ಶಾಸ್ತಿ ಭುನಿಯಾಕಳೆದ ವರ್ಷ ಶಾಲೆಯಿಂದ ಹೊರಬಂದಳು. ನಂತರ ಸುಂದರ್ಬನ್ಸ್ ಪ್ರದೇಶದಲ್ಲಿರುವ ತನ್ನ ಹಳ್ಳಿಯಾದ ಸೀತಾರಾಂಪುರದಿಂದಸುಮಾರು 2,000 ಕಿಲೋಮೀಟರ್ ದೂರದಲ್ಲಿರುವ ಬೆಂಗಳೂರಿಗೆರೈಲು ಹತ್ತಿದಳು. “ನಾವು ಅತ್ಯಂತ ಬಡವರಾಗಿದ್ದೇವೆ. ನನಗೆ ಶಾಲೆಯಲ್ಲಿ ಮಧ್ಯಾಹ್ನದ ಊಟಮಾಡಲು ಸಾಧ್ಯವಾಗಲಿಲ್ಲ.” ಎಂದಳು. ಶಾಸ್ತಿಗೆ 16 ವರ್ಷಮತ್ತು 9 ನೇ ತರಗತಿಯಲ್ಲಿದ್ದಳು; ಪಶ್ಚಿಮ ಬಂಗಾಳ ಮತ್ತು ಭಾರತದಾದ್ಯಂತಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ 8 ನೇ ತರಗತಿಯವರೆಗೆಮಾತ್ರ ಮಧ್ಯಾಹ್ನದ ಊಟವನ್ನು ನೀಡಲಾಗುತ್ತದೆ.
ಈ ವರ್ಷದ ಮಾರ್ಚ್ ವೇಳೆಗೆಶಾಸ್ತಿಯು ದಕ್ಷಿಣ 24 ಪರಗಣ ಜಿಲ್ಲೆಯಕಾಕ್ದ್ವಿಪ್ ಬ್ಲಾಕ್ನಲ್ಲಿರುವ ತನ್ನ ಹಳ್ಳಿಗೆ ಹಿಂದಿರುಗುವಪ್ರಯಾಣವನ್ನು ಮಾಡಿದಳು. ಲಾಕ್ಡೌನ್ ಪ್ರಾರಂಭವಾದಾಗಬೆಂಗಳೂರಿನಲ್ಲಿ ಮನೆಕೆಲಸಗಾರ್ತಿಯಾಗಿ ಆಕೆಯ ಕೆಲಸವು ಸ್ಥಗಿತಗೊಂಡಿತ್ತು. ಇದರೊಂದಿಗೆ ಆಕೆಯ 7,000 ರೂ. ಗಳ ಆದಾಯ ಮತ್ತು ಅದರಲ್ಲಿ ಅವಳು ಮನೆಗೆ ಪ್ರತಿ ತಿಂಗಳು ಕಳಿಸುತ್ತಿದ್ದ ಒಂದು ಭಾಗವೂ ಸಹ ನಿಂತುಹೋಯಿತು.
ಶಾಸ್ತಿಯ ತಂದೆ, 44 ವರ್ಷದ ಧನಂಜಯ್ಭುನಿಯಾ, ಇಲ್ಲಿನ ಹಳ್ಳಿಗಳಲ್ಲಿರುವ ಅನೇಕರಂತೆ ಸೀತಾರಾಂಪುರದ ಕರಾವಳಿಯ ಸಮೀಪವಿರುವ ನಯಾಚಾರ್ ದ್ವೀಪದಲ್ಲಿಮೀನುಗಾರರಾಗಿ ಕೆಲಸ ಮಾಡುತ್ತಾರೆ. ಅವರುಮೀನು ಮತ್ತು ಏಡಿಗಳನ್ನು ಬರಿಗೈಯಲ್ಲಿಅಥವಾ ಕೆಲವೊಮ್ಮೆ ಸಣ್ಣ ಬಲೆಗಳನ್ನು ಬಳಸಿಹಿಡಿದು, ಹತ್ತಿರದ ಮಾರುಕಟ್ಟೆಗಳಲ್ಲಿ ಮಾರಾಟಮಾಡುತ್ತಾರೆ ಮತ್ತು ಪ್ರತಿ 10-15 ದಿನಗಳಿಗೊಮ್ಮೆಮನೆಗೆ ಹಿಂತಿರುಗುತ್ತಾರೆ.
