“ಕೃಷಿಯಲ್ಲಿ ಬಿಕ್ಕಟ್ಟು ಎಂಬುದೇ ಇಲ್ಲ.”
ಪಂಜಾಬ್ನ ಪ್ರಬಲ ಅರ್ತಿಯಾ ಅಸೋಸಿಯೇಶನ್ನ ಉಪಾಧ್ಯಕ್ಷ ದರ್ಶನ್ ಸಿಂಗ್ ಸಂಘೇರಾ ಮತ್ತು ಬರ್ನಾಲಾ ಜಿಲ್ಲೆಯ ಅದರ ಶಾಖೆಯ ಮುಖ್ಯಸ್ಥರನ್ನು ಭೇಟಿ ಮಾಡಿ. ಅರ್ತಿಯಾಗಳು ಕಮಿಷನ್ ಏಜೆಂಟ್ಗಳು, ರೈತರು ಮತ್ತು ಅವರ ಉತ್ಪನ್ನಗಳ ಖರೀದಿದಾರರ ನಡುವಿನ ಕೊಂಡಿ. ಕೊಯ್ಲು ಮಾಡಿದ ಬೆಳೆಯನ್ನು ಹರಾಜು ಹಾಕಿ ಖರೀದಿದಾರರಿಗೆ ತಲುಪಿಸುವ ವ್ಯವಸ್ಥೆ ಮಾಡುತ್ತಾರೆ. ಬಹಳ ದಿನಗಳಿಂದ ಈ ದಂಧೆಯಲ್ಲಿ ಹಣ ಕೊಡುವ ಕೆಲಸವನ್ನೂ ಮಾಡುತ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ, ಅವರು ಒಳಸುರಿಗಳ ಡೀಲರ್ಗಳಾಗಿಯೂ ಹೊರಹೊಮ್ಮಿದ್ದಾರೆ. ಈ ಎಲ್ಲಾ ಸಂಗತಿಗಳು ಈ ರಾಜ್ಯದ ರೈತರ ಮೇಲೆ ಅವರಿಗೆ ಸಾಕಷ್ಟು ಹಿಡಿತವಿದೆ ಎನ್ನುವುದನ್ನು ತೋರಿಸುತ್ತದೆ.
ಅರ್ತಿಯಾಗಳು ರಾಜಕೀಯವಾಗಿಯೂ ಪ್ರಬಲರಾಗಿದ್ದಾರೆ. ಅವರು ವಿಧಾನಸಭೆಯ ಸದಸ್ಯರನ್ನು ತಮ್ಮ ಸಹೋದರರಂತೆ ಪರಿಗಣಿಸುತ್ತಾರೆ. ಕಳೆದ ವರ್ಷ ಜುಲೈನಲ್ಲಿ ಅವರು ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರಿಗೆ 'ಫಖ್ರ್-ಎ-ಕೌಮ್' ('ಸಮುದಾಯದ ಹೆಮ್ಮೆ') ಬಿರುದನ್ನು ನೀಡಿದರು. ಸ್ಥಳೀಯ ಮಾಧ್ಯಮವು ಕಾರ್ಯಕ್ರಮವನ್ನು "ದೊಡ್ಡ ಅಭಿನಂದನಾ ಸಮಾರಂಭ" ಎಂದು ಬಣ್ಣಿಸಿದೆ. ರೈತರು ಅರ್ತಿಯಾಗಳ ಮಾಡಿರುವ ಸಾಲ ಮನ್ನಾ ಮಾಡುವುದು ಕಷ್ಟ ಎಂದು ಮುಖ್ಯಮಂತ್ರಿ ಹೇಳಿದ ಬೆನ್ನಲ್ಲೇ ಈ ಸಭೆಯನ್ನು ಆಯೋಜಿಸಲಾಗಿತ್ತು.
