ಬಾಗಲಕೋಟೆ-ಬೆಳಗಾವಿ ರಸ್ತೆಯಲ್ಲಿ ಎಸ್.ಬಂಡೇಪ್ಪ ಒಂದು ಮಧ್ಯಾಹ್ನ ಕುರಿಗಳ ಹಿಂಡಿನೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ ನಾನು ಅವರನ್ನು ಭೇಟಿಯಾದೆ. ಅವರು ತನ್ನ ಕುರಿಗಳೊಂದಿಗೆ ಸ್ವಲ್ಪ ಕಾಲ ತಂಗಲು ಕೃಷಿಭೂಮಿಯ ಹುಡುಕಾಟದಲ್ಲಿದ್ದರು. "ನನ್ನ ಕುರಿಗಳಿಂದ ಉತ್ಪತ್ತಿಯಾಗುವ ಗೊಬ್ಬರಕ್ಕಾಗಿ ಉತ್ತಮ ಮೊತ್ತವನ್ನು ನೀಡುವ ಭೂಮಾಲೀಕರನ್ನು ಹುಡುಕುವುದು ನಮ್ಮ ಕೆಲಸವಾಗಿದೆ" ಎಂದು ಅವರು ಹೇಳಿದರು. ಅದು ಚಳಿಗಾಲ, ಕುರುಬ ಸಮುದಾಯದ ಕುರಿ ಪಾಲಕರು ಅಕ್ಟೋಬರ್-ನವೆಂಬರ್ ತಿರುಗಾಟದಲ್ಲಿದ್ದರು, ಆದರೆ ಕೃಷಿ ಕೆಲಸಗಳು ಕಡಿಮೆಯಾಗಿವೆ.
ಅಂದಿನಿಂದ ಮಾರ್ಚ್-ಏಪ್ರಿಲ್ ತನಕ, ಪರಿಶಿಷ್ಟ ಪಂಗಡವೆಂದು ಪಟ್ಟಿ ಮಾಡಲಾಗಿರುವ ಕರ್ನಾಟಕದ ಕುರಿಗಾಹಿ ಕುರುಬರು, ಎರಡು ಅಥವಾ ಮೂರು ಕುಟುಂಬಗಳ ಗುಂಪುಗಳಲ್ಲಿ ಸ್ಥಳದಿಂದ ಸ್ಥಳಕ್ಕೆ ಚಲಿಸುತ್ತಾರೆ, ಸಾಮಾನ್ಯವಾಗಿ ಒಂದೇ ಮಾರ್ಗಗಳಲ್ಲಿ, ಒಟ್ಟು 600ರಿಂದ 800 ಕಿಲೋಮೀಟರ್ ದೂರವನ್ನು ಕ್ರಮಿಸುತ್ತಾರೆ ಎಂದು ಅವರು ಅಂದಾಜಿಸುತ್ತಾರೆ. ಅವರ ಕುರಿ ಮತ್ತು ಮೇಕೆಗಳು ಪಾಳು ಬಿದ್ದ ಹೊಲಗಳಲ್ಲಿ ಮೇಯುತ್ತವೆ, ಮತ್ತು ಕುರುಬರು ರೈತರಿಂದ ಕುರಿಗಳ ಗೊಬ್ಬರಕ್ಕಾಗಿ ಸಾಧಾರಣ ಮೊತ್ತವನ್ನು ಪಡೆಯುತ್ತಾರೆ. ಹೊಲದಲ್ಲಿ ಕುರಿಗಳೊಡನೆ ವಾಸ್ತವ್ಯಕ್ಕಾಗಿ ಒಳ್ಳೆಯ ರೈತರು ಗರಿಷ್ಠ 1,000ರೂ ನೀಡುತ್ತಾರೆಂದು ಎಂದು ಬಂಡೆಪ್ಪ ಹೇಳುತ್ತಾರೆ. ನಂತರ ಅವರು ಮುಂದಿನ ಸ್ಥಳಕ್ಕೆ ಹೋಗಿ ಅಲ್ಲಿ ಸುತ್ತಮುತ್ತಲಿನ ಹೊಲಗಳನ್ನು ಹುಡುಕುತ್ತಾರೆ. ಹಿಂದೆ, ಅವರು ಆಹಾರ ಧಾನ್ಯಗಳು, ಬೆಲ್ಲ ಮತ್ತು ಬಟ್ಟೆಗಳಂತಹ ಸರಕುಗಳನ್ನು ಸಹ ಪಡೆಯುತ್ತಿದ್ದರು, ಆದರೆ ಈಗೀಗ ರೈತರೊಂದಿಗೆ ಸಂವಹನ ನಡೆಸುವುದು ಕಷ್ಟಕರವಾಗುತ್ತಿದೆ ಎಂದು ಅವರು ಹೇಳುತ್ತಾರೆ.
