सकाळच्या पहरी कोण गोसावी गं दारी आला
काई सांगु बाई तुला वाढवी कशा गं भिकशा तू गं त्याला
असा सकाळच्या पारी धर्म चांगुणानी केला
धर्म चांगुणानी केला, अंगी देव तो गं राबवीला
असा धर्माचा डावू जिला येतो ना गं तिनी केला
नको म्हणू नासविला, देव उभा तो गं राहिला
हाच धर्माचा डावू कोण घालीतं गं पंगयती
काय म्हणं नासविला, पांडुरंग तो गं रंगतो संगयती
जिच्या कुळीला धर्म चा धर्म, तिच्या लेकीनी चालू केला
गेली लांब वनामधी देव तिथं, तिला साह्य झाला
पाची बोटाचा गं धर्म करी जिवाची सोडवणं
अशी वार्याच्या झगरीनी, कशी उडाली कवळी पानं
असा धर्माचा डावू देते केळीच्या पानावरी
काई यातं मिळाईला भुकेल्याची जाणं करी
आला माझ्या दारामधी देते प्यायला नितं पाणी
येम गेला फिरवूनी भुकेल्याची जाणं करी
असा धर्माचा डावू माझा मला तो गं मिळईला
गेली व्हती देऊळाला सारासारा तो गं कळईला
आस दुबळं-माझं-पण मला कुणी ते गं हिणविलं
देवाला ना जोडी हात, कसं शर्थीनी चालविलं
दुबळं-ना-माझं-पणं मारी वस्ताराला गाठी
किती नाव संभाळीला, सभा घेतल्याना माझ्या गोठी
असा दुबळ्यापणाला नको भाऊ तू रे डगमगू
असा निघूनी जाईल चंद्रावरीला रे काळा ढगू
आस दुबळ्यापणाला नको होऊस रे आयाहुया
आस निघूनी जाईल चंद्रावरली रे काळी साया
अशी दुबळ्यापणाईची कसा करतो हेळयणा
दुपारची सावली आला काखत रे झोळयणा
अशी दुबळ्यापणाईची कोण करीतो टिंगईल
तुझ्या मरणाच्या वेळी सारं काही तो सांगईल
दुबळ्यापणाईला काही बोलावरं तोडून
जाई मोगर्याची कळा गेली वार्यानी रे पडूनी
पूर्वी जलमाच्या किर्ती गेल्या जगात पांगून
नको मज लाडवू देते तुम्हांला रे सांगून
ಬೆಳ್ಳಂಬೆಳಗ್ಗೆ ಬಾಗಿಲಿಗೆ ಬಂದ ಗೋಸಾವಿ ಯಾರು?
ಏನ ನೀಡಲಿ ಅವನಿಗೆ, ಖಾಲಿ ಕೈಯವಳು ನಾನು
ಬೆಳಗಿನ ಜಾವದಲಿ ಒಳ್ಳೆ ಮನಸಿಟ್ಟು ಮಾಡಿದ ಕೆಲಸವೆಲ್ಲವೂ ಧರ್ಮ
ಒಳ್ಳೆಯ ಮನಸ್ಸಿದ್ದರೆ ಅದುವೇ ಶಿವನಿಗೆ ಪ್ರಿಯವು ಎಂದವಳು ಭಕ್ತೆ ಚಂಗುಣಾ
ಸತ್ಯ ಹೇಳುವುದು ಕರುಣೆಯನು ಹೊಂದುವುದೇ ಧರ್ಮ
ಯಾವ ಒಳ್ಳೆಯ ಕೆಲಸವೂ ವ್ಯರ್ಥವಲ್ಲ, ದೇವರು ಮೇಲಿಂದ ನೋಡುವನು ಎಲ್ಲವನು
ಲೋಕದಲ್ಲಿ ಒಳ್ಳೆಯ ಕೆಲಸಗಳ ಭಾರ ಹೊರುವವರ್ಯಾರು?
