ಖತಿಮ ಊರಿನಲ್ಲಿ ನೆಲೆಸಿರುವ ನಲವತ್ತೊಂದು ವರ್ಷದ ವಕೀಲ ಅನಿಲ್ ಸಿಂಗ್ ರಾಣಾ ಸಹ ಥಾರು ಸಮುದಾಯದವರು. ಭೂಮಿಯ ಹಕ್ಕನ್ನು ನಿರ್ಧರಿಸುವ ಕಾನೂನಿನ ಪ್ರಕ್ರಿಯೆಗಳಲ್ಲಿ ಅವರಿಗೆ ಅಷ್ಟಾಗಿ ವಿಶ್ವಾಸವಿಲ್ಲ. “ಇಂತಹ ಪ್ರಕರಣಗಳು ದೀರ್ಘಕಾಲೀನವಾಗಿರುತ್ತವೆ. ಪಾರಂಪರಿಕವಾಗಿ ನಮ್ಮ ಸಮುದಾಯದವರು ಅಷ್ಟಾಗಿ, ದಸ್ತಾವೇಜು ಹಾಗೂ ಕಾಗದಪತ್ರಗಳನ್ನು ಇಟ್ಟುಕೊಂಡಿರುವುದಿಲ್ಲ. ಜಮೀನಿನ ನಷ್ಟ ಎಂದಿಗೂ ಸರಳವಲ್ಲ. ಅನೇಕ ಸ್ತರಗಳಲ್ಲಿ ಅದು ಪರಿಣಾಮ ಬೀರುತ್ತದೆ.”
ರಾಣಾ, ಕಳೆದ ದಶಕದ ಹೆಚ್ಚಿನ ಸಮಯವನ್ನು ಉತ್ತರಾಖಂಡ್ನ ಸುಮಾರು ನಲವತ್ತು ಹಳ್ಳಿಗಳ ಬುಡಕಟ್ಟು ಜನರ ಹಕ್ಕುಗಳ ಬಗ್ಗೆ ಕೆಲಸಮಾಡುವ ಗ್ರಾಮ-ಮಟ್ಟದ ಸಂಘಟನೆಗಳ ತಂಡವೆನಿಸಿದ, ಭೂಮಿ ಅಧಿಕಾರ್ ಮಂಚ್ (BAM) ಜೊತೆಗೆ ಕಳೆದರು. ಇದು ಸ್ಥಾಪನೆಗೊಂಡ ಎರಡು ವರ್ಷಗಳ ನಂತರ, 2009ರಲ್ಲಿ, ಅರಣ್ಯದಲ್ಲಿ ವಾಸಿಸುವ ಸಮುದಾಯಗಳ ಪಾರಂಪರಿಕ ಹಕ್ಕುಗಳನ್ನು ರಕ್ಷಿಸುವ 2006ರ ಕಾಯ್ದೆಯನ್ನು ಜಾರಿಗೆ ತರುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿತು. ಜಾಗೃತಿ ಮೂಡಿಸುವ ಮತ್ತು ಪ್ರಭಾವ ಬೀರುವ ನಿಟ್ಟಿನ ಮಂಚ್ನ ವಿಧಾನಗಳು ಬುಡಕಟ್ಟು ಭೂ ಹಕ್ಕುಗಳಿಗಾಗಿ ನಡೆಸುವ ಹೋರಾಟದಲ್ಲಿ ಸ್ವಲ್ಪಮಟ್ಟಿನ ಯಶಸ್ಸನ್ನು ಕಂಡಿದೆ.
2012ರಲ್ಲಿ ಕಮ್ಲಾ ಈ ಸಂಘಟನೆಯತ್ತ ಮುಖಮಾಡಿದರು.