ನೀಲಪ್ಪ ಚಚ್ಡಿ ಹೇಳುವಂತೆ, "ನಮ್ಮ ಪ್ರಾಣಿಗಳು ಮತ್ತು ಮಕ್ಕಳೊಂದಿಗೆ ಭೂಮಾಲೀಕರ ಭೂಮಿಯಲ್ಲಿ ವಾಸಿಸುವುದು ಸುಲಭವಲ್ಲ." ನಾನು ಅವರನ್ನು ಬೆಳಗಾವಿ (ಈಗ ಬೆಳಗಾವಿ) ಜಿಲ್ಲೆಯ ಬೈಲಹೊಂಗಲ-ಮುನವಳ್ಳಿ ರಸ್ತೆಯ ಬಳಿಯ ಜಮೀನಿನಲ್ಲಿ ಭೇಟಿಯಾದೆ, ಅಲ್ಲಿ ಅವರು ಹಿಂಡನ್ನು ನಿಯಂತ್ರಿಸಲು ಹಗ್ಗದಿಂದ ಬೇಲಿ ಗಡಿಗಳನ್ನು ನಿರ್ಮಿಸುತ್ತಿದ್ದರು.
ಆದರೆ ಕುರುಬರು ಎದುರಿಸುತ್ತಿರುವ ಸಮಸ್ಯೆ ಇದೊಂದೆ ಅಲ್ಲ. ಕಳೆದ ಎರಡು ದಶಕಗಳಲ್ಲಿ, ದಕ್ಷಿಣ-ಮಧ್ಯ ಭಾರತದ ಡೆಕ್ಕನ್ ಪ್ರದೇಶದ ಒರಟಾದ ಭೂಪ್ರದೇಶದಲ್ಲಿ ಸಂತಾನೋತ್ಪತ್ತಿ ಮಾಡಿದ ತಮ್ಮ ಕುರಿಗಳ ಉಣ್ಣೆಯ ಬೇಡಿಕೆ ಕುಸಿಯುತ್ತಿದೆ. ಗಟ್ಟಿಮುಟ್ಟಾದ ದಖ್ಖನಿ ಕುರಿಗಳು ಭೂಮಿಯ ಅರೆ ಶುಷ್ಕ ವಾತಾವರಣವನ್ನು ತಡೆದುಕೊಳ್ಳಬಲ್ಲವು. ಕುರುಬರ ಸಂಪಾದನೆಯ ಪ್ರಮುಖ ಭಾಗವು ಸ್ಥಳೀಯವಾಗಿ ಕಂಬಳಿ (ಮತ್ತು ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶದಲ್ಲಿ ಗೊಂಗಾಡಿ ಅಥವಾ ಗೊಂಗಾಲಿ) ಎಂದು ಕರೆಯಲ್ಪಡುವ ಒರಟಾದ ಕಪ್ಪು ಉಣ್ಣೆ ಕಂಬಳಿಗಳಿಗೆ ಉಣ್ಣೆಯನ್ನು ಪೂರೈಸುವುದರಿಂದ ಬರುತ್ತಿತ್ತು. ಇದರೊಂದಿಗೆ ಹೊಲಗಳಲ್ಲಿ ಕುರಿ ಮೇಯಲು ಬಿಟ್ಟಿದ್ದಕ್ಕಾಗಿ ಬರುತ್ತಿದ್ದ ಹಣವು ಅವರ ಪೂರಕ ಆದಾಯವಾಗಿತ್ತು. ಸುಲಭವಾಗಿ ಮತ್ತು ಸ್ಥಳೀಯವಾಗಿ ಲಭ್ಯವಿರುವ ನಾರಿನಂತೆ, ಉಣ್ಣೆ ತುಲನಾತ್ಮಕವಾಗಿ ಅಗ್ಗವಾಗಿತ್ತು ಮತ್ತು ಬೇಡಿಕೆಯಲ್ಲಿತ್ತು.
