ದರು.
"ಆದರೆ ನನ್ನ ಕೃತಿಗಳು ಮಾರಾಟವಾಗಲು ಪ್ರಾರಂಭಿಸಿದಾಗ, ಅವು ಸಾಮಾನ್ಯ ಜನರನ್ನು ತಲುಪುತ್ತಿಲ್ಲವೆನ್ನುವುದು ನನ್ನ ಅರಿವಿಗೆ ಬಂತು" ಎಂದು ಅವರು ಹೇಳುತ್ತಾರೆ. ಆಗ ನಾನು ಜನಸಾಮಾನ್ಯರೊಂದಿಗೆ ಕಲಾತ್ಮಕ ಚಟುವಟಿಕೆಗಳಲ್ಲಿ ತೊಡಗಲು ಪ್ರಾರಂಭಿಸಿದೆ, ಮತ್ತು ಗ್ರಾಮೀಣ ಪ್ರದೇಶಗಳು, ತಮಿಳುನಾಡಿನ ಐದು ಭೂಪ್ರದೇಶಗಳು (ಗುಡ್ಡಗಾಡು, ಕಡಲತೀರ, ಮರುಭೂಮಿ, ಕಾಡು, ಹೊಲಗಳು) ನಾನು ಇರಲು ಬಯಸಿದ ಸ್ಥಳಗಳು ಎಂದು ನಿರ್ಧರಿಸಿದೆ. ನಾನು ನನ್ನ ಮಕ್ಕಳೊಂದಿಗೆ ಜೇಡಿಮಣ್ಣು ಮತ್ತು ಕರಕುಶಲ ವಸ್ತುಗಳಿಂದ ಆಟಿಕೆಗಳನ್ನು ತಯಾರಿಸುವ ಕೆಲಸ ಮಾಡಲು ಪ್ರಾರಂಭಿಸಿದೆ.” ಅವರು ಕಾಗದದ ಮುಖವಾಡಗಳು, ಜೇಡಿಮಣ್ಣಿನ ಮುಖವಾಡಗಳು, ಜೇಡಿಮಣ್ಣಿನ ಮಾದರಿಗಳು, ರೇಖಾಚಿತ್ರಗಳು, ವರ್ಣಚಿತ್ರಗಳು, ಗಾಜಿನ ವರ್ಣಚಿತ್ರಗಳು, ಒರಿಗಾಮಿಗಳನ್ನು ಹೇಗೆ ತಯಾರಿಸುವುದು ಎಂದು ಮಕ್ಕಳಿಗೆ ಕಲಿಸಲು ಪ್ರಾರಂಭಿಸಿದರು.