“ನಾವು ಸರಳ ಜನರು. ನಮಗೆ ಕೋರ್ಟು ಅರ್ಥವಾಗುವುದಿಲ್ಲ. ಸಾಮಾಜಿಕ ಒತ್ತಡವು ಹೆಚ್ಚು ಪರಿಣಾಮಕಾರಿ” ಎಂಬುದು ಅವರುಯ ತರ್ಕ. BAMನ ಕ್ಷೇತ್ರ ಕಾರ್ಯಕರ್ತರ ತಂಡದ ಭಾಗವಾಗಿರುವ ತನ್ನ ಅತ್ತಿಗೆ ಮಿನಾ ದೇವಿಯೊಂದಿಗೆ ಸೇರಿ, ಕಮ್ಲಾ, ತನ್ನ ಭೂಮಿಯನ್ನು ವಾಪಸ್ಸು ಕೇಳಲು ಪ್ರಾರಂಭಿಸಿದರು. “ನಾವು ಅವರ (ಸಾಲದಾತರ) ಅಂಗಡಿಗಳಿಗೆ ತೆರಳಿ ಅಲ್ಲಿ ನಿಲ್ಲುತ್ತಿದ್ದೆವು. ನನ್ನೊಂದಿಗೆ ಮಾತನಾಡು, ಕಾಗದಪತ್ರಗಳನ್ನು ನನಗೆ ತೋರಿಸು ಎಂದು ನಾನು ಆಗ್ರಹಿಸತೊಡಗಿದೆ. ಹಳ್ಳಿಯ ಇತರೆ ಮಹಿಳೆಯರನ್ನು ಸಹ ನಾವು ಕರೆದೊಯ್ದೆವು.”
ಹಿಂದಿನ ವರ್ಷ, ಅವರುಯ ಹಠದ ಕಾರಣದಿಂದಾಗಿ, ಒಬ್ಬ ಸಾಲದಾತನು 3.5 ಎಕರೆಗಳನ್ನು ವಾಪಸ್ಸು ನೀಡಿದ. ತನ್ನ ಹೆಸರನ್ನು ಬಹಿರಂಗಪಡಿಸಬಾರದೆಂದು ತಿಳಿಸದ ಅವರು, “ಅವರೆಲ್ಲರೂ (ಸಾಲಗಾರರು) ಈ ತಂತ್ರವನ್ನು ಬಳಸಿದಲ್ಲಿ, ನನ್ನ ವ್ಯವಹಾರವು ಕೊನೆಗೊಂಡು, ನನ್ನ ಸುಪರ್ದಿನಲ್ಲಿರುವ ಭೂಮಿಯೆಲ್ಲವನ್ನೂ ಕಳೆದುಕೊಳ್ಳುತ್ತೇನೆ” ಎಂದರು.
ಕಮ್ಲಾಳ ಕಿರಿಯ ಮಗ, ಇಪ್ಪತ್ತು ವರ್ಷದ ಕೇಶವ್, ಕುಟುಂಬದ ಭೂ ದಾಖಲೆಗಳನ್ನು ಪತ್ತೆಹಚ್ಚುವ ಸಲುವಾಗಿ ತನ್ನನ್ನೇ ಮೀಸಲಿಟ್ಟು, ಈಗ ಕಾಲೇಜನ್ನು ತೊರೆದಿದ್ದಾನೆ. ಅವನ್ನು ಪತ್ತೆಹಚ್ಚಿದಲ್ಲಿ, ಹೆಚ್ಚು ಪರಿಣಾಮಕಾರಿಯಾದ ಒತ್ತಡವನ್ನು ಹೇರಬಹುದಾಗಿದೆ. ಸಾಲದಾತರಲ್ಲೊಬ್ಬನಿಂದ ತನ್ನ ತಂದೆಯ ಸಹಿಯಿರುವ ಖಾಲಿ ಸ್ಟಾಂಪ್ ಪೇಪರನ್ನು ವಾಪಸ್ಸುಪಡೆದಿರುವುದು ಇಲ್ಲಿಯವರೆಗಿನ ಅವರುನ ಅತಿ ದೊಡ್ಡ ಯಶಸ್ಸು.
ಮಂಗೋಲಾ, ತನ್ನ ಸ್ವಂತ ಸಹೋದರನ ವಿರುದ್ಧ ನಿಂತಿರುವ ಕಾರಣ ಅವರುಯ ಹೋರಾಟವು ಪ್ರಯಾಸಕರವೆನಿಸಿದೆ. ಈಕೆಯಿಂದ ದೂರವಾದ ಫೂಲ್ ಹೀಗೆನ್ನುತ್ತಾನೆ “ಈಗ ಅವರುಯು ಕೌಟುಂಬಿಕ ವಿಚಾರವನ್ನು ಹೊರಗಿನವರ ಬಳಿ ಕೊಂಡೊಯ್ದಿದ್ದಾಳೆ. ನಾನು ಅವಳೊಂದಿಗೇಕೆ ರಾಜಿಮಾಡಿಕೊಳ್ಳಬೇಕು?”
