1970ನೇ ಇಸವಿಯು ದಾದೂ ಸಾಳ್ವೆಯವರು ಬದುಕಿನಲ್ಲಿ ಮಹತ್ತರ ತಿರುವೊಂದನ್ನುತಂದಿತು. ಈ ವರ್ಷ ಅವರು, ಡಾ. ಅಂಬೇಡ್ಕರ್ ಅವರ ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಚಳವಳಿಯನ್ನು ಮಹಾರಾಷ್ಟ್ರದ ಮೂಲೆಮೂಲೆಗಳಿಗೆ ಮತ್ತು ಅದರಾಚೆಗೆ ಕೊಂಡೊಯ್ಯುತ್ತಿದ್ದ ಗಾಯಕ ವಾಮನದಾದ ಕರ್ದಕ್ ಅವರನ್ನು ಭೇಟಿಯಾದರು. ವಾಮನದಾದ ತಮ್ಮ ಕೊನೆಯುಸಿರಿರುವ ತನಕವೂ ಚಳವಳಿಯಲ್ಲಿ ತೊಡಗಿಸಿಕೊಂಡಿದ್ದರು.
75 ವರ್ಷದ ಮಾಧವರಾವ್ ಗಾಯಕವಾಡ್ ಅವರ ವಾಮನದಾದ ಅವರಿಗೆ ಸಂಬಂಧಿಸಿದ ಹಾಡುಗಳನ್ನು ಸಂಗ್ರಹಿಸುತ್ತಾರೆ. ದಾದೂ ಸಾಳ್ವೆಯವರನ್ನು ವಾಮನದಾದ, ಮಾಧವರಾವ್ ಮತ್ತು ಅವರ ಪತ್ನಿ ಸುಮಿತ್ರ (61) ಇವರುಗಳಿಗೆ ಪರಿಚಯಿಸಿದ್ದು ಇವರೇ. ಅವರು ವಾಮನದಾದ ತಮ್ಮ ಕೈಯಾರೆ ಬರೆದ 5,000 ಹಾಡುಗಳನ್ನು ಇವರು ಸಂಗ್ರಹಿಸಿದ್ದಾರೆ.
ಮಾಧವರಾವ್ ಹೇಳುವಂತೆ, “ಅವರು 1970ರಲ್ಲಿ ನಗರಕ್ಕೆ ಬಂದರು ಅವರು ಅಂಬೇಡ್ಕರ್ ಅವರ ಕೆಲಸಗಳು ಮತ್ತು ಸಂದೇಶವನ್ನು ಪಸರಿಸುವ ಉದ್ದೇಶದಿಂದ ಗಾಯನ ಪಾರ್ಟಿ ಪ್ರಾರಂಭಿಸಲು ಉತ್ಸುಕರಾಗಿದ್ದರು. ದಾದೂ ಸಾಳ್ವೆ ಅಂಬೇಡ್ಕರ್ ಕುರಿತಾಗಿ ಹಾಡುತ್ತಿದ್ದರಾದರೂ ಅವರ ಬಳಿ ಹೆಚ್ಚು ಉತ್ತಮ ಹಾಡುಗಳಿರಲಿಲ್ಲ. ಹೀಗಾಗಿ ನಾವು ಹೋಗಿ ವಾಮನ್ ದಾದಾ ಅವರನ್ನು ಭೇಟಿಯಾಗಿ ʼನಮಗೆ ನಿಮ್ಮ ಹಾಡುಗಳು ಬೇಕುʼ ಎಂದು ಕೇಳಿದೆವು.”
ಆಗ ವಾಮನ ದಾದಾ ಹಾಡುಗಳು ತಾನು ಒಂದು ಸ್ಥಳದಲ್ಲಿ ಸಂಗ್ರಹಿಸಿ ಇಟ್ಟಿಲ್ಲವೆಂದು ಹೇಳಿದರು. “ನಾನು ಹಾಡು ಬರೆದು ಹಾಡಿದ ನಂತರ ಅದನ್ನು ಅಲ್ಲೇ ಬಿಟ್ಟು ಬರುತ್ತೇನೆ” ಎಂದು ಹೇಳಿದರು.
ಮಾಧವರಾವ್ ಹೇಳುತ್ತಾರೆ, “ಅಷ್ಟು ಒಳ್ಳೆಯ ಹಾಡುಗಳು ವ್ಯರ್ಥವಾಗುತ್ತಿರುವುದನ್ನು ಕೇಳಿ ನಮ್ಮ ಮನಸ್ಸಿಗೆ ಬಹಳ ನೋವಾಯಿತು. ಅವರು [ವಾಮನದಾದಾ] ತನ್ನ ಇಡೀ ಬದುಕನ್ನು ಅಂಬೇಡ್ಕರ್ ಚಳವಳಿಗಾಗಿ ಮುಡಿಪಿಟ್ಟಿದ್ದರು.”
