“54ರ ವಯಸ್ಸಿನ ದಿನಗೂಲಿ ಕಾರ್ಮಿಕರಾದ ಇವರು, ನನಗೆ ಒಂಬತ್ತು ವರ್ಷಗಳು ತುಂಬುವ ಮೊದಲಿನಿಂದಲೂ ಅಂದರೆ, ನಾನು ಹುಡುಗಿಯಾಗಿದ್ದಾಗಿನಿಂದಲೂ ಈ ಕೆಲಸವನ್ನು (ಕೃಷಿ) ಮಾಡುತ್ತಿದ್ದೇನೆ ಎಂದು ತಿಳಿಸಿದರು. ಸುಮನ್ ಎಂದಿಗೂ ಶಾಲೆಗೆ ಹೋಗಲಿಲ್ಲ. ತಂದೆಯ ಮರಣಾನಂತರ ತನ್ನ ಮಾಮನ (ತಾಯಿಯ ಸೋದರ) ಜಮೀನಿನಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು.
“ಇಂದಿರಾ ಗಾಂಧಿಯವರು ನಿಧನರಾದ ವರ್ಷದಲ್ಲಿ [1984] ನನ್ನ ವಿವಾಹವಾಯಿತು. ನನ್ನ ವಯಸ್ಸು ಈಗ ನೆನಪಿಗೆ ಬರುತ್ತಿಲ್ಲ. 16-20 ವರ್ಷದವಳಿರಬಹುದು” ಎಂದರಾಕೆ. ಬಂದು ಸಾಂಬ್ರೆ ಅವರನ್ನು ವಿವಾಹವಾದ ನಂತರ ಅವರೊಂದಿಗೆ ಕಟ್ಟಡ ನಿರ್ಮಾಣ ಕಾರ್ಮಿಕರಾಗಿ ದುಡಿಯತೊಡಗಿದರು. “ನಾನು ಗರ್ಭಿಣಿಯಾಗಿದ್ದಾಗಲೂ ದುಡಿಯುತ್ತಿದ್ದೆ” ಎಂದು ಅವರು ತಿಳಿಸಿದರು.
ಈಕೆಯ ಪತಿಯು ಐದು ವರ್ಷಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಾಗ, ಕಟ್ಟಡ ನಿರ್ಮಾಣದ ಕೆಲಸವನ್ನು ತೊರೆದು, ಕೃಷಿಯ ಕೆಲಸದಲ್ಲಿ ತೊಡಗಿದರು. ಇವರ ಐದು ಮಕ್ಕಳು – 15ರ ವಯಸ್ಸಿನ ನಮ್ರತ, 17ರ ಕವಿತ, 12ರ ಗುರು, 22ರ ತುಲ್ಶ ಹಾಗೂ 27ರ ಸಿಲ್ಮಿನ ಇವರೊಂದಿಗಿದ್ದಾರೆ. ಸುಮನ್ ಅವರ ತಾಯಿ, ನಂದಾ ಸಹ ಪಾಲ್ಘರ್ ಜಿಲ್ಲೆಯ ಉಮೆಲ ಗ್ರಾಮದಲ್ಲಿ ಇವರೊಂದಿಗೆ ವಾಸಿಸುತ್ತಿದ್ದಾರೆ.
“ನನಗೆ ದುಡಿಯದೇ ಬೇರೆ ವಿಧಿಯಿಲ್ಲ. ಹೀಗಾಗಿ ದುಡಿಯುತ್ತಿದ್ದೇನೆ” ಎನ್ನುತ್ತಾರವರು. ಈ ಪರಿವಾರವು ಮಲ್ಹರ್ ಕೋಲಿ ಸುಮುದಾಯಕ್ಕೆ ಸೇರಿದೆ. (ಮಹಾರಾಷ್ಟ್ರದಲ್ಲಿ ಹಿಂದುಳಿದ ಬುಡಕಟ್ಟಿನಡಿಯಲ್ಲಿ ಇದನ್ನು ಪಟ್ಟಿಮಾಡಲಾಗಿದೆ).