ಒಳ್ಳೆಯ ಕೆಲಸಕ್ಕೆ ಪಾಂಡುರಂಗ ಜೊತೆಯಾಗುವ, ಯಾವ ಕೆಲಸವೂ ವ್ಯರ್ಥವಲ್ಲ
ಧಾರ್ಮಿಕರ ಮನೆಯಲ್ಲಿ ಹುಟ್ಟಿದವರು ಧಾರ್ಮಿಕರೇ ಆಗುವರು
ಧಾರ್ಮಿಕರ ದಾರಿಗೆ ದೇವರೇ ಸಂಗಾತಿ, ಅದು ಕಾಡು ಹಾದಿಯೇ ಇರಲಿ
ನಿಜವಾದ ಧರ್ಮವೆಂದರೆ ನಾವು ಸೇವೆ, ದಾನ ಮತ್ತು ಸಹಾಯ
ಜನರು ಬಹಳ ಬೇಗನೆ ಯೋಚಿಸುವರು, ಸಣ್ಣ ಗಾಳಿಗೂ ತರಗೆಲೆ ಹಾರುವಂತೆ
ಪ್ರೀತಿಯಿಂದ ಬಡಿಸುವುದೂ ಧರ್ಮದ ಒಂದು ರೂಪ
ಹಸಿದವರಿಗೆ ಅನ್ನವನಿಕ್ಕುವುದು ಫಲ ಸಿಗುವುದೆಂದಲ್ಲ, ಹಸಿದವರ ನೋವ ತಿಳಿಯಲೆಂದು
ಯಾರು ಬಾಗಿಲಿಗೆ ಬಂದರೂ ನೀರು ಕೊಡುತ್ತಾಳೆ ಅವಳು
ಕಷ್ಟ ಕಾಲದಲ್ಲೂ ಕರುಣೆ ಮರೆತವಳಲ್ಲ ಚಂಗುಣಾ
ನನ್ನಲ್ಲಿರುವ ಕರುಣೆಯೇ ನನ್ನ ಬಳಿಯಿರು ಸಂಪತ್ತು
ಮಂದಿರಕ್ಕೆ ಹೋಗಿ ದೇವರ ಬಳಿ ಹೇಳಿದೆನು ನನ್ನ ಸುಖ ದುಃಖಗಳ
ನಾನು ಬಡವಿ, ಅವರು ನನ್ನ ಅಪಮಾನಿಸಿದರು
ದೇವರಿಗೆ ಕೈಮುಗಿದೆ, ನನ್ನ ಧರ್ಮವನ್ನು ನಾನು ಮುಂದುವರೆಸಿದೆ
ನಾನು ಬಡವಿ, ಹರಿದ ಸೀರೆಯನ್ನೇ ಗಂಟು ಹಾಕಿ ಉಡುತ್ತೇನೆ
ಹೀಗೆ ಕಾಪಾಡಿಕೊಳ್ಳುತ್ತೇನೆ ಮಾನವನ್ನು, ಆದರೂ ಜನರು ಆಡಿಕೊಳ್ಳುತ್ತಾರೆ ಅಲ್ಲಲ್ಲಿ
ನಾನು ಬಡತನದಲ್ಲಿ ಬದುಕಿದ್ದೇನೆ, ಅಣ್ಣಾ ನೀನು ಹೆದರಬೇಡ
ಬಡತವನೂ ಇಲ್ಲವಾಗುವುದು ಚಂದ್ರನ ಕಪ್ಪು ಕಲೆ ತೊಲಗಿದಂತೆ
ಕಷ್ಟ ಬಂದಿತೆಂದು ಕಂಗೆಡಲು ಬಾರದು
ಕತ್ತಲೆಯು ಕಳೆದು ಮತ್ತೆ ಬೆಳಕು ಮೂಡುವುದು
ಎಷ್ಟು ಆಡಿಕೊಳ್ಳುವರು ಜನರು ಬಡತನವನ್ನು
ಹೆಚ್ಚುತಲೇ ಇರುವುದು ಅವಮಾನ ಮಧ್ಯಾಹ್ನದ ಬಿಸಿಲಿನ ತಾಪದಂತೆ
ನನ್ನ ಬಡತನವನ್ನು ಯಾರು ಆಡಿಕೊಳ್ಳುತ್ತಿದ್ದಾರೆ?
ಮರಣದ ಸಮಯದಲ್ಲಿ ದೇವರು ಎಲ್ಲವನ್ನೂ ಹೇಳುವ
ಕೆಟ್ಟ ಮಾತುಗಳು ಮೃದು ಮನಸುಗಳ ನೋಯಿಸುವುದು
ಸಣ್ಣ ಗಾಳಿಯೇ ಸಾಕು ಮಲ್ಲಿಗೆ ಮೊಗ್ಗು ಕಳಚಿ ಬೀಳಲು
ಹಿಂದೆ ನಡೆದಿದ್ದು ನಡೆದು ಹೋಯಿತು
ಸುಮ್ಮನೆ ಹೊಗಳದಿರು ನನ್ನ, ನನಗೆ ಅನ್ನಿಸಿದ್ದನ್ನೇ ಹೇಳುವುದು ನಾನು
*ಗೋಸಾವಿ, ಲೌಕಿಕ ವ್ಯವಹಾರಗಳು, ಸುಖಭೋಗಗಳು ಇತ್ಯಾದಿಗಳನ್ನು ತ್ಯಜಿಸಿದವನು. ಇವರು ಸಾಮಾನ್ಯವಾಗಿ ಇಟ್ಟಿಗೆ ಧೂಳಿನ ಬಣ್ಣದ ಬಟ್ಟೆಗಳನ್ನು ಧರಿಸುತ್ತಾರೆ. ಇದು ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಒಂದು ಜಾತಿಯ ಹೆಸರೂ ಹೌದು.