ಪಿಸ್ಡಾ ಅವರು ತಯಾರು ಮಾಡಿರುವ ಅರ್ಜಿಗಳ ಹೊರತಾಗಿಯೂ, ರೈತರಿಗೆ ಸಹಾಯ ಮಾಡುವ ಸರ್ಕಾರದ ಪ್ರಯತ್ನಗಳು ಹೆಚ್ಚಾಗಿ ಕಾಗದದ ಮೇಲೆಯೇ ಉಳಿಯುತ್ತವೆ.
"ಸರ್ಕಾರದ ನೀತಿಯಂತೆ ಆಡಳಿತವು ಪ್ರತಿಯೊಬ್ಬ ಅರ್ಹ ರೈತರಿಗೆ ಸಾಕಷ್ಟು ಹೆಚ್ಚಿನ ಪರಿಹಾರವನ್ನು ವಿತರಿಸಿದೆ. ಕೆಲವು ಜಿಲ್ಲೆಗಳಿಂದ ನಮಗೆ ದೂರುಗಳು ಬಂದಿವೆ. ಈ ಸಮಸ್ಯೆಗಳನ್ನು ಪರಿಹರಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ" ಎಂದು ಅವರು ಹೇಳುತ್ತಾರೆ.
ಆದರೆ, ಪರಿಹಾರ ನೀತಿಯಲ್ಲೇ ಸಮಸ್ಯೆ ಇದ್ದರೆ?
ಈಗಾಗಲೇ ಬೆಳೆ ಕಟಾವು ಆಗಿರುವುದರಿಂದ ಖಾಲಿ ಜಾಗದಿಂದ ಹಾನಿಯನ್ನು ಕಂಡುಹಿಡಿಯಲಾಗುವುದಿಲ್ಲ. ಅಧಿಕಾರಿಗಳು ಮಳೆಯ ಮಾಹಿತಿ ಮತ್ತು ಭತ್ತದ ಬೆಳೆ ಮಾರಾಟದ ಮೂಲಕ ನಷ್ಟವನ್ನು ಅಂದಾಜು ಮಾಡಿದ್ದಾರೆ.
ರಾಜ್ಯ ಕೃಷಿ ಸಚಿವ ಬ್ರಿಜ್ಮೋಹನ್ ಅಗರ್ವಾಲ್ ಪ್ರಕಾರ, "ಪರಿಹಾರ ಧನ ವಿತರಿಸುವ ಕಾರ್ಯವನ್ನು ಅಧಿಕಾರಿಗಳಿಗೆ ವಹಿಸಲಾಗಿದೆ. ಸ್ವಲ್ಪ ಮಟ್ಟಿಗೆ ದೂರುಗಳು ಸಹಜ. ಆದರೆ ರೈತರಲ್ಲಿ ವ್ಯಾಪಕ ಕೋಪವಿದೆ ಎಂದು ಹೇಳುವುದು ತಪ್ಪು."
ಆಮ್ ಆದ್ಮಿ ಪಕ್ಷದ ರಾಜ್ಯ ಸಂಚಾಲಕ ಮತ್ತು ಕೃಷಿ ತಜ್ಞ ಸಂಕೇತ್ ಠಾಕೂರ್ ಈ ಅರ್ಜಿಗಳನ್ನು ವಿರೋಧಿಸಿದ್ದಾರೆ.
"ಸರ್ಕಾರವು ಕೇವಲ ರೈತರಿಗೆ ಸಹಾಯ ಮಾಡುವ ನಾಟಕವಾಡುತ್ತಿದೆ. ಇದು ಅಧಿಕಾರಶಾಹಿಗೆ ಹಣವನ್ನು ರವಾನಿಸಿದೆ. ಪರಿಹಾರದ ಹಣವು ಮೊದಲ ಸ್ಥಾನದಲ್ಲಿ ಸಾಕಾಗುವುದಿಲ್ಲ ಮತ್ತು ವಿತರಣೆಯಲ್ಲಿ ದೊಡ್ಡ ಪ್ರಮಾಣದ ಅಕ್ರಮಗಳು" ಎಂದು ಅವರು ಆರೋಪಿಸಿದರು.
"ಪರಿಸ್ಥಿತಿ ಸುಧಾರಿಸದಿದ್ದರೆ ಇನ್ನೂ ಅನೇಕ ರೈತರು ಆತ್ಮಹತ್ಯೆಗೆ ಒಳಗಾಗಬೇಕಾಗುತ್ತದೆ. ಅವರನ್ನು ಕೇವಲ MNREGA ಯೋಜನೆ ಒಂದರ ಕಾರಣ ಕೊಟ್ಟು ಕೈ ಬಿಡಲಾಗುವುದಿಲ್ಲ" ಎಂದು ಅವರು ಹೇಳುತ್ತಾರೆ.
ಈ ಕಥೆಯ ಮೂಲ ಆವೃತ್ತಿಯನ್ನು ಫೆಬ್ರವರಿ 29, 2016 ರಂದು ರಾಜಸ್ಥಾನ ಪತ್ರಿಕಾ ರಾಯ್ಪುರ ಆವೃತ್ತಿಯಲ್ಲಿ ಪ್ರಕಟಿಸಲಾಗಿದೆ.
ಅನುವಾದ: ಅಶ್ವಿನಿ ಬಿ ವಡ್ಡಿನಗದ್ದೆ