ಅವರಿಗಿರುವ ಎಲ್ಲಾ ಆಯ್ಕೆಗಳು ಮುಗಿದ ನಂತರ, ಕೊನೆಗೆ ವಿಜಯ್ ಕೊರೆಟಿ ಮತ್ತು ಅವರ ಸ್ನೇಹಿತರು ಕಾಲ್ನಡಿಯಲ್ಲಿಯೇ ಊರಿಗೆ ಹೊರಡಲು ನಿರ್ಧರಿಸಿದರು.
ಅದು ಎಪ್ರಿಲ್ ತಿಂಗಳಿನ ಮಧ್ಯದ ಸಮಯ, ಆ ಸಂದರ್ಭದಲ್ಲಿ ಭಾರತದಾದ್ಯಂತ ಕೋವಿಡ್-19 ಸಾಂಕ್ರಾಮಿಕ ಪಿಡುಗಿನ ಕಾರಣದಿಂದಾಗಿ ಕಟ್ಟುನಿಟ್ಟಾದ ಲಾಕ್ಡೌನ್ ಜಾರಿಯಲ್ಲಿತ್ತು, ಹೀಗಾಗಿ ಅವರು ತಮ್ಮ ದೂರದಲ್ಲಿರುವ ತಮ್ಮ ಸಣ್ಣ ಗುಡಿಸಲುಗಳಲ್ಲಿ ಇನ್ನೆಷ್ಟು ದಿನಗಳವರೆಗೆ ಹೀಗೆ ಸಿಕ್ಕಿಹಾಕಿಕೊಳ್ಳಬೇಕಾಗುತ್ತದೋ ಎನ್ನುವುದರ ಬಗ್ಗೆ ಚಿಂತಿಸುತ್ತಿದ್ದರು.
“ನಮ್ಮ ಸ್ನೇಹಿತರು ಹೊರಡಲು ಯತ್ನಿಸುತ್ತಿದ್ದಾಗ ಪೊಲೀಸರು ಎರಡು ಬಾರಿ ಅವರನ್ನು ದಾರಿ ಮಧ್ಯದಲ್ಲಿಯೇ ತಡೆದು ವಾಪಸ್ ಕಳುಹಿಸಿದರು.ಆದರೆ ಕೊನೆಗೆ ಒಬ್ಬೊಬ್ಬರಂತೆ ಎಲ್ಲರನ್ನು ಊರಿಗೆ ತಲುಪಲು ಬಿಟ್ಟರು” ಎಂದು ಕೊರೆಟಿ ಸ್ಮರಿಸಿಕೊಳ್ಳುತ್ತಿದ್ದರು.
ಈಗ ಜಿಪಿಎಸ್ ನಂತಹ ಆಯ್ಕೆಯನ್ನು ಹೊಂದಿರುವ ಸ್ಮಾರ್ಟ್ಪೋನ್ ಇಲ್ಲದ ಸ್ನೇಹಿತರ ತಂಡವೊಂದು ಹೊಸ ಸಂಭವನೀಯ ಮಾರ್ಗವನ್ನು ಕಂಡುಕೊಂಡಿತ್ತು:
ಅವರು ತೆಲಂಗಾಣದ ಕೊಮಾರಂ ಭೀಮ್ ಜಿಲ್ಲೆಯ ಸಿರ್ಪುರ್-ಕಾಗಜ್ನಗರದಲ್ಲಿರುವ ಹತ್ತಿ ಜಿನ್ನಿಂಗ್ ಮತ್ತು ಪ್ರೆಸ್ಸಿಂಗ್ ಮಿಲ್ನಲ್ಲಿ ಕೆಲಸ ಮಾಡುತ್ತಿದ್ದರು, ಈ ಪ್ರದೇಶವು ಹೈದರಾಬಾದ್-ನಾಗ್ಪುರ ರೈಲ್ವೆ ವಿಭಾಗದಲ್ಲಿ ಬರುತ್ತದೆ.
ಅಲ್ಲಿಂದ ಅವರು ಮಹಾರಾಷ್ಟ್ರದ ಗೊಂಡಿಯಾ ಜಿಲ್ಲೆಯ ಅರ್ಜುನಿ ಮೋರ್ಗಾಂವ್ ತೆಹಸಿಲ್ನಲ್ಲಿರುವ ತಮ್ಮ ಗ್ರಾಮ ಝಶಿನಗರಕ್ಕೆ ಹಳಿಗಳುದ್ದಕ್ಕೂ ಪ್ರಯಾಣಿಸಿದರೆ ಸುಮಾರು 700-800 ಕಿಲೋಮೀಟರ್ ದೂರವಿದೆ. ಅದು ಕಷ್ಟಕರವಂತೂ ಹೌದು, ಆದರೆ ಪ್ರಯತ್ನಿಸಲಿಕ್ಕೆ ಅಡ್ಡಿಯಿಲ್ಲ.ಮತ್ತು ಇನ್ನು ಅವರು ರೈಲ್ವೆ ಹಳಿಗಳುದ್ದಕ್ಕೂ ಪ್ರಯಾಣಿಸಿದರೆ, ಅವರನ್ನು ಪೊಲೀಸರು ದಾರಿ ಮಧ್ಯದಲ್ಲಿ ತಡೆಯುವ ಸಾಧ್ಯತೆ ಕೂಡ ಕಡಿಮೆ ಎನ್ನಬಹುದು.
ಹಾಗಾಗಿ, ದೇಶಾದ್ಯಂತ ಲಕ್ಷಾಂತರ ಕಾರ್ಮಿಕರಂತೆ ಒಂದು ಎಕರೆ ಕೃಷಿ ಭೂಮಿಯನ್ನು ಹೊಂದಿರುವ ಗೊಂಡ ಆದಿವಾಸಿ ರೈತ ಕೊರೆಟಿ ಮತ್ತು ಝಶಿನಗರಕ್ಕೆ ಸೇರಿದ ಇತರರು -ಕಾಗಜ್ನಗರದಿಂದ ಸಂಕಷ್ಟದ ಪ್ರಯಾಣವನ್ನು ಆರಂಭಿಸಿದರು, ಅವರು ತಮ್ಮೂರಿನಲ್ಲಿರುವ ಕುಟುಂಬಗಳನ್ನು ತಲುಪಲಿಕ್ಕೆ ಸುಮಾರು 13 ರಾತ್ರಿ ಮತ್ತು 14 ಹಗಲು ಹಿಡಿಯುತ್ತದೆ.
ಅದು ರೈಲು ಅಥವಾ ಬಸ್ಸಿನಲ್ಲಿ ಪ್ರಯಾಣಿಸಿದರೆ ಅರ್ಧ ದಿನದಲ್ಲಿ ತಲುಪುವಷ್ಟು ದೂರ, ಆದರೆ ಅವರೆಲ್ಲರೂ ಮಾತ್ರ ಕಾಲ್ನಡಿಗೆಯಲ್ಲಿಯೇ ತಮ್ಮೂರಿಗೆ ಪ್ರಯಾಣ ಬೆಳೆಸಿದ್ದರು.












