ಬುಧಿರಾಮ್ ಚಿಂಡಾ ಅವರು ಭಯದಿಂದ ನಡುಗುತ್ತಿದ್ದರು. ಅವರು ತಿಂಗಳ ಬೆಳಕಿನಲ್ಲಿ ಕಾಣುತ್ತಿದ್ದ ಆ ಕಪ್ಪು ಆಕೃತಿಗಳಿಂದ ಕೆಲವೇ ಗಜಗಳ ಅಂತರದಲ್ಲಿ ನಿಂತಿದ್ದರು. 60 ವರ್ಷದ, ರೈತರಾದ ಭುಂಜಿಯಾ ಆದಿವಾಸಿ ಅರ್ಧ ತೆರೆದ ಬಾಗಿಲಿನ ಹಿಂದಿನಿಂದ ಇದೆಲ್ಲವನ್ನು ನೋಡುತ್ತಿದ್ದರು.
ಈ ದೊಡ್ಡ ಸಸ್ತನಿಗಳನ್ನು ಈ ಪ್ರದೇಶದಲ್ಲಿ ಕಾಣುವುದು ತೀರಾ ಅಪರೂಪ ದೃಶ್ಯವೇನಲ್ಲ. ಏಕೆಂದರೆ ಈ 52 ಮನೆಗಳಿಗೆ ನೆಲೆಯಾಗಿರುವ ಈ ಕುಗ್ರಾಮವು ಇರುವುದು ಸುನಾಬೇಡ ವನ್ಯಜೀವಿ ಅಭಯಾರಣ್ಯದ ಕೇಂದ್ರ ಮತ್ತು ಬಫರ್ ಪ್ರದೇಶಗಳಲ್ಲಿ.
ವಿಷಯ ಹೀಗಿದ್ದರೂ, “ಅವು ನನ್ನ ಕಚ್ಚಾ ಮನೆಯನ್ನು ಕೆಲವು ನಿಮಿಷಗಳಲ್ಲಿ ತುಳಿದು ನೆಲಸಮ ಮಾಡಿಬಿಡಬಹುದೆನ್ನುವ ಭಯ ನನ್ನನ್ನು ಕಾಡುತ್ತಿತ್ತು.” ನಂತರ ಅವರು ಹಿತ್ತಲಿಗೆ ಹೋಗಿ ತುಳಸಿ ಗಿಡದ ಬಳಿ ನಿಂತರು: “ನಾನು ಲಕ್ಷ್ಮಿ ದೇವರು ಮತ್ತು ಆ ದೊಡ್ಡ ಸಸ್ತನಿಗಳನ್ನು ಪ್ರಾರ್ಥಿಸಿದೆ. ಬಹುಶಃ ಆ ಗುಂಪು ಅಂದು ನನ್ನನ್ನು ನೋಡಿತ್ತು.”
ಬುಧುರಾಮ್ ಅವರ ಪತ್ನಿ ಸುಲಕ್ಷ್ಮಿ ಚಿಂಡಾ ಕೂಡಾ ಅಂದು ಆನೆಗಳ ಕೂಗಿನ ಸದ್ದನ್ನು ಕೇಳಿಸಿಕೊಂಡಿದ್ದರು. ಅಲ್ಲಿಂದ ಒಂದು ಕಿಲೋಮೀಟರ್ ದೂರದಲ್ಲಿರುವ ಊರಿನಲ್ಲಿನ ತಮ್ಮ ಮನೆಯಲ್ಲಿದ್ದರು. ಅಲ್ಲಿ ಅವರು ತಮ್ಮ ಗಂಡುಮಕ್ಕಳು ಮತ್ತು ಅವರ ಸಂಸಾರಗಳೊಡನೆ ವಾಸಿಸುತ್ತಾರೆ.
ಈ ಆನೆಗಳು ಸುಮಾರು ಒಂದು ಗಂಟೆಯ ನಂತರ ಅಲ್ಲಿಂದ ಹೊರಟವು.
ಅಂದಿನ, ಅಂದರೆ 2020ರ ಘಟನೆಯನ್ನು ನೆನಪಿಸಿಕೊಳ್ಳುವ ಈ ರೈತನ ಪ್ರಕಾರ ಅಂದು ಅವರಿಗೆ ಸಹಾಯ ಮಾಡಿದ್ದು ಅವರ ಪ್ರಾರ್ಥನೆ.
ಹೀಗೆ 2022ರಲ್ಲಿ ಆನೆಗಳು ತಮ್ಮ ದಾರಿಯನ್ನು ಬದಲಾಯಿಸಿದಾಗ ನಿಟ್ಟುಸಿರಿಟ್ಟವರು ಕೇವಲ ಬುಧುರಾಮ್ ಮಾತ್ರವಲ್ಲ. ಆ ಊರಿನ ಇತರ ರಥರು ಕೂಡಾ.