ಪಂಜಾಬಿನ ಗ್ರಾಮೀಣ ಪ್ರದೇಶದ ರೈತರು ಮತ್ತು ಕೃಷಿ ಕಾರ್ಮಿಕರ ನಡುವಿನ ಸಾಲದ ಮೇಲಿನ ಅಧ್ಯಯನವು 86 ಪ್ರತಿಶತ ರೈತರು ಮತ್ತು 80 ಪ್ರತಿಶತ ಕೃಷಿ ಕಾರ್ಮಿಕರು ಸಾಲದಲ್ಲಿದ್ದಾರೆ ಎಂದು ಹೇಳುತ್ತದೆ. ಅದರ ಲೇಖಕರು, ಪಟಿಯಾಲಾದ ಪಂಜಾಬಿ ವಿಶ್ವವಿದ್ಯಾಲಯದ ಸಂಶೋಧಕರು, ಆ ಸಾಲದ ಐದನೇ ಒಂದು ಭಾಗವನ್ನು ಅರ್ತಿಯಾಗಳು ಮತ್ತು ಲೇವಾದೇವಿದಾರರಿಗೆ ಪಾವತಿಸಬೇಕು ಎಂದು ಹೇಳಿದ್ದಾರೆ. ಮೇಲಾಗಿ ಸಾಲದ ಹೊರೆ ಹೆಚ್ಚುತ್ತಲೇ ಇದೆ. ಇದು ಕನಿಷ್ಠ ಮತ್ತು ಸಣ್ಣ ರೈತರಲ್ಲಿ ಅತಿ ಹೆಚ್ಚು. 1007 ರೈತರು ಮತ್ತು 301 ಕೃಷಿ ಕಾರ್ಮಿಕರ ಕುಟುಂಬಗಳನ್ನು ಈ ಅಧ್ಯಯನದಲ್ಲಿ ಸೇರಿಸಲಾಗಿದೆ. ಇದರ ಕ್ಷೇತ್ರ ಸಮೀಕ್ಷೆಯನ್ನು 2014-15ರಲ್ಲಿ ರಾಜ್ಯದ ಎಲ್ಲಾ ಪ್ರದೇಶಗಳಲ್ಲಿ ಮಾಡಲಾಗಿದೆ. ಇತರ ಅಧ್ಯಯನಗಳು ಸಾಲದ ಆಳ ಮತ್ತು ಸಂಕಟದ ಉಲ್ಬಣದ ಬಗ್ಗೆ ಮಾತನಾಡಿವೆ.
ದರ್ಶನ್ ಸಿಂಗ್ ಸಂಘೇರಾ ಅವರು ಕೃಷಿ ಬಿಕ್ಕಟ್ಟನ್ನು ಒಪ್ಪಿಕೊಳ್ಳಲು ನಿರಾಕರಿಸುತ್ತಾರೆ “ಎಲ್ಲವೂ ರೈತರ ವೆಚ್ಚದ ಅಭ್ಯಾಸಗಳಿಂದ ಉಂಟಾಗುತ್ತದೆ. ಅದು ಅವರಿಗೆ ತೊಂದರೆ ಕೊಡುತ್ತದೆ” ಎಂದು ದೃಢವಾಗಿ ಹೇಳುತ್ತಾರೆ. “ಒಳಸುರಿಗಳನ್ನು (ಗೊಬ್ಬರ ಇತ್ಯಾದಿ) ಖರೀದಿಸಲು ನಾವು ಅವರಿಗೆ ಹಣ ಸಹಾಯ ಮಾಡುತ್ತೇವೆ. ಇದಲ್ಲದೇ ಅವರ ಮದುವೆ, ವೈದ್ಯಕೀಯ ಮತ್ತಿತರ ವೆಚ್ಚಗಳಿದ್ದಾಗಲೂ ಹಣ ನೀಡುತ್ತೇವೆ. ರೈತನ ಬೆಳೆ ಸಿದ್ಧವಾದಾಗ ತಂದು ಏಜೆಂಟರಿಗೆ ಕೊಡುತ್ತಾನೆ. ನಾವು ಬೆಳೆಯನ್ನು ಸ್ವಚ್ಛಗೊಳಿಸುತ್ತೇವೆ, ಚೀಲಗಳಲ್ಲಿ ಪ್ಯಾಕ್ ಮಾಡುತ್ತೇವೆ, ಸರ್ಕಾರ, ಬ್ಯಾಂಕುಗಳು, ಮಾರುಕಟ್ಟೆಯೊಂದಿಗೆ ವ್ಯವಹರಿಸುತ್ತೇವೆ. ಗೋಧಿ ಮತ್ತು ಭತ್ತದ ಒಟ್ಟು ಖರೀದಿ ಬೆಲೆಯ ಶೇ.2.5ರಷ್ಟನ್ನು ಸರ್ಕಾರ ಏಜೆಂಟರಿಗೆ ಪಾವತಿಸುತ್ತದೆ. ಅವರ ಚಟುವಟಿಕೆಯ ಅಧಿಕೃತ ಭಾಗವಾದ ರಾಜ್ಯ ಸಂಯೋಜನೆಯು ಪಂಜಾಬ್ ರಾಜ್ಯ ಕೃಷಿ ಮಾರುಕಟ್ಟೆ ಮಂಡಳಿಯಿಂದ ನಿಯಂತ್ರಿಸಲ್ಪಡುತ್ತದೆ. ಈ ಕಮಿಷನ್ ಏಜೆಂಟರ ಮೂಲಕ ರೈತರು ತಮ್ಮ ಪಾವತಿಯನ್ನು ಪಡೆಯುತ್ತಾರೆ. ಮತ್ತು ಇದೆಲ್ಲವೂ ಅರ್ಹತಿಯಾಗಳು ಲೇವಾದೇವಿಯಿಂದ ಪಡೆಯುವ ಆದಾಯದಿಂದ ಹೊರತಾಗಿದೆ.