ಅವರ ಮಣ್ಣು ಮತ್ತು ಹುಲ್ಲಿನ ಗುಡಿಸಲಿನಲ್ಲಿ ಧನಂಜಯ್ ಅವರತಾಯಿ ಮಹಾರಾಣಿ, ಅವರ ಹೆಣ್ಣುಮಕ್ಕಳಾದ 21 ವರ್ಷದ ಜಂಜಲಿ ಮತ್ತು 18 ವರ್ಷದಶಾಸ್ತಿ ಮತ್ತು 14 ವರ್ಷದ ಮಗಸುಬ್ರತಾ ವಾಸಿಸುತ್ತಿದ್ದಾರೆ. ಸುಬ್ರತಾ ಜನಿಸಿದ ಕೆಲವುತಿಂಗಳ ನಂತರ ಅವರ ಪತ್ನಿನಿಧನರಾದರು. "ನಮಗೆ ದ್ವೀಪದಲ್ಲಿ ಮೊದಲಿನಂತೆಮೀನು ಮತ್ತು ಏಡಿಗಳು ಸಿಗುತ್ತಿಲ್ಲ, [ವರ್ಷಗಳಲ್ಲಿ] ನಮ್ಮ ಆದಾಯವು ಬಹಳಕಡಿಮೆಯಾಗಿದೆ" ಎಂದು ಧನಂಜಯ್ ಹೇಳುತ್ತಾರೆ, ಅವರು ಈಗ ಪ್ರತಿತಿಂಗಳು 2,000 ರಿಂದ 3,000 ರೂ. ಗಳಿಸುತ್ತಾರೆ. "ನಾವುಬದುಕಲು ಮೀನು ಮತ್ತು ಏಡಿಗಳನ್ನುಹಿಡಿಯಬೇಕು. ಮಕ್ಕಳನ್ನು ಶಾಲೆಗೆ ಕಳುಹಿಸುವುದರಿಂದ ನಮಗೆ ಏನು ಸಿಗುತ್ತದೆ?"
ಶಾಸ್ತಿಯುಶಾಲೆಯನ್ನು ತೊರೆದಂತೆಯೇ ಇತರ ವಿದ್ಯಾರ್ಥಿಗಳೂ ಸಹಸುಂದರ್ಬನ್ಸ್ನ ತರಗತಿಗಳಿಂದ ವೇಗವಾಗಿ ಕಣ್ಮರೆಯಾಗುತ್ತಿದ್ದಾರೆ. ಲವಣಯುಕ್ತಮಣ್ಣು ಕೃಷಿಯನ್ನು ಕಷ್ಟಕರವಾಗಿಸುತ್ತಿದ್ದು, ಅಗಲಗೊಳ್ಳುತ್ತಿರುವನದಿಗಳು ಮತ್ತು ಮರುಕಳಿಸುವ ಚಂಡಮಾರುತಗಳುಡೆಲ್ಟಾದಲ್ಲಿ ತಮ್ಮ ಮನೆಗಳನ್ನು ಧ್ವಂಸಗೊಳಿಸುತ್ತವೆ. ಇದರಿಂದಾಗಿ ಈ ಪ್ರದೇಶದಹಳ್ಳಿಗಳಿಂದ ಅನೇಕರು ಜೀವನ ಸಾಗಿಸಲುವಲಸೆ ಹೋಗುತ್ತಾರೆ. ಹಲವು ಬಾರಿ, ತಲೆಮಾರಿನಲ್ಲಿಮೊದಲನೆಬಾರಿ ಕಲಿಯುವ ಮಕ್ಕಳೂ ಸಹ 13 ಅಥವಾ 14 ನೇ ವಯಸ್ಸಿಗೆಕೆಲಸ ಹುಡುಕಲು ವಲಸೆ ಹೋಗುಬೇಕಾಗುತ್ತದೆ. ಅವರು ಮತ್ತೆ ಶಾಲೆಗೆ ಮರಳುವುದಿಲ್ಲ.

























