ಪರಿಯ ಕಥೆಗಳ ವಿಶಾಲ ಸಂಗ್ರಹವು ದೇಶಾದ್ಯಂತದ ತರಗತಿಗಳಲ್ಲಿ ಕಾಣಿಸಿಕೊಳ್ಳುವುದು 'ನಮ್ಮ ಕಾಲದ ಜೀವಂತ ಪಠ್ಯಪುಸ್ತಕ'ದ ರೂಪದಲ್ಲಿ. ಮತ್ತು ವಿದ್ಯಾರ್ಥಿಗಳು ಸಹ ಈ ಸಂಗ್ರಹಕ್ಕೆ ಕೊಡುಗೆ ನೀಡಲು ಬಯಸುತ್ತಾರೆ, ಅದೇ ಹುಮ್ಮಸ್ಸಿನಲ್ಲಿ ಅವರು ನಮ್ಮೊಂದಿಗೆ ತರಬೇತಿ ಪಡೆಯುತ್ತಲೇ ಗ್ರಾಮೀಣ ಸಮಸ್ಯೆಗಳ ಬಗೆಗಿನ ನಮ್ಮ ಸಂಗ್ರಹಕ್ಕೆ ಸಂದರ್ಶನ, ಛಾಯಾಚಿತ್ರ, ದಾಖಲೀಕರಣ ಇತ್ಯಾದಿ ಕೊಡುಗೆಗಳನ್ನು ನೀಡುತ್ತಾರೆ
ನಾವು ಗ್ರಾಮೀಣ ಭಾರತದ ಮತ್ತು ಅಂಚಿನಲ್ಲಿರುವ ಜನರ ಬದುಕಿನ ಕಥೆಗಳನ್ನು ಮುಖ್ಯವಾಹಿನಿಯ ಶಿಕ್ಷಣದ ಪಠ್ಯಕ್ರಮದಲ್ಲಿ ತರಲು ದುಡಿಯುತ್ತಿದ್ದೇವೆ. ಈ ನಿಟ್ಟಿನಲ್ಲಿ ತಮ್ಮ ಸುತ್ತಲಿನ ಸಮಸ್ಯೆಗಳನ್ನು ವರದಿ ಮಾಡಲು ಮತ್ತು ದಾಖಲಿಸಲು ಬಯಸುವ ಯುವಕರೊಂದಿಗೆ ನಾವು ಕೆಲಸ ಮಾಡುತ್ತೇವೆ, ಪತ್ರಿಕಾ ಮಾಧ್ಯಮದ ಭಾಷೆಯಲ್ಲಿ ಕಥೆ ಹೇಳುವಲ್ಲಿ ಅವರಿಗೆ ಮಾರ್ಗದರ್ಶನ ಮತ್ತು ತರಬೇತಿ ನೀಡುತ್ತೇವೆ. ನಾವು ಇದನ್ನು ಸಣ್ಣ ಕೋರ್ಸುಗಳು, ಸೆಷನ್ಗಳು ಮತ್ತು ಕಾರ್ಯಾಗಾರಗಳ ಮೂಲಕ ಸಾಧಿಸುತ್ತೇವೆ ಮತ್ತು ಜನ ಸಾಮಾನ್ಯರ ದೈನಂದಿನ ಜೀವನದ ಬಗ್ಗೆ ವಿದ್ಯಾರ್ಥಿಗಳಿಗೆ ಉತ್ತಮ ತಿಳುವಳಿಕೆಯನ್ನು ನೀಡುವ ಪಠ್ಯಕ್ರಮಗಳನ್ನು ಅವರಿಗಾಗಿ ವಿನ್ಯಾಸಗೊಳಿಸುತ್ತೇವೆ.
See more stories
Translator
Shankar N. Kenchanuru
ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.