ಅನೇಕ ಮಹಿಳೆಯರಂತೆ, ಮಂಗೋಲಾ ಸಹ ಭೂಮಿಯ ಮೇಲಿನ ತನ್ನ ಹಕ್ಕನ್ನು ಅಬಾಧಿತ ಸ್ವಾಮ್ಯವೆಂದು ಭಾವಿಸಲು ಸಾಧ್ಯವಾಗಿಲ್ಲ. ಆ ಆಲೋಚನೆಯನ್ನು ವಿವರಿಸಲು ಅವರು ಹೆಣಗಾಡುತ್ತಾರೆ: “ಎಲ್ಲರೂ ಹೆಣ್ಣುಮಕ್ಕಳಿಗೆ ಭೂಮಿಯನ್ನು ಕೊಡುವುದಿಲ್ಲ. ಅವರುಗೂ ಸ್ವಲ್ಪ ಕೊಡೋಣ, ಆದರೆ ಕುಟುಂಬದ ಪುರುಷರ ಒಪ್ಪಿಗೆಯೊಂದಿಗೆ ಎಂಬ ಮನೋಭಾವವಿದೆ. ಇದು ಸರಿಯೇ ಎಂಬುದು ನನಗೆ ಖಚಿತವಿಲ್ಲ. ಆದರೆ, ಭೂಮಿಯು ನಮ್ಮ ಸಂಸ್ಕೃತಿ, ನಮ್ಮ ಪರಂಪರೆ. ಅದನ್ನು ನಾವು ಆರಾಧಿಸುತ್ತೇವೆ ಹಾಗೂ ಅದರಿಂದ ಪೋಷಿಸಲ್ಪಡುತ್ತೇವೆ. ನನ್ನಂತಹ ಮಹಿಳೆಯರಿಗೆ ಅದು ಭರವಸೆಯೂ ಹೌದು.”
ಕಮ್ಲಾರ ಮನಸ್ಸಿನಲ್ಲಿ ಅಂತಹ ಸಂದೇಹಗಳಿಲ್ಲ. ಭೂಮಿಯನ್ನು ಹಸ್ತಾಂತರಿಸುವುದನ್ನು ಮೌನವಾಗಿ ನೋಡುತ್ತಿದ್ದ ವರ್ಷಗಳ ನಂತರ ಕಂಡುಕೊಂಡ ದೃಢಸಂಕಲ್ಪದೊಂದಿಗೆ, ಮರಳಿ ಗೆದ್ದ ಕೃಷಿಭೂಮಿಯ ಮೇಲೆ ನಿಂತು, ಅವರು ಮಾತನಾಡುತ್ತಾರೆ.
“ಭೂಮಿಯು ನನ್ನದು. ಅದನ್ನು ವಾಪಸ್ಸು ಪಡೆಯುತ್ತೇನೆ. ಇದು ನನ್ನ ಕರ್ತವ್ಯ. ಸಂಘರ್ಷ ಎಷ್ಟು ಕಾಲವೆಂಬುದು ಮುಖ್ಯವಲ್ಲ” ಎನ್ನುತ್ತಾಳೆ ಅವರು.
ಲೇಖಕಿಯು ಭಾರತದಲ್ಲಿ ಬಡವರಿಗೆ ಸುರಕ್ಷಿತ ಭೂಮಿ ಮತ್ತು ಆಸ್ತಿ ಹಕ್ಕುಗಳ ಪ್ರಾಮುಖ್ಯತೆಯ ಬಗ್ಗೆ ಅರಿವನ್ನು ಮೂಡಿಸುವ ನಿಟ್ಟಿನಲ್ಲಿ, N/Core ಫೌಂಡೇಷನ್ನಿಂದ ನೀಡಲಾಗುವ ಇಂಪ್ಯಾಕ್ಟ್ ಜರ್ನಲಿಸಂ ಪ್ರಶಸ್ತಿಯನ್ನು ಪಡೆದಿದ್ದಾರೆ.