ಆ ದಿನ ನನಗಿನ್ನೂ ನೆನಪಿದೆ. ನನ್ನ ತಾಯಿಯವರ ಪಕ್ಕದಲ್ಲಿ ಚಾದರ ಸುತ್ತಿಕೊಂಡು ನಾನು ಅವರು ಹೇಳುತ್ತಿದ್ದ ಕಥೆ ಕೇಳುತ್ತಿದ್ದೆ - ಮತ್ತು ಜೀವನದ ನಿಜವಾದ ಅರ್ಥವನ್ನು ಹುಡುಕುತ್ತಾ ಸಿದ್ಧಾರ್ಥನು ತನ್ನ ಮನೆಯನ್ನು ತೊರೆದನು" ಎಂದು ಅವರು ವಿವರಿಸುತ್ತಿದ್ದರು. ಆ ದಿನ ರಾತ್ರಿಯಿಡೀ ಜೋರಾಗಿ ಮಳೆ ಸುರಿಯಿತು, ಆಗ ನಮ್ಮ ಕೋಣೆಯು ಭೂಗರ್ಭದ ವಾಸನೆಯನ್ನು ಬೀರುತ್ತಿತ್ತು, ಇನ್ನೊಂದೆಡೆಗೆ ಮೇಣದ ಬತ್ತಿಯಿಂದ ಹೊರಸೂಸಿದ ಹೊಗೆ ಒಳತಾರಸಿಗೆ ಸ್ಪರ್ಶಿಸುತ್ತಿತ್ತು.
ಒಂದು ವೇಳೆ ಸಿದ್ದಾರ್ಥನಿಗೆ ಹಸಿವಾದರೆ?" ಎಂದು ನಾನು ಪ್ರಶ್ನಿಸಿದೆ. ಸಿದ್ಧಾರ್ಥನೊಬ್ಬ ದೇವರಾಗಿದ್ದ ಅವನಿಗೆ ಹಸಿವಾಗಲಿಲ್ಲವೆ ಎಂದು ಕೇಳಿದ್ದ ನನ್ನ ಮೂರ್ಖತನ ಎಂತಹದ್ದಿರಬಹುದು?
ಇದಾದ 18 ವರ್ಷಗಳ ಬಳಿಕ, ನಾನು ಮತ್ತೆ ಅದೇ ಕೋಣೆಗೆ ಬಂದೆ. ಆಗಲೇ ಮಳೆ ಸುರಿಯುತ್ತಿತ್ತು - ಕಿಟಕಿಗಳ ಮೇಲೆ ಹನಿಗಳು ಒಂದೊಂದಾಗಿ ತೊಟ್ಟಿಕ್ಕುತ್ತಿದ್ದವು. ನನ್ನ ಪಕ್ಕದಲ್ಲಿ ಚಾದರ ಸುತ್ತಿಕೊಂಡು ನನ್ನ ತಾಯಿ "21 ದಿನಗಳ ಲಾಕ್ಡೌನ್ ಪ್ರಾರಂಭವಾದಾಗಿನಿಂದ ಅರ್ಧ ಮಿಲಿಯನ್ ವಲಸಿಗರು ಭಾರತದ ದೊಡ್ಡ ನಗರಗಳಿಂದ ತಮ್ಮ ಗ್ರಾಮಗಳಿಗೆ ನಡೆದುಕೊಂಡು ಹೋಗುತ್ತಿದ್ದಾರೆ" ಎನ್ನುವ ಸುದ್ದಿಯನ್ನು ಕೇಳುತ್ತಿದ್ದರು.
ಈಗಲೂ ಅದೇ ಪ್ರಶ್ನೆ: ಅವರಿಗೆ ಹಸಿವಾದರೆ ಹೇಗೆ?