ಅವರ ಹಾಡುಗಳನ್ನು ಸಂಗ್ರಹಿಸುವ ಕುತೂಹಲದಲ್ಲಿ ಮಾಧವರಾವ್ ದಾದೂ ಸಾಳ್ವೆಯವರನ್ನು ವಾಮನದಾದಾ ಅವರ ಕಾರ್ಯಕ್ರಮ ಇರುವೆಲ್ಲೆಡೆ ಕರೆದುಕೊಂಡು ಹೋಗತೊಡಗಿದರು. “ಅವರಿಗೆ ದಾದೂ ಹಾರ್ಮೋನಿಯಂ ನುಡಿಸುವ ಮೂಲಕ ಸಾಥ್ ನೀಡುತ್ತಿದ್ದರು. ದಾದಾ ಹಾಡತೊಡಗಿದಂತೆ ನಾನು ಅವುಗಳನ್ನು ಬರೆದಿಟ್ಟುಕೊಳ್ಳುತ್ತಿದ್ದೆ. ಅದು ಅವರು ಅಲ್ಲೇ ಕಟ್ಟುತ್ತಿದ್ದ ಹಾಡುಗಳಾಗಿದ್ದವು.”
ಅವರು ಹಾಡುತ್ತಾ ಹಾಡುತ್ತಾ ಸುಮಾರು 5,000 ಹಾಡುಗಳನ್ನು ಪ್ರಕಟಿಸಿದರು. ಅವುಗಳ ಹೊರತಾಗಿಯೂ ಹೊರಜಗತ್ತನ್ನು ಕಾಣದ ಸುಮಾರು 3,000 ಹಾಡುಗಳು ಇಲ್ಲವಾಗಿವೆ. “ಹಣಕಾಸಿನ ಸಮಸ್ಯೆಗಳಿಂದಾಗಿ ನನಗೆ ಈ ಹಾಡುಗಳನ್ನು ಸಂಗ್ರಹಿಸಲು ಸಾಧ್ಯವಾಗಲಿಲ್ಲ. ಇನ್ನೊಂದು ವಿಚಾರವನ್ನು ನಾನು ಹೇಳಲೇಬೇಕು. ಅಂಬೇಡ್ಕರ್ ಚಳವಳಿಯ ಜ್ಞಾನ ಮತ್ತು ಬುದ್ಧಿವಂತಿಕೆಯನ್ನು ಸಂಗ್ರಹಿಸಿ ಉಳಿಸಲು ನನಗೆ ಸಾಧ್ಯವಾಗಿದ್ದು ದಾದೂ ಸಾಳ್ವೆಯವರ ಕಾರಣದಿಂದಲೇ.
ದಾದೂ ಸಾಳ್ವೆ ವಾಮನ್ ದಾದಾರ ಕೆಲಸದಿಂದ ಎಷ್ಟರಮಟ್ಟಿಗೆ ಪ್ರೇರಿತರಾಗಿದ್ದರೆಂದರೆ ಅವರು ಹೊಸದೊಂದು ತಂಡವನ್ನೇ ಕಟ್ಟಿದರು. ಇದನ್ನು ಕಲಾ ಪಾಠಕ್ ಎನ್ನುವ ಹೆಸರಿನಿಂದಲೂ ಕರೆಯಲಾಗುತ್ತಿತ್ತು. ಅವರು ಇದಕ್ಕಾಗಿ ಶಂಕರ ತಾಬಾಜಿ ಗಾಯಕವಾಡ್, ಸಂಜಯ ನಾಥ ಜಾಧವ್, ರಘೂ ಗಂಗಾರಾಮ್ ಸಾಳ್ವೆ, ಮತ್ತು ಮಿಲಿಂದ್ ಶಿಂಧೆಯವರನ್ನು ಒಂದೇ ವೇದಿಕೆಯಡಿ ತಂದರು. ಈ ಗುಂಪನ್ನು ಭೀಮ ಸಂದೇಶ್ ಗಾಯನ್ ಪಾರ್ಟಿ ಎಂದು ಕರೆಯಲಾಗುತ್ತಿತ್ತು. ಇದರರ್ಥ, ಅಂಬೇಡ್ಕರ್ ಅವರ ಸಂದೇಶಗಳನ್ನು ಹರಡು ಸಂಗೀತ ತಂಡ.
ಅವರು ಒಂದು ಧ್ಯೇಯ ಸಾಧನೆಗಾಗಿ ಹಾಡುತ್ತಿದ್ದರು. ಅವರ ಪ್ರದರ್ಶನಗಳು ಯಾರನ್ನೂ ಟೀಕಿಸುವ ಉದ್ದೇಶ ಹೊಂದಿರದೆ ನೇರವಾಗಿರುತ್ತಿದ್ದವು.
ದಾದೂ ನಮಗಾಗಿ ಈ ಹಾಡನ್ನು ಹಾಡಿದರು.