ಖರೀದಿದಾರರಲ್ಲಿ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲ್ಲೂಕಿನ ದಾದಿಭಾವಿ ಸಲಾಪುರ ಎಂಬ ಗ್ರಾಮದ ನೇಕಾರರು ಕೂಡ ಸೇರಿದ್ದರು. ಅನೇಕ ನೇಕಾರರು ಸಮುದಾಯದ ಉಪ ಗುಂಪಾದ ಕುರುಬರು ಕೂಡ ಹೌದು. (ಕುರುಬರು ಶಾಶ್ವತ ಮನೆಗಳು ಮತ್ತು ಊರುಗಳನ್ನು ಸಹ ಹೊಂದಿದ್ದಾರೆ, ಮತ್ತು ಕುರಿಗಾಹಿಗಳು, ನೇಕಾರರು, ಕೃಷಿಕರು ಮತ್ತು ಇತ್ಯಾದಿ ವಿವಿಧ ಉಪಗುಂಪುಗಳು ಸಹ ಇವೆ). ಅವರು ಹೆಣೆದ ಕಂಬಳಿಗಳು ಒಂದು ಕಾಲದಲ್ಲಿ ದೇಶದ ಸಶಸ್ತ್ರ ಪಡೆಗಳಲ್ಲಿ ಜನಪ್ರಿಯವಾಗಿದ್ದವು, ಆದರೆ ಈಗ ಹೆಚ್ಚಿನ ಬೇಡಿಕೆಯಲ್ಲಿಲ್ಲ. "ಅವರು ಈಗ ಸ್ಲೀಪಿಂಗ್ ಬ್ಯಾಗ್ ಗಳನ್ನು ಬಳಸುತ್ತಾರೆ" ಎಂದು ದಾದಿಭಾವಿ ಸಾಲಾಪುರದಲ್ಲಿ ಪಿಟ್ ಲೂಮ್ ಹೊಂದಿರುವ ನೇಕಾರ ಪಿ. ಈಶ್ವರಪ್ಪ ವಿವರಿಸುತ್ತಾರೆ, ಅಲ್ಲಿ ಸಾಂಪ್ರದಾಯಿಕ ಕಪ್ಪು ಉಣ್ಣೆ ಕಂಬಳಿಗಳನ್ನು ಈಗಲೂ ಉತ್ಪಾದಿಸಲಾಗುತ್ತದೆ.
"ಮಿಶ್ರಿತ ಸಿಂಥೆಟಿಕ್ ಬಟ್ಟೆಗಳು ಮತ್ತು ಇತರ ಬಗೆಯ ಉಣ್ಣೆ ಸೇರಿದಂತೆ ಅಗ್ಗದ ಪರ್ಯಾಯಗಳ ಕಾರಣದಿಂದಾಗಿ ಡೆಕ್ಕನ್ ಉಣ್ಣೆಯ ಬೇಡಿಕೆ ಕೂಡ ಕ್ಷೀಣಿಸುತ್ತಿದೆ, ಇದು ಇಂದಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಪ್ರವಾಹವನ್ನು ತಂದಿದೆ" ದಾದಿಭಾವಿ ಸಾಲಾಪುರದಿಂದ ಸುಮಾರು 200 ಕಿಲೋಮೀಟರ್ ದೂರದಲ್ಲಿರುವ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಪಟ್ಟಣದಲ್ಲಿ ಅಂಗಡಿ ನಡೆಸುತ್ತಿರುವ ಅಂಗಡಿಮಾಲೀಕ ದಿನೇಶ್ ಸೇಠ